50 ಸಂಚಿಕೆ ಪೂರೈಸಿದ 'ಮನ್ ಕೀ ಬಾತ್'; ರೇಡಿಯೋ ಕಾರ್ಯಕ್ರಮದ ಗುಟ್ಟು ತೆರೆದಿಟ್ಟ ಮೋದಿ
ನವದೆಹಲಿ, ನವೆಂಬರ್ 25: ಪ್ರಧಾನಿ ನರೇಂದ್ರ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮ ಭಾನುವಾರ (ನವೆಂಬರ್ 25) ಐವತ್ತು ಸಂಚಿಕೆಗಳನ್ನು ಪೂರೈಸಿತು. ಇದೇ ಸಂದರ್ಭದಲ್ಲಿ ರೇಡಿಯೋ ಕಾರ್ಯಕ್ರಮದ ಆಲೋಚನೆ ಬಂದಿದ್ದು ಹೇಗೆ ಹಾಗೂ ಈ ವರೆಗಿನ ಪಯಣವನ್ನು ನೆನಪಿಸಿಕೊಂಡರು.
ಆಲ್ ಇಂಡಿಯಾ ರೇಡಿಯೋದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮೋದಿ ಬರಬಹುದು, ಹೋಗಬಹುದು. ಆದರೆ ಈ ದೇಶ ಶಾಶ್ವತವಾಗಿರುತ್ತದೆ. ನಮ್ಮ ಸಂಸ್ಕೃತಿಯು ಅಮರವಾಗಿರುತ್ತದೆ ಎಂದು ಹೇಳಿದ್ದಾರೆ.
ಡೇರಾ ಬಾಬಾ ನಾನಕ್- ಕರ್ತರ್ ಪುರ್ ಸಾಹಿಬ್ ರಸ್ತೆ ಕಾರಿಡಾರ್ ಯೋಜನೆಯನ್ನು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯ ತನಕ ನಿರ್ಮಾಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಸರಕಾರವು ಬಹಳ ಮುಖ್ಯವಾದ ತೀರ್ಮಾನ ಮಾಡಿದೆ. ಅದು ಕರ್ತರ್ ಪುರ್ ಕಾರಿಡಾರ್ ನ ಆರಂಭ. ಈ ಮೂಲಕ ನಮ್ಮ ದೇಶದ ಜನ ಸುಲಭವಾಗಿ ಪಾಕಿಸ್ತಾನದಲ್ಲಿನ ಕರ್ತರ್ ಪುರ್ ಗೆ ತೆರಳಬಹುದು ಹಾಗೂ ಗುರು ನಾನಕ್ ದೇವ್ ರ ಪವಿತ್ರ ಸ್ಥಳಕ್ಕೆ ಭೇಟಿ ನೀಡಬಹುದು ಎಂದಿದ್ದಾರೆ.

ಮನ್ ಕೀ ಬಾತ್ ಆರಂಭಿಸಿದಾಗ ನಾನು ನಿರ್ಧರಿಸಿದ್ದೆ: ಇದರಲ್ಲಿ ರಾಜಕೀಯ ಸೇರಬಾರದು. ಸರಕಾರದ ಬಗ್ಗೆ ಹೊಗಳಿಕೆ ಇರಬಾರದು ಅಥವಾ ನನ್ನ ಹೆಸರು ಹೇಳಬಾರದು. ನನ್ನ ನಿರ್ಧಾರಕ್ಕೆ ಸ್ಫೂರ್ತಿ ಹಾಗೂ ಶಕ್ತಿ ತುಂಬಿದವರು ನೀವು. ಮನ್ ಕೀ ಬಾತ್ ಅಂದರೆ ಜನರ ಬಗ್ಗೆಯೇ ಹೊರತು ರಾಜಕಾರಣ ಅಲ್ಲ ಎಂದಿದ್ದಾರೆ.
ಮನ್ ಕೀ ಬಾತ್ ಪ್ರಸಾರ ಮಾಡಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದ ಹೇಳಿದ್ದಾರೆ. ಯಾವುದೇ ರಾಜಕಾರಣಿ ಮಾಧ್ಯಮಗಳ ಬಗ್ಗೆ ಸಂತೋಷ ವ್ಯಕ್ತಪಡಿಸಲ್ಲ. ತಮಗೆ ಸರಿಯಾದ ಕವರೇಜ್ ಸಿಗ್ತಿಲ್ಲ ಅಥವಾ ನಕಾರಾತ್ಮಕ ಕವರೇಜ್ ಸಿಗ್ತಿದೆ ಅಂದುಕೊಳ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಎತ್ತಿದ ವಿಚಾರಗಳಿಗೆ ಮಾಧ್ಯಮಗಳು ಪ್ರಚಾರ ನೀಡಿದವು ಎಂದಿದ್ದಾರೆ.
1998ರಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ವೇಳೆ ತೀರಾ ತಲುಪಲು ಸಾಧ್ಯವಾಗದ ಜಾಗದಲ್ಲೂ ಡಾಬಾವೊಂದರ ಮಾಲೀಕ ರೇಡಿಯೋ ಮೂಲಕ ಮಾಹಿತಿ- ಸುದ್ದಿ ಕೇಳುತ್ತಿದ್ದುದನ್ನು ನೋಡಿದೆ. ಆಗಲೇ ಈ ರೀತಿ ಕಾರ್ಯಕ್ರಮ ಮಾಡಲು ನಿರ್ಧರಿಸಿದೆ ಎಂದಿದ್ದಾರೆ.
ಆಗ ರೇಡಿಯೋ ಚಾಲೂ ಮಾಡಿದ ಆ ವ್ಯಕ್ತಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಘೋಷಣೆ ಮಾಡಿದ, ಇಂದು ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿದ ಮಹತ್ವದ ದಿನ ಎಂದಾಗ ಬಹಳ ಸಂತಸ ಪಟ್ಟಿದ್ದನ್ನು ನೋಡಿದ್ದೆ ಎಂದಿದ್ದಾರೆ.
ಆಗಿನಿಂದ ನನ್ನ ಮನಸಿನಲ್ಲಿ ಉಳಿದುಹೋಗಿತ್ತು: ಜನರ ಜತೆ ಬೆಸೆದುಕೊಂಡಿದೆ ಹಾಗೂ ಅದರ ಶಕ್ತಿ ಅಪಾರವಾದುದು ಎಂದು ಮೋದಿ ಹೇಳಿದ್ದಾರೆ.
-
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್












Click it and Unblock the Notifications