Get Updates
Get notified of breaking news, exclusive insights, and must-see stories!

BMC Election 2026: ರಾಹುಲ್ ಗಾಂಧಿಗೆ ಸೋಲಿನ ಭೀತಿ: ಪ್ರಜಾಪ್ರಭುತ್ವ ಅಸ್ತ್ರ ಬಳಕೆ

ನವದೆಹಲಿ: ಮಹಾರಾಷ್ಟ್ರದ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ಸಿಗಲಿದೆ ಎಂಬ ಎಕ್ಸಿಟ್ ಪೋಲ್ 2026 ಫಲಿತಾಂಶ ಬೆನ್ನಲ್ಲೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಮತ ಕಳ್ಳತನ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಚುನಾವಣಾ ಆಯೋಗದ ಮೇಲೆ ಗರಂ ಆಗಿರುವ ಅವರು, ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು.

ಬೃಹನ್ ಮುಂಬೈ ಮಹನಗರ ಪಾಲಿಕೆ ಸೇರಿ 28 ನಾಗರಿಕ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಜನವರಿ 16ರಂದು ಶುಕ್ರವಾರ ಹೊರ ಬೀಳಲಿದೆ. ನೆನ್ನೆ ಗುರುವಾರ ಚುನಾವಣೆ ನಡೆದಿದ್ದು, ಮತದಾನ ಮಾಡುವ ಮತದಾರರಿಗೆ ಕೈಗೆ ಹಾಕುವ ಶಾಹಿ ಗುರುತು ಅಳಿಸಬಹುದಾಗಿದೆ ಎಂಬ ಆರೋಪಗಳು ಕೇಳಿ ಬಂದವು. ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳನ್ನು ರಾಹುಲ್ ಗಾಂಧಿ ಅವರು ಎಕ್ಸ್ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Rahul Gandhi Slams Election Commission Over Vote Theft Allegations in BMC Polls 2026

ಚುನಾವಣೆ ಪಾರದರ್ಶಕತೆ, ಚುನಾವಣೆ ಆಯೋಗದ ವೈಫಲ್ಯ ಹೀಗೆ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಚುನಾವಣೆ ಆಯೋಗ ಅಳಿಸಬಹುದಾದ ಶಾಹಿಯನ್ನು ಬಿಎಂಸಿ ಚುನಾವಣೆಯಲ್ಲಿ ಬಳಸಿದೆ. "ವೋಟ್ ಚೋರಿ" ಒಂದು ರಾಷ್ಟ್ರವಿರೋಧಿ ಕೃತ್ಯವಾಗಿದೆ. ಚುನಾವಣೆ ಆಯೋಗದ ಈ ಕೆಲಸವು ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕುಸಿಯಲು ಪ್ರಮುಖ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಈ ಚುನಾವಣೆ ಹೊತ್ತಿನಲ್ಲಿ ಕೆಲವು ನಾಯಕರು ಅಳಿಸಬಹುದಾದ ಶಾಹಿ ಕುರಿತು ಆರೋಪಿಸಿದ್ದರು. ಸದರಿ ಪಾಲಿಕೆ ಚುನಾವಣೆಯಲ್ಲಿ ಅಳಿಸಬಹುದಾದ ಶಾಯಿಯನ್ನು ಬಳಸಲಾಗಿದೆ ಎಂಬ ದೂರುಗಳ ಬಂದಿವೆ. ಹೀಗಾಗಿ ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ (SEC) ಗುರುವಾರ ತನಿಖೆಗೆ ಆದೇಶಿಸಿತು. ಶಿವಸೇನೆ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ ಈ ವಿಷಯ ಪ್ರಸ್ತಾಪಿಸಿ "ಗೊಂದಲ ಸೃಷ್ಟಿಸುವವರ" ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಚುನಾವಣಾ ಆಯುಕ್ತರ ಅಮಾನತಿಗೆ ಆಗ್ರಹ

ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮೋರೆ ಅವರು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದೊಂದಿಗೆ "ಬಹಿರಂಗವಾಗಿ ಒಲವು ತೋರುತ್ತಿದ್ದಾರೆ" ಎಂದು ಉದ್ಧವ್ ಠಾಕ್ರೆ ನೇರ ಆರೋಪ ಮಾಡಿದರು. ಇಂತಹ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ತನಿಖೆಗೆ ಚುನಾವಣೆ ಆಯುಕ್ತರ ಘೋಷಣೆ

ಇದೆಲ್ಲ ಆರೋಪ, ಗೊಂದಲಗಳ ಬಳಿಕ ವಾಘ್ಮೋರೆ ಅವರು ಅಳಿಸಬಹುದಾದ ಚುನಾವಣಾ ಶಾಯಿಯ ಕುರಿತ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದೆಂದು ತಿಳಿಸಿದರು. ಈ ಶಾಹಿಯನ್ನು ಅಸಿಟೋನ್ ಅಥವಾ ಉಗುರು ಬಣ್ಣವು ಅದನ್ನು ತೆಗೆದು ಹಾಕಬಹುದು ಎಂಬ ಆರೋಪಗಳನ್ನು ಅವರು ನಿರಾಕರಿಸಿದರು. ಶಾಯಿಯನ್ನು ತೆಗೆದುಹಾಕಲು ಅಥವಾ ಮತದಾರರಲ್ಲಿ ಗೊಂದಲ ಉಂಟು ಮಾಡಿದರೆ ಯಾರೇ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

ಬಿಎಂಸಿ ಚುನಾವಣೆಯಲ್ಲಿ ಒಟ್ಟು 227 ಸೀಟುಗಳಲ್ಲಿ 131-151 ಸ್ಥಾನಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲ್ಲುವ ಸಾಧ್ಯತೆ ಇದೆ ಎಂದ ಬಳಿಕ ರಾಹುಲ್ ಗಾಂಧಿ ಅವರು ಆರೋಪ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. ಚುನಾವಣೆಯ ಮತ ಎಣಿಕೆ ಇಂದು ಶುಕ್ರವಾರ ಆರಂಭವಾಗಿದೆ. ಇಂದೇ ಅಧಿಕೃತ ಫಲಿತಾಂಶ ಬೀಳಲಿದೆ.

Take a Poll

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+