ಸುಖೋಯ್ ನಲ್ಲಿದ್ದ ಪೈಲಟ್ ಗಳು ತೀವ್ರ ಗಾಯದಿಂದ ಸಾವು: ತನಿಖಾ ವರದಿ
ಮೇ 23ರಂದು ಬೆಳಗ್ಗೆ ಆಗಸಕ್ಕೆ ಹಾರಿದ್ದ ಸುಖೋಯ್ ಯುದ್ಧ ವಿಮಾನವು ಏಕಾಏಕಿ ಸಂಪರ್ಕ ಕಳೆದುಕೊಂಡು ಭಾರತ-ಚೀನಾ ಗಡಿ ಭಾಗದ ಅರಣ್ಯದಲ್ಲಿ ಪತನಗೊಂಡಿತ್ತು.
ನವದೆಹಲಿ, ಜೂನ್ 1: ಕಳೆದ ವಾರ ಚೀನಾ ದೇಶದ ಗಡಿ ಭಾಗದಲ್ಲಿ ಪತನಗೊಂಡಿದ್ದ ಭಾರತದ ಎರಡು ಯದ್ಧ ವಿಮಾನಗಳಲ್ಲಿದ್ದ ಇಬ್ಬರು ಪೈಲಟ್ ಗಳು ಗಂಭೀರ ಗಾಯಗಳಿಂದಾಗಿ ನಿಧನರಾಗಿದ್ದಾರೆಂದು ಭಾರತೀಯ ವಾಯುಸೇನೆ ತಿಳಿಸಿದೆ.
ಸ್ಕ್ವಾಡ್ರನ್ ತಂಡದ ನಾಯಕ ಡಿ. ಪಂಕಜ್ ಹಾಗೂ ಫ್ಲೈಟ್ ಲ್ಯೂಟೆನೆಂಟ್ ಎಸ್. ಅಚುದೇವ್ ಅವರು ವಿಮಾನವು ಪತನಗೊಳ್ಳುವ ಮುನ್ನ ಬಾಗಿಲು ತೆರೆದು ಹೊರಗೆ ಹಾರಬೇಕಿತ್ತು. ಆದರೆ, ಅವರಿಗೆ ವಿಮಾನದ ಬಾಗಿಲುಗಳನ್ನು ತೆರೆಯಲು ಸಾಧ್ಯವಾಗಿಲ್ಲ.[ನಾಪತ್ತೆಯಾಗಿದ್ದ ಸುಖೋಯ್ 30 ಯುದ್ಧ ವಿಮಾನ ಭಾರತ-ಚೀನಾ ಗಡಿಯಲ್ಲಿ ಪತ್ತೆ]

ಹಾಗಾಗಿ, ವಿಮಾನ ಪತನಗೊಂಡ ನಂತರ ತೀವ್ರವಾಗಿ ಗಾಯಗೊಂಡಿದ್ದಲ್ಲದೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ತನಿಖಾ ವರದಿಯು ತಿಳಿಸಿರುವುದಾಗಿ ವಾಯುಸೇನೆ ಹೇಳಿದೆ.
ಮೇ 23ರಂದು ತೇಜಿಪುರದ ವಾಯು ನೆಲೆಯಿಂದ ಬೆಳಗ್ಗೆ ಸುಮಾರು 10:30ಕ್ಕೆ ಆಗಸಕ್ಕೆ ಹಾರಿದ್ದ ಸುಖೋಯ್ ಸು - 30 ಯುದ್ಧ ವಿಮಾನ ಬೆಳಗ್ಗೆ 11:10ರ ನಂತರ ಕಂಟ್ರೋಲಿಂಗ್ ಸ್ಟೇಷನ್ ನ ಸಂಪರ್ಕ ಕಡಿದುಕೊಂಡು ಅರುಣಾಚಲ ಪ್ರದೇಶದ ಚೀನಾ ಗಡಿಭಾಗದಲ್ಲಿ ಪತನಗೊಂಡಿತ್ತು.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications