ಚಿರತೆ ಬಗ್ಗೆ ಸುಳ್ಳು ಮಾಹಿತಿ: ಮೋದಿ ಸುಳ್ಳುಗಾರ ಎಂದ ಜೈರಾಮ್ ರಮೇಶ್

ನವದೆಹಲಿ, ಸೆ.18: ದೊಡ್ಡ ಬೆಕ್ಕುಗಳು ಅಂದರೆ ಚಿರತೆಗಳು ದೇಶದಲ್ಲಿ ನಾಶವಾಗಿವೆ ಎಂದು ಘೋಷಿಸಿದ ನಂತರ ಚಿರತೆಗಳನ್ನು ಭಾರತಕ್ಕೆ ಮರು ಪರಿಚಯಿಸಲು ದಶಕಗಳಿಂದ ಯಾವುದೇ ರಚನಾತ್ಮಕ ಪ್ರಯತ್ನಗಳು ನಡೆದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಭಾನುವಾರ ವಾಗ್ದಾಳಿ ನಡೆಸಿದೆ.

2009 ರಲ್ಲಿ 'ಪ್ರಾಜೆಕ್ಟ್ ಚೀತಾ' ಆರಂಭಿಸಿದ ಪತ್ರವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿಂದಿನ ಸರ್ಕಾರಗಳು ಚಿರತೆಗಳನ್ನು ಮರು ಪರಿಚಯಿಸಲು ಪ್ರಯತ್ನಗಳನ್ನು ಮಾಡಲಿಲ್ಲ ಎಂದು ಟೀಕಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ "ರೋಗಗ್ರಸ್ತ ಸುಳ್ಳುಗಾರ" ಎಂದು ಆರೋಪಿಸಿದ್ದಾರೆ.

ಏಳು ದಶಕಗಳ ಹಿಂದೆ ಚಿರತೆಗಳು ದೇಶದಿಂದ ನಿರ್ನಾಮವಾದ ನಂತರ ಭಾರತದಲ್ಲಿ ಮತ್ತೆ ಅವುಗಳನ್ನು ಪರಿಚಯಿಸಲು ಯಾವುದೇ ರಚನಾತ್ಮಕ ಪ್ರಯತ್ನಗಳನ್ನು ಮಾಡಿಲ್ಲ ಎಂದು ಪ್ರಧಾನಿ ಮೋದಿ ಶನಿವಾರ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

'ಪ್ರಾಜೆಕ್ಟ್ ಚೀತಾ' ಆರಂಭಿಸಿದ ಪತ್ರವನ್ನು ಹಂಚಿಕೊಂಡ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಪಕ್ಷದ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್, ಪ್ರಧಾನಿ "ರೋಗಗ್ರಸ್ತ ಸುಳ್ಳುಗಾರ" ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ಪ್ರಾಜೆಕ್ಟ್ ಚೀತಾ ಪ್ರಾರಂಭ

ಕಾಂಗ್ರೆಸ್ ಅವಧಿಯಲ್ಲಿ ಪ್ರಾಜೆಕ್ಟ್ ಚೀತಾ ಪ್ರಾರಂಭ

2009 ರಲ್ಲಿಯೇ ಚಿರತೆಗಳನ್ನು ದೇಶಕ್ಕೆ ಕರೆ ತರುವ ಕೆಲಸ ನಡೆಯುತ್ತಿತ್ತು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ. ಮೋದಿಯವರು ಸುಳ್ಳು ಹೇಳಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಇದು 2009 ರಲ್ಲಿ ಪ್ರಾಜೆಕ್ಟ್ ಚೀತಾವನ್ನು ಪ್ರಾರಂಭಿಸಿದ ಪತ್ರ. ನಮ್ಮ ಪ್ರಧಾನಿ ಒಬ್ಬ ರೋಗಶಾಸ್ತ್ರೀಯ ಸುಳ್ಳುಗಾರ. ಭಾರತ್ ಜೋಡೋ ಯಾತ್ರೆಯಲ್ಲಿ ನನ್ನ ಆಸಕ್ತಿಯಿಂದಾಗಿ ನಾನು ನಿನ್ನೆ ಈ ಪತ್ರವನ್ನು ಹಾಕಲು ಸಾಧ್ಯವಾಗಲಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

2009ರಲ್ಲಿ ಪರಿಸರ, ಅರಣ್ಯ ಖಾತೆ ಹೊಂದಿದ್ದ ಜೈರಾಮ್ ರಮೇಶ್

2009ರಲ್ಲಿ ಪರಿಸರ, ಅರಣ್ಯ ಖಾತೆ ಹೊಂದಿದ್ದ ಜೈರಾಮ್ ರಮೇಶ್

ಜೈರಾಮ್ ರಮೇಶ್ ಅವರು ಹಂಚಿಕೊಂಡ ಪತ್ರವು 2009 ರ ಹಿಂದಿನದು. ಪತ್ರದಲ್ಲಿ, ಯುಪಿಎ-II ಸರ್ಕಾರದಲ್ಲಿ ಪರಿಸರ ಮತ್ತು ಅರಣ್ಯ ಖಾತೆಗಳನ್ನು ಹೊಂದಿದ್ದ ರಮೇಶ್, ಭಾರತದ ವನ್ಯಜೀವಿ ಟ್ರಸ್ಟ್‌ನ ಕಾರ್ಯನಿರ್ವಾಹಕರನ್ನು ಚಿರತೆಗಳನ್ನು ಮರುಪರಿಚಯಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.

