ಬಿಲ್ಡೆಸ್ಕ್ ಖರೀದಿ ಒಪ್ಪಂದ ಕೈಬಿಟ್ಟ ಪ್ರೋಸುಸ್; ಯಾರಿಗೆ ನಷ್ಟ?
ನವದೆಹಲಿ, ಅ. 3: ಭಾರತದ ಅತಿದೊಡ್ಡ ಪೇಮೆಂಟ್ ಅಗ್ರಿಗೇಟರ್ ಬಿಲ್ಡೆಸ್ಕ್ ಅನ್ನು ಖರೀದಿಸುವ ಪೇಯು ಪೇಮೆಂಟ್ಸ್ ಸಂಸ್ಥೆಯ ಪ್ರಯತ್ನ ಮಧ್ಯದಲ್ಲೇ ನಿಂತುಹೋಗಿದೆ. ಬಿಲ್ಡೆಸ್ಕ್ ಸಂಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ ತೆರೆ ಎಳೆಯಲಾಗಿರುವ ವಿಚಾರವನ್ನು ಪೇಯು ಪೇಮೆಂಟ್ಸ್ ಕಂಪನಿಯ ಮಾತೃ ಸಂಸ್ಥೆ ಪ್ರೋಸುಸ್ ಎನ್ವಿ ಇಂದು ಸೋಮವಾರ ಹೇಳಿದೆ.
ಪ್ರೋಸುಸ್ ಎನ್ವಿ ನೆದರ್ಲೆಂಡ್ಸ್ ದೇಶದ ಕಂಪನಿ. ಪೇಯು ಪೇಮೆಂಟ್ಸ್ನಿಂದ ಬಿಲ್ಡೆಸ್ಕ್ ಖರೀದಿ ಆಗುತ್ತದೆ ಎಂದು ಪ್ರೋಸುಸ್ ಎನ್ವಿ 2021 ಆಗಸ್ಟ್ 31ರಂದು ಹೇಳಿತ್ತು. 2022 ಸೆಪ್ಟೆಂಬರ್ 5ರಂದು ಭಾರತೀಯ ಸ್ಪರ್ಧಾ ಆಯೋಗದಿಂದ (ಸಿಸಿಐ) ಪೇಯು ಪೇಮೆಂಟ್ಸ್ ಅನುಮೋದನೆ ಕೂಡ ಪಡೆದುಕೊಂಡಿತ್ತು.
ಆದರೆ, 4.7 ಬಿಲಿಯನ್ ಡಾಲರ್ (38 ಸಾವಿರ ಕೋಟಿ ರೂ) ಮೊತ್ತದ ಈ ಒಪ್ಪಂದ ಯಾಕೆ ರದ್ದಾಯಿತು ಎಂಬುದು ಸ್ಪಷ್ಟವಾಗಿಲ್ಲ. ಪ್ರೂಸುಸ್ ಸಂಸ್ಥೆ ಕೂಡ ಈ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಿಲ್ಲ. ಕೆಲ ಷರತ್ತುಗಳು ಈಡೇರದ ಕಾರಣ ಒಪ್ಪಂದ ರದ್ದಾಗಿದೆ ಎಂದಷ್ಟೇ ತಿಳಿಸಿದೆ. ಆ ಷರತ್ತುಗಳು ಯಾವುದು ಎಂಬುದು ಗೊತ್ತಾಗಿಲ್ಲ.

"2022 ಸೆಪ್ಟೆಂಬರ್ 5ರಂದು ಸಿಸಿಐನಿಂದ ಪೇಯು ಅನುಮೋದನೆ ಪಡೆಯಿತು. ಅಂತಿಮ ಗಡುವಾದ 2022 ಸೆಪ್ಟೆಂಬರ್ 30ರೊಳಗೆ ಕೆಲ ಷರತ್ತುಗಳು ಪೂರೈಸದ ಕಾರಣ ನಿಯಮದ ಪ್ರಕಾರ ಒಪ್ಪಂದ ರದ್ದಾಗಿದೆ. ಹೀಗಾಗಿ, ಖರೀದಿ ಮಾಡಲಾಗುತ್ತಿಲ್ಲ," ಎಂದು ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಪ್ರೋಸುಸ್ ಎನ್ವಿ ಹೇಳಿಕೆ ನೀಡಿದೆ.
