ಕೊರೊನಾ ವಿರುದ್ಧ ಹೋರಾಟ; ಜನತಾ ಕರ್ಪ್ಯೂಗೆ ಪ್ರಧಾನಿ ಮೋದಿ ಕರೆ
ನವದೆಹಲಿ, ಮಾರ್ಚ್ 19:ತೀವ್ರ ಕುತೂಹಲ ಕೆರಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಭಾಷಣ ಮುಕ್ತಾಯವಾಗಿದೆ.
ದೇಶದಲ್ಲಿ ತೀವ್ರ ಆತಂಕ ಹುಟ್ಟಿಹಾಕಿರುವ ಕೊರೊನಾ ವೈರಸ್ ಸೋಂಕು ಹರಡದಂತೆ 130 ಕೋಟಿ ದೇಶವಾಸಿಗಳು ಸಂಯಮ ಹಾಗೂ ಸಂಕಲ್ಪ ಹೊಂದಬೇಕು ಎಂದು ಪ್ರಮುಖವಾಗಿ ಒತ್ತಿ ಹೇಳಿದ್ದಾರೆ.
ಕೊರೊನಾ ವೈರಸ್ ಬಗ್ಗೆ ವಿಜ್ಞಾನಿಗಳು ವೈದ್ಯರು ಹೇಳಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು. ಕೊರೊನಾ ವಿರುದ್ಧ ಯುದ್ದದ ರೀತಿ ಹೋರಾಡೋಣ. ವೈದ್ಯರನ್ನು ಸ್ಮರಿಸೋಣ. ವದಂತಿಗಳನ್ನು ನಂಬುವುದು ಬೇಡ ಎಂದಿದ್ದಾರೆ. ಅಲ್ಲದೇ ಸಾರ್ವಜನಿಕ ಸಂಪರ್ಕ ಕಡಿತಗೊಳಿಸೋಣ ಎಂದು ಕರೆ ನೀಡಿದ್ದಾರೆ.
ಅಲ್ಲದೇ ಪ್ರಮುಖವಾಗಿ ಕೊರೊನಾ ವಿರುದ್ಧ ಹೋರಾಟದ ರೂಪವಾಗಿ ಭಾನುವಾರ ಒಂದು ದಿನ ಅಂದರೆ ಮಾರ್ಚ್ 22 ರಂದು ಬೆಳಿಗ್ಗೆ 8 ರಿಂದ ರಾತ್ರಿ 9 ರವೆರೆಗೆ ಜನತಾ ಕರ್ಪ್ಯೂ ಆಚರಿಸೋಣ ಎಂದು ಮೋದಿ ಕರೆ ನೀಡಿದ್ದಾರೆ. ಯಾರೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮೋದಿ ಅಭಯ ನೀಡಿದ್ದಾರೆ
ಮಾಹಿತಿ ಪಡೆಯಲು ಪೇಜ್ ರಿಪ್ರೇಶ್ ಮಾಡಿ
इस रविवार,
— PMO India (@PMOIndia) March 19, 2020
यानि
22 मार्च को,
सुबह 7 बजे से रात
9 बजे तक, सभी देशवासियों को,
जनता-कर्फ्यू का पालन करना है: PM @narendramodi #IndiaFightsCorona
ಭಾರತದಲ್ಲಿ ಇದುವರೆಗೆ ಒಟ್ಟು 173 ಜನಕ್ಕೆ ಕೊರೊನಾ ವೈರಸ್ ಸೋಂಕು (ಕೋವಿಡ್ 19) ತಗುಲಿರುವುದು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ವಿಷಯವನ್ನು ದೃಢಪಡಿಸಿದೆ. 174 ರಲ್ಲಿ ಸೋಂಕಿಗೆ ತುತ್ತಾಗಿ ಮೃತಪಟ್ಟ ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಹಾಗೂ ದೆಹಲಿಯ ತಲಾ ಒಬ್ಬರು ಹಾಗೂ 25 ಜನ ವಿದೇಶಿ ಸೋಂಕಿತರೂ ಸೇರಿದ್ದಾರೆ. ಸೋಂಕಿತರ ಸಂಪರ್ಕದಲ್ಲಿ 5700 ಜನ ಇದ್ದರು. ಅವರೆಲ್ಲರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
Setting a great example, Chief Minister!
— Narendra Modi (@narendramodi) March 18, 2020
I hope others also emulate Naveen Babu. We all can do our bit in preventing the spread of COVID-19. @Naveen_Odisha #IndiaFightsCorona https://t.co/N3LeLfxdAC