ಚೀತಾವನ್ನು ಮರುಪರಿಚಯಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಲು ಮತ್ತು ವಿವಿಧ ಸಂಭಾವ್ಯ ತಾಣಗಳ ವಿವರವಾದ ವಿಶ್ಲೇಷಣೆಯನ್ನು ತಿಳಿಸಲು ವನ್ಯಜೀವಿ ಟ್ರಸ್ಟ್‌ನ ಕಾರ್ಯನಿರ್ವಾಹಕ ರಂಜಿತ್‌ಸಿಂಗ್ ಅವರಿಗೆ ಬರೆದ ಪತ್ರವಾಗಿದೆ.

ವೇಗಕ್ಕೆ ಹೆಸರುವಾಸಿಯಾಗಿದ್ದ ಚಿರತೆಗಳು

ವೇಗಕ್ಕೆ ಹೆಸರುವಾಸಿಯಾಗಿದ್ದ ಚಿರತೆಗಳು

ಮಿಂಚಿನ ವೇಗಕ್ಕೆ ಹೆಸರುವಾಸಿಯಾದ ಚಿರತೆಗಳು 1940 ರ ದಶಕದಲ್ಲಿ ದೇಶದಿಂದ ನಾಶವಾದವು. ಪ್ರಾಥಮಿಕವಾಗಿ ಬೇಟೆಯಾಡುವುದರಿಂದಲೇ ಇವುಗಳು ನಾಶವಾಗಿದ್ದವು.

ಭಾರತವು ಹಿಂದೆ ಏಷ್ಯಾಟಿಕ್ ಚಿರತೆಗಳಿಗೆ ನೆಲೆಯಾಗಿತ್ತು, ಆದರೆ 1952ರ ವೇಳೆಗೆ ಈ ಪ್ರಭೇದವು ದೇಶೀಯವಾಗಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಯಿತು. ಇವುಗಳನ್ನು ಮತ್ತೆ ದೇಶಕ್ಕೆ ಕರೆ ತರುವ ಪ್ರಯತ್ನ 2009ರಲ್ಲಿಯೇ ಶುರುವಾಗಿತ್ತು.

ಭಾರತದಲ್ಲಿ ಚಿರತೆಗಳ ಸಂಖ್ಯೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದ ಯೋಜನೆಯಡಿ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದ ಕ್ವಾರಂಟೈನ್ ಆವರಣಕ್ಕೆ ನಮೀಬಿಯಾದಿಂದ ತಂದ ಎಂಟು ಚಿರತೆಗಳನ್ನು ಪ್ರಧಾನಿ ಮೋದಿ ಶನಿವಾರ ಬಿಡುಗಡೆ ಮಾಡಿದರು.

2020ರಲ್ಲಿ ಯೋಜನೆಯ ನಿಷೇಧ ತೆರವು

2020ರಲ್ಲಿ ಯೋಜನೆಯ ನಿಷೇಧ ತೆರವು

ಚೀತಾಗಳನ್ನು ಭಾರತಕ್ಕೆ ತರುವ ಪ್ರಸ್ತಾಪವನ್ನು ಕಾಂಗ್ರೆಸ್ ಪ್ರಾರಂಭಿಸಿದೆ ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ತಿಳಿಸಿದೆ. 2008-09ರಲ್ಲಿ ಕಾಂಗ್ರೆಸ್‌ನಿಂದ 'ಪ್ರಾಜೆಕ್ಟ್ ಚೀತಾ' ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿತ್ತು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಮನಮೋಹನ್ ಸಿಂಗ್ ಸರ್ಕಾರ ಅದನ್ನು ಅನುಮೋದಿಸಿತು. 2010ರ ಏಪ್ರಿಲ್ ನಲ್ಲಿ ಅಂದಿನ ಅರಣ್ಯ ಮತ್ತು ಪರಿಸರ ಸಚಿವ ಜೈರಾಮ್ ರಮೇಶ್ ಅವರು ಆಫ್ರಿಕಾದ ಚಿರತೆ ಔಟ್ ರೀಚ್ ಸೆಂಟರ್ ಗೆ ತೆರಳಿದ್ದರು.

2012 ರಲ್ಲಿ ಯುಪಿಎ ಸರ್ಕಾರದ ದೊಡ್ಡ ಬೆಕ್ಕುಗಳನ್ನು ಮರುಪರಿಚಯಿಸುವ ಯೋಜನೆಯನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿತು. ಐದು ವರ್ಷಗಳ ನಂತರ, 2017 ರಲ್ಲಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ನ್ಯಾಯಾಲಯದ ಮುಂದೆ ಅರ್ಜಿಯನ್ನು ಸಲ್ಲಿಸಿತು, IUCN ಒಂದು ಜಾತಿಯ ಮರುಪರಿಚಯವನ್ನು ಕಾನೂನುಬದ್ಧ ಪ್ರಕ್ರಿಯೆಯಾಗಿ ಸ್ವೀಕರಿಸಿದೆ ಎಂದು ವಾದಿಸಿತು. 2020ರಲ್ಲಿ ನಿಷೇಧವನ್ನು ತೆಗೆದುಹಾಕಲಾಯಿತು.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಹೇಳಿಕೆಗೆ ಬಿಜೆಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+