ಭಾರತದ ಅತಿದೊಡ್ಡ ಪೇಮೆಂಟ್ ಗೇಟ್ವೇ
ಭಾರತದಲ್ಲಿರುವ ಆನ್ಲೈನ್ ಪೇಮೆಂಟ್ ಕ್ಷೇತ್ರದ ಮಾರುಕಟ್ಟೆಯಲ್ಲಿ ಬಿಲ್ಡೆಸ್ಕ್ ಶೇ. 25-30ರಷ್ಟು ಪಾಲು ಹೊಂದಿದೆ. ರೇಜರ್ ಪೇ ಶೇ. 15-20ರಷ್ಟು ಮಾರ್ಕೆಟ್ ಶೇರ್ ಹೊಂದಿದೆ. ಇನ್ನು, ನೆದರ್ಲೆಂಡ್ಸ್ ಮೂಲದ ಪೇಯು ಶೇ. 10-15ರಷ್ಟು ಸ್ವಾಮ್ಯತೆ ಹೊಂದಿದೆ.
ಬಿಲ್ಡೆಸ್ಕ್ ಮತ್ತು ಪೇಯು ಎರಡೂ ಕೂಡ ಒಟ್ಟಾರೆ ಒಂದು ವರ್ಷದಲ್ಲಿ 147 ಬಿಲಿಯನ್ ಮೊತ್ತದಷ್ಟು ಹಣದ ವಹಿವಾಟು (ಟಿಪಿವಿ) ಮಾಡಿವೆ. ಎರಡೂ ಸಂಸ್ಥೆಗಳು 2021-22ರ ವರ್ಷದಲ್ಲಿ 752 ಬಿಲಿಯನ್ ಡಾಲರ್ನಷ್ಟು ಒಟ್ಟಾರೆ ಆದಾಯ ಗಳಿಸಿವೆ.

ಇವಲ್ಲದೇ ಸಿಸಿ ಅವೆನ್ಯೂಸ್, ಪೇಟಿಎಂ, ಪೈನ್ ಲ್ಯಾಬ್ಸ್ ಮೊದಲಾದ ಪೇಮೆಂಟ್ ಅಗ್ರಿಗೇಟರ್ಗಳಿವೆ. ಜೊತೆಗೆ, ಫೋನ್ಪೆ, ಎಂಸ್ವೈಪ್ ಇತ್ಯಾದಿ ಆಫ್ಲೈನ್ ಪೇಮೆಂಟ್ ಸಂಸ್ಥೆಗಳೂ ಕೂಡ ಆನ್ಲೈನ್ ಪೇಮೆಂಟ್ ಗೇಟ್ವೇಗೆ ತೆರೆದುಕೊಳ್ಳುತ್ತಿವೆ.
ಸರಕಾರಿ ಸಂಸ್ಥೆಗಳ ಪೇಮೆಂಟ್ ವ್ಯವಸ್ಥೆ, ಬ್ಯಾಂಕಿಂಗ್, ಇನ್ಷೂರೆನ್ಸ್, ಫೈನಾನ್ಷಿಯಲ್ ಸರ್ವಿಸ್ ವಿಭಾಗಗಳಲ್ಲಿ ಬಿಲ್ಡೆಸ್ಕ್ ಸೇವೆ ಹೆಚ್ಚು ಚಾಲ್ತಿಯಲ್ಲಿದೆ. ಇಂಟರ್ನೆಟ್ ಕಂಪನಿಗಳ ಪೇಮೆಂಟ್ ವ್ಯವಸ್ಥೆಯನ್ನು ಪೇಯು ನೋಡಿಕೊಳ್ಳುತ್ತದೆ.
ಒಂದು ವೇಳೆ ಪೇಯು ಮತ್ತು ಬಿಲ್ಡೆಸ್ಕ್ ಒಪ್ಪಂದ ಈಡೇರಿದ್ದಲ್ಲಿ ಭಾರತದ ಪೇಮೆಂಟ್ ವ್ಯವಸ್ಥೆಯಲ್ಲಿ ಪ್ರೋಸುಸ್ ಎನ್ವಿ ಪ್ರಾಬಲ್ಯ ಗಟ್ಟಿಯಾಗುತ್ತಿತ್ತು. ಅಲ್ಲದೇ ಭಾರತದಲ್ಲಿ ಪ್ರೋಸುಸ್ ಹೂಡಿದ ಬಂಡವಾಳದ ಪ್ರಮಾಣ 10 ಬಿಲಿಯನ್ ಡಾಲರ್ಗೆ (81 ಸಾವಿರ ಕೋಟಿ ರೂ) ಏರುತ್ತಿತ್ತು.
