ಸೈನ್ಯದ ಲ್ಯಾಪ್ ಟಾಪ್ ಕದ್ದರೆ 10 ಲಕ್ಷ ಬಹುಮಾನ!
ನವದೆಹಲಿ, ಜೂ. 22: ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳಿರುವ ಲ್ಯಾಪ್ ಟಾಪ್ ಗಳನ್ನು ಕದಿಯಲು ಪಾಕಿಸ್ತಾನದ ಐಎಸ್ ಐ 10 ಲಕ್ಷ ರು. ಗಳ ಆಫರ್ ನೀಡಿತ್ತು.
ಗುಪ್ತಚರದಳ ಇಂಥದ್ದೊಂದು ಆತಂಕಕಾರಿ ಮಾಹಿತಿಯನ್ನು ಬಹಿರಂಗ ಮಾಡಿದೆ. ಸೈನ್ಯದ ಕೆಳಮಟ್ಟದ ಅಧಿಕಾರಿಗಳಿಗೆ ಐಎಸ್ ಐ ಹಣದ ಆಮಿಷ ಒಡ್ಡಿತ್ತು ಎನ್ನಲಾಗಿದೆ.[ಬಿರಿಯಾನಿಗೆ ಹೆಸರಾಗಿದ್ದ ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?]

ಕೊಲಂಬೋ ಮಾರ್ಗದಲ್ಲಿ ದಕ್ಷಿಣ ಭಾರತದ ಮೇಲೆ ದಾಳಿ ನಡೆಸಲು ಐಎಸ್ ಐ ಹೊಂಚು ಹಾಕಿದ್ದು ಫಲ ನೀಡಿರಲಿಲ್ಲ. ಹಾಗಾಗಿ ಭಾರತೀಯ ಸೇನೆಗೆ ಸಂಬಂಧಿಸಿದ ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹಣದ ಆಮಿಷ ನೀಡುವ ಕ್ರಮಕ್ಕೆ ಮುಂದಾಯಿತು.
ಲ್ಯಾಪ್ ಟಾಪ್ ಕದಿಯಿರಿ 10 ಲಕ್ಷ ಪಡೆಯಿರಿ!
ಮಾಹಿತಿ ಬೆನ್ನು ಹತ್ತಿದ ಗುಪ್ತಚರ ದಳಕ್ಕೆ ಒಂದೊಂದೆ ವಿಚಾರಗಳು ತಿಳಿಯುತ್ತ ಹೋಯಿತು. ಬಾಲು ಎಂಬಾತನಿಗೆ ಐಎಸ್ ಐ ಲ್ಯಾಪ್ ಟ್ಯಾಪ್ ಕದಿಯುವ ಜವಾಬ್ದಾರಿಯನ್ನು ಒದಗಿಸಿತ್ತು. ಇದಕ್ಕೂ ಮುನ್ನ ಶ್ರೀಲಂಕಾದ ಪ್ರಜೆ ಸಕೀರ್ ಹುಸೇನ್ ಎಂಬಾತನಿಗೆ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿಕೊಡಲಾಗಿತ್ತು. ಆದರೆ ಹುಸೇನ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.[ಅಬ್ಬಾ... ಜೀಹಾದಿಗಳು ಎಂಥೆಂತಾ ಜೋಕ್ ಮಾಡ್ತಾರಪ್ಪಾ!]
ಇಲ್ಲಿಂದ ತನ್ನ ಕುತಂತ್ರದ ದಿಕ್ಕು ಬದಲಿಸಿದ ಐಎಸ್ ಐ ಹನಿ ಟ್ರ್ಯಾಪ್ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ನಂತರ ಹಣದ ಆಮಿಷ ನೀಡುವ ತೀರ್ಮಾನಕ್ಕೆ ಬಂದಿತು.
ಮಾಹಿತಿ ಪಡೆದುಕೊಂಡು ಐಎಸ್ ಐ ಏನು ಮಾಡುವುದಿತ್ತು ?
ಮೊದಲಿಗೆ ಐಎಸ್ ಐ ಗುರಿ ಇದ್ದದ್ದು ದಕ್ಷಿಣ ಭಾರತದ ಮೇಲೆ. ಇಲ್ಲಿನ ಸ್ಮಗ್ಲಿಂಗ್ ಜಾಲ ಮತ್ತು ಖೋಟಾ ನೋಟು ಜಾಲವನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪುಸುವುದರಲ್ಲಿತ್ತು.
ನಕ್ಸಲ್ ಹಾವಳಿಯೂ ದಕ್ಷಿಣ ಭಾರತವನ್ನು ಕಾಡುತ್ತಿದ್ದು ಕೇರಳದ ನಕ್ಸಲ್ ನಾಯಕರನ್ನು ಸಂಪರ್ಕಕ್ಕೆ ತಂದುಕೊಳ್ಳುವ ಉದ್ದೇಶವನ್ನು ಹೊಂದಿತ್ತು. ತಮಿಳು ನಾಡಿನ ಬಂದರುಗಳ ಮೂಲಕ ಕೇರಳದ ತುದಿಯವರೆಗೆ ಸಂಪರ್ಕ ಸಾಧಿಸುವ ಉದ್ದೇಶ ಯೋಜನೆಯ ಹಿಂದೆ ಅಡಗಿತ್ತು.
ಸೇನೆ ಮಾರ್ಗಗಳ ಮೇಲೆ ತನ್ನ ನಿಯಂತ್ರಣವನ್ನು ಯಾವ ರೀತಿಯಲ್ಲಿ ಹೊಂದಿದೆ? ಎಂಬುದನ್ನು ತಿಳಿದುಕೊಳ್ಳಬೇಕಾದ್ದರಿಂದ ಐಎಎಸ್ ಏನು ಮಾಡಲು ಸಿದ್ಧವಾಗಿತ್ತು. ಹನಿಟ್ರ್ಯಾಪ್ ನಲ್ಲಿ ಸಿಕ್ಕ ಮಾಹಿತಿಗಳು ಕಡಿಮೆ ಇದ್ದುದರಿಂದ ಹಣದ ಆಮಿಷ ನೀಡಿ ಮಾಹಿತಿ ಕಲೆ ಹಾಕುವ ಕೆಲಸಕ್ಕೆ ಇಳಿದಿತ್ತು.
ಸುರಕ್ಷಾ ತಂತ್ರಗಳು
ಇಂಥ ಕೆಲಸಗಳನ್ನು ಹೇಳಿದಂತೆ ಮಾಡುವುದು ಅಷ್ಟು ಸುಲಭವಲ್ಲ. ಇಂಥ ಘಟನಾವಳಿಗಳಿಗೆ ಆಸ್ಪದ ನೀಡಬಾರದು ಎಂಬ ಕಾರಣಕ್ಕೆ ಸೈನ್ಯ ಹಲವಾರು ಸುರಕ್ಷತಾ ಕ್ರಮಗಳನ್ನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದೆ. ಅಲ್ಲದೇ ತನ್ನ ಸಿಬ್ಬಂದಿಗೆ ಲ್ಯಾಪ್ ಟಾಪ್ ನ್ನು ಮನೆಗೆ ತೆಗೆದುಕೊಂಡು ಹೋದದಂತೆಯೂ ಸೂಚನೆ ನೀಡಲಾಗಿದೆ.
ಇಂಥ ಮಾಹಿತಿ ಸೋರಿಕೆಯಾಗದೇ ಇದ್ದಾಗಲೂ ಭಾರತ ಮುಜುಗರಕ್ಕೆ ಈಡಾದ ಸಂದರ್ಭಗಳು ಇದ್ದವು. ಚೀನಾ ಭಾರತೀಯ ಸೈನ್ಯದ ಸಾಫ್ಟ್ ವೇರ್ ನ್ನೇ ಹ್ಯಾಕ್ ಮಾಡಿತ್ತು. ಸೈಬರ್ ಅಪರಾಧ ದಳದ ಎಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲವೂ ತಹಬದಿಗೆ ಬಂದಿತ್ತು. ಈಗ ಪಾಕಿಸ್ತಾನ ನಮ್ಮ ಸೈನ್ಯದ ಮಾಹಿತಿ ಪಡೆಯಲು ತಂತ್ರ ಬಳಸಲು ಹೋಗಿ ಸಾಧ್ಯವಾಗದೇ ಕೈ ಕೈ ಹಿಸುಕಿಕೊಳ್ಳುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications