Get Updates
Get notified of breaking news, exclusive insights, and must-see stories!

ರಾಹುಲ್ ಗಾಂಧಿ ಆಧುನಿಕ ಜಿನ್ನಾ; ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಉತ್ತರಾಖಂಡ, ಫೆಬ್ರವರಿ 12: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯನ್ನು "ಆಧುನಿಕ ಜಿನ್ನಾ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜರೆದಿದ್ದಾರೆ. ಉತ್ತರಾಖಂಡ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರು.

ಪಾಕಿಸ್ತಾನದ ಭೂಪ್ರದೇಶದಲ್ಲಿ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗಳ ಬಗ್ಗೆ ರಾಹುಲ್ ಗಾಂಧಿ ದಾಖಲೆ ಕೇಳುತ್ತಾರೆ. ನಾವು ಎಂದಾದರೂ ನೀವು ನಿಜವಾಗಿಯೂ ರಾಜೀವ್ ಗಾಂಧಿಯವರ ಮಗನಾ ಅಥವಾ ಅಲ್ಲವೇ ಎಂದು ನಾವು ನಿಮ್ಮನ್ನು ಎಂದಾದರೂ ಕೇಳಿದ್ದೇವೆಯೇ? ಎಂದು ಅಸ್ಸಾಂ ಮುಖ್ಯಮಂತ್ರಿ ಕಿಡಿಕಾರಿದರು.

ರಾಹುಲ್ ಗಾಂಧಿಯವರ ಭಾಷೆ ಮತ್ತು ವಾಕ್ಚಾತುರ್ಯವು 1947ರ ಮೊಹಮ್ಮದ್ ಅಲಿ ಜಿನ್ನಾ ಅವರಂತೆಯೇ ಇದೆ. "ಒಂದು ರೀತಿಯಲ್ಲಿ, ರಾಹುಲ್ ಗಾಂಧಿ ಆಧುನಿಕ- ದಿನದ ಜಿನ್ನಾ ಎಂದು ವಾಗ್ದಾಳಿ ನಡೆದಿರು.

Rahul Gandhi is a modern Jinnah Says Assam CM Himanta Biswa Sharma

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾರ ಕೀಳುಮಟ್ಟದ ಹೇಳಿಕೆ ರಾಜ್ಯದ ಗೌರವಕ್ಕೆ ಕಳಂಕ ತಂದಿದೆ ಎಂದು ಆರೋಪಿಸಿ, ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಅಸ್ಸಾಂ ಕಾಂಗ್ರೆಸ್ ಕಾರ್ಯಕರ್ತರು ಗುವಾಹಟಿಯಲ್ಲಿ ಪ್ರತಿಭಟನೆ ನಡೆಸಿದರು.

ಯೋಧರ ನೋವು ತಿಳಿದಿಲ್ಲ
ರಾಹುಲ್ ಗಾಂಧಿ ವಿರುದ್ಧದ ಹೇಳಿಕೆಗೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಈ ಕುರಿತು ಸಮರ್ಥನೆ ನೀಡಿದ ಹಿಮಂತ ಬಿಸ್ವಾ ಶರ್ಮಾ, ನಮ್ಮ ದೇಶದ ಯೋಧರು ಶತ್ರು ಪ್ರದೇಶದಲ್ಲಿ ಯಾವುದೇ ಕಾರ್ಯತಂತ್ರ ರೂಪಿಸುವ ಮೊದಲು ಒಂದು ತಿಂಗಳ ಕಾಲ ಈ ಸಂಬಂಧ ಯೋಜನೆ ರೂಪಿಸುತ್ತಾರೆ. ಕಾರ್ಯತಂತ್ರದ ಕ್ರಮಗಳು ಮತ್ತು ಕಾರ್ಯಾಚರಣೆ ಕುರಿತು ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸುತ್ತಾರೆ. ಇದಾದ ಬಳಿಕವೇ ಸೇನಾ ಕಾರ್ಯಚಾರಣೆ ಕುರಿತು ನಮಗೆ ತಿಳಿಯುತ್ತದೆ. ಈ ಬಗ್ಗೆ ಈಗ ಅವರು ಪುರಾವೆ ಕೇಳುತ್ತಿದ್ದಾರೆ. ಈ ಅವರ ಹೇಳಿಕೆಯಿಂದ ಯೋಧರು ಅನುಭವಿಸುವ ನೋವು ಎಷ್ಟಿರಬೇಕು ಎಂದು ರಾಗಾ ಯೋಚಿಸಬೇಕು ಎಂದರು.

Rahul Gandhi is a modern Jinnah Says Assam CM Himanta Biswa Sharma

ಶುಕ್ರವಾರ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್​​ ಕರ್ಮ ತೋರಿಸಲು ಪ್ರಯತ್ನಿಸಿದ್ದಾರೆ. ಎಲ್ಲರೂ ಇದನ್ನು ನೋಡಿದ್ದಾರೆ ಎಂದು ನಾನು ಅದನ್ನು ಭಾವಿಸುತ್ತೇನೆ. ಈ ಸಂಬಂಧ ಟ್ವಿಟ್ಟರ್​ನಲ್ಲೂ ನಾನು ದಾಳಿ ಮಾಡಿದ್ದೇನೆ. ನನ್ನ ಉದ್ದೇಶವನ್ನು ಸಾಧಿಸಲಾಗಿದೆ. ಅವರು ಈಗ ಸೇನೆಯಿಂದ ಪುರಾವೆ ಕೇಳುವುದಿಲ್ಲ ಎಂದಿದ್ದಾರೆ.

ರಾಹುಲ್​ ಮೇಲೆ ಜಿನ್ನಾ ಭೂತ
ಸಂಸತ್​ನಲ್ಲೂ ರಾಹುಲ್ ಗಾಂಧಿ ಭಾಷಣ ಕುರಿತು ಟೀಕಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಜಿನ್ನಾ ಭೂತವು ಅವರ ದೇಹವನ್ನು ಪ್ರವೇಶಿಸಿದೆ ಎಂದು ತೋರುತ್ತದೆ ಎಂದು ಟೀಕಿಸಿದರು. ಅವರಿಗೆ ಭಾರತವೆಂದರೆ ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ಮಾತ್ರ. ಕಳೆದ ಹತ್ತು ದಿನಗಳಿಂದ ಅವರು ಹೇಳುತ್ತಿರುವುದನ್ನು ಗಮನಿಸುತ್ತಿದ್ದೇನೆ. ಒಮ್ಮೆ ಅವರು ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ಹೇಳಿದರು. ಇನ್ನೊಂದು ಬಾರಿ ಭಾರತ ಎಂದರೆ ಗುಜರಾತ್‌ನಿಂದ ಬಂಗಾಳದವರೆಗೆ ಎನ್ನುತ್ತಾರೆ. ಹಾಗಾಗಿ ರಾಹುಲ್ ಗಾಂಧಿಯಲ್ಲಿ ಜಿನ್ನಾ ದೆವ್ವ ಪ್ರವೇಶಿಸಿದೆ ಎಂದು ಟೀಕಿಸಿದರು.

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ವಾಗ್ದಾಳಿ
ಇನ್ನು ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಸಿಎಂ ಯೋಗಿ ಆದಿತ್ಯನಾಥ್​ ಕೂಡ ರಾಹುಲ್​​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಯಾರ ಗುರುತು ಅನುಮಾನವೋ, ಅವರು ಈಗ ಹಿಂದೂ ಧರ್ಮದ ವ್ಯಾಖ್ಯಾನವನ್ನು ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಹಿಂದೂ ಧರ್ಮದ ವ್ಯಾಖ್ಯಾನವನ್ನು ನೀಡಿದ್ದು ನನಗೆ ಆಶ್ಚರ್ಯವಾಯಿತು. ಹಿಂದೂ ಎಂಬುದು ಕೋಮುವಾದಿ ಪದವಲ್ಲ. ಹಿಂದೂ ನಮ್ಮ ಸಾಂಸ್ಕೃತಿಕ ಅಸ್ಮಿತೆ. ದೇವಭೂಮಿಯಲ್ಲಿ ಯಾರಿಗಾದರೂ ಹಿಂದೂ ಎಂಬ ಪದದ ವ್ಯಾಖ್ಯಾನ ತಿಳಿದಿಲ್ಲದಿದ್ದರೆ, ಆ ಪಕ್ಷಕ್ಕೆ ಅಧಿಕಾರಕ್ಕೆ ಬರುವ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+