ಬಿಲ್ಡೆಸ್ಕ್ನ ಮೂಲ ಹೂಡಿಕೆದಾರರಿಗೆ ಗೊಂದಲ
ಸುಮಾರು 170 ಪೇಮೆಂಟ್ ವಿಧಾನಗಳಿಗೆ ಅನುವು ಮಾಡಿಕೊಡುವ ಬಿಲ್ಡೆಸ್ಕ್ ಸ್ಥಾಪನೆಯಾಗಿದ್ದು 2000ರಲ್ಲಿ. ಎಂಎನ್ ಶ್ರೀನಿವಾಸು, ಅಜಯ್ ಕೌಶಲ್ ಮತ್ತು ಕಾರ್ತಿಕ್ ಗಣಪತಿ ಈ ಸಂಸ್ಥೆಯ ಸಂಸ್ಥಾಪಕರು. ಪ್ರೂಸುಸ್ನ ಪೇಯು ಸಂಸ್ಥೆಗೆ ಮಾರಾಟವಾಗುವ ನಿರೀಕ್ಷೆಯಲ್ಲಿದ್ದ ಬಿಲ್ಡೆಸ್ಕ್ಗೆ ಒಂದು ರೀತಿಯಲ್ಲಿ ನಿರಾಸೆಯಾಗಿದೆ. ನಿರಾಸೆಯಾಗಲು ಕಾರಣವೂ ಇದೆ.
ಬಿಲ್ಡೆಸ್ಕ್ ಆರಂಭಗೊಂಡು ಎರಡು ದಶಕಗಳೇ ಆಗಿವೆ. ಅದರ ಹೂಡಿಕೆದಾರರಿಗೆ ಸಂಸ್ಥೆಯ ಮಾರುಕಟ್ಟೆ ಮೊತ್ತ ಎಷ್ಟೆಂಬುದು ನಿರ್ದಿಷ್ಟವಾಗಿಲ್ಲ. ಬಿಲ್ಡೆಸ್ಕ್ನ ಸಹ-ಸಂಸ್ಥಾಪಕ ಶ್ರೀನಿವಾಸು ಕಳೆದ ವರ್ಷ ಈ ಸಮಸ್ಯೆ ಬಗ್ಗೆ ಮಾತನಾಡಿದ್ದರು. ಆಗ ಬಿಲ್ಡೆಸ್ಕ್ ಅನ್ನು ಪೇಯು ಖರೀದಿಸುವ ಒಪ್ಪಂದಕ್ಕೆ ಮಾತುಕತೆ ನಡೆಯುತ್ತಿದ್ದ ಸಮಯ. ಆ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸು, "ಕೆಲ ಹೂಡಿಕೆದಾರರು 15-16 ವರ್ಷಗಳಿಂದಲೂ ನಮ್ಮ ಜೊತೆ ಇದ್ದಾರೆ. ಹೂಡಿಕೆದಾರರಿಗೆ ಹಣ ಪರಿವರ್ತಿಸುವ ಅವಕಾಶ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಐಪಿಒಗೆ ತೆರೆದುಕೊಳ್ಳಲು ಎಣಿಸಿದ್ದೆವು. ಆಗ ಪ್ರೋಸುಸ್ನವರು ನಮ್ಮನ್ನು ಸಂಪರ್ಕಿಸಿದರು" ಎಂದು ಹೇಳಿದ್ದರು.
ಪ್ರೋಸುಸ್ನ ಬಂಡವಾಳ ಜೊತೆಗೆ ಬಿಸಿನೆಸ್ ತಂತ್ರವೂ ಉತ್ತಮವಾಗಿದೆ. ಬಿಲ್ಡೆಸ್ಕ್ ಬೆಳವಣಿಗೆಗೆ ಸರಿಯಾದ ಪುಷ್ಟಿ ಸಿಗುತ್ತಿತ್ತು. ಹಾಗೆಯೇ ಬಹಳ ಕಾಲದಿಂದ ಇರುವ ಬಿಲ್ಡೆಸ್ಕ್ನ ಷೇರುದಾರರಿಗೆ ಸರಿಯಾದ ನ್ಯಾಯ ಸಿಗುತ್ತದೆ ಎಂದು ಬಿಲ್ಡೆಸ್ಕ್ ಸಂಸ್ಥಾಪಕರು ತಿಳಿಸಿದ್ದರು.
ಈಗ ಪೇಯು ಮತ್ತು ಬಿಲ್ಡೆಸ್ಕ್ ಒಪ್ಪಂದ ಮುರಿದುಬಿದ್ದಿರುವುದು ಬಿಲ್ಡೆಸ್ಕ್ನ ಹೂಡಿಕೆದಾರರಿಗೆ ತುಸು ಗೊಂದಲಕ್ಕೆ ಕೆಡವಿದೆ.
(ಒನ್ಇಂಡಿಯಾ ಸುದ್ದಿ)
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications