ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕಿರಣ್ ಬೇಡಿ ನೇಮಕ
ನವದೆಹಲಿ, ಮೇ 22: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾನುವಾರದಂದು ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದ್ದಾರೆ.
ಬಿಜೆಪಿ
ನಾಯಕಿ
ಕಿರಣ್
ಬೇಡಿ
ಅವರು
ಈಗ
ಉಪ
ರಾಜ್ಯಪಾಲೆಯಾಗಿ
ಕಾರ್ಯನಿರ್ವಹಿಸಲಿದ್ದಾರೆ.
ದೆಹಲಿಯ
ಮುಖ್ಯಮಂತ್ರಿ
ಅಭ್ಯರ್ಥಿಯಾಗಿ
ಬಿಜೆಪಿ
ಟಿಕೆಟ್
ಪಡೆದು
ವಿಧಾನಸಭೆಗೆ
ಸ್ಪರ್ಧಿಸಿದ್ದ
ಕಿರಣ್
ಬೇಡಿ
ಅವರು
ಸೋಲು
ಕಂಡಿದ್ದರು.
ಆಮ್
ಆದ್ಮಿ
ಪಕ್ಷದ
ಅರವಿಂದ್
ಕೇಜ್ರಿವಾಲ್
ಅವರು
ಜಯ
ಗಳಿಸಿ
ಸಿಎಂ
ಆಗಿ
ಅಧಿಕಾರವಹಿಸಿಕೊಂಡಿದ್ದು
ಈಗ
ಹಳೆ
ವಿಚಾರ.[ಸಮಸ್ತ
ಭಾರತೀಯರಿಗೆ
ಕಿರಣ್
ಬೇಡಿ
ಬಹಿರಂಗ
ಪತ್ರ]
1972ರಲ್ಲಿ
ದೇಶದ
ಮೊದಲ
ಐಪಿಎಸ್
ಮಹಿಳಾ
ಅಧಿಕಾರಿ
ಎನಿಸಿಕೊಂಡ
ಕಿರಣ್
ಬೇಡಿ
ಅವರು
35ವರ್ಷಗಳ
ಕಾಲ
ಕರ್ತವ್ಯ
ನಿರ್ವಹಿಸಿ
ನಂತರ
ಸಾಮಾಜಿಕ
ಕಳಕಳಿ
ಕಾರ್ಯಕ್ರಮ,
ಭ್ರಷ್ಟಾಚಾರ
ವಿರೋಧಿ
ಆಂದೋಲನಗಳಲ್ಲಿ
ಪಾಲ್ಗೊಂಡರು.
ನಂತರ
ಬಿಜೆಪಿ
ಸೇರಿ
ದೆಹಲಿ
ಅಸೆಂಬ್ಲಿಗೆ
ಸ್ಪರ್ಧಿಸಿದ್ದರು.
ಆದರೆ,
ಕೃಷ್ಣಾನಗರ
ಕ್ಷೇತ್ರದಲ್ಲಿ
ಕಿರಣ್
ಸೋಲು
ಕಂಡರು.
ಈಗ
ಹೊಸ
ಜವಾಬ್ದಾರಿಯನ್ನು
ಕಿರಣ್
ವಹಿಸಿಕೊಳ್ಳಲಿದ್ದಾರೆ.
@thekiranbedi on being appointed as Lt Governor of Puducherry pic.twitter.com/XSBbEASaBb
— NDTV (@ndtv) May 22, 2016
ಪುದುಚೇರಿ(ಈ ಹಿಂದಿನ ಪಾಂಡಿಚೇರಿ) ಯಲ್ಲಿ ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದು ಮೇ 19ರಂದು ಫಲಿತಾಂಶ ಹೊರ ಬಂದಿದೆ. ಕಾಂಗ್ರೆಸ್ 15 ಹಾಗೂ ಮೈತ್ರಿ ಪಕ್ಷ ಡಿಎಂಕೆ 2 ಸ್ಥಾನ ಗಳಿಸಿ 30 ಸ್ಥಾನಗಳ ಅಸೆಂಬ್ಲಿಯಲ್ಲಿ ಅಧಿಕಾರ ಸ್ಥಾಪಿಸಲು ಮುಂದಾಗಿವೆ.