Pahalgam: ಕೇಕ್ ಕತ್ತರಿಸಿ ಹಿಂದೂಗಳ ಹತ್ಯೆ ಸಂಭ್ರಮಿಸಿದ ಪಾಕ್ ಅಧಿಕಾರಿಗಳು! ಭಾರತ ತೊರೆಯುವ ಮುನ್ನ ವಿಕೃತಿ: Video
ಭಾರತ ಬೆಚ್ಚಿ ಬೀಳುವಂತಹ ಘಟನೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿದೆ. 28 ಮಂದಿ ಪ್ರವಾಸಿಗರನ್ನು ಹತ್ಯೆಗೈದ ಉಗ್ರರು ಡಿಜಿಟಲ್ ತರಬೇತಿ ಪಡೆದಿದ್ದರು ಎಂಬ ಮಾಹಿತಿ ಭಾರೀತಯ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಹಿಂದೂಗಳ ನರಮೇಧ ಬೆನ್ನಲ್ಲೆ ಪಾಕಿಸ್ತಾನ ರಾಯಭಾರಿಗಳಿಗೆ ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಪಾಕ್ ಅಧಿಕಾರಿಗಳು ಕಚೇರಿಯಿಂದ ಹೊರ ಹೋಗುವಾಗ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಕೇಕ್ ಒಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಪಹಲ್ಗಾಮ್ನಲ್ಲಿ ಮಂಗಳವಾರ ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಪಾಕ್ ಉಗ್ರರು ಅಟ್ಟಹಾಸ ಮೆರೆದಿದ್ದರು. ಘಟನೆ ಬಳಿಕ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಲ್ಲಿ ಪಾಕ್ ರಾಯಭಾರಿ ಕಚೇರಿ ತೊರೆಯುವಂತೆ ಪಾಕಿಸ್ತಾನ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದು ಪ್ರಮುಖ ಕ್ರಮವಾಗಿದೆ. ಪಾಕಿಸ್ತಾನ ಎಲ್ಲ ನಾಗರಿಕರ ವಿಸಾ ರದ್ದು ಮಾಡಿ ಕ್ರಮವಹಿಸಲಾಗಿದೆ. ಪಾಕ್ ವಿರುದ್ಧ ಇನ್ನಷ್ಟು ಕ್ರಮಗಳು ಜರುಗುವ ಸಾಧ್ಯತೆ ಇದೆ.

ಪಾಕ್ ಅಧಿಕಾರಿಗಳು ವಾರದೊಳಗೆ ದೇಶ ತೊರೆಯಬೇಕು. ಪಾಕ್ ರಾಜತಾಂತ್ರಿಕ ಚೇರಿ ಬಂದ್ ಮಾಡುವಂತೆ ನಿರ್ಧಾರ ಕೈಗೊಂಡಿದೆ. ಇದಾಗಿ 24 ಗಂಟೆಗಳಲ್ಲಿ ಪಾಕ್ ಅಧಿಕಾರಿಗಳು ಭಾರತ ಬಿಟ್ಟು ತೊಲಗುವಾಗ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ದೆಹಲಿಯಲ್ಲಿನ ಪಾಕ್ ರಾಯಭಾರಿ ಕಚೇರಿ ಆವರಣದಲ್ಲಿ ವಿಡಿಯೋ ಸೇರೆಯಾಗಿದೆ. ಅಧಿಕಾರಿಗಳು ಭಾರತೀಯ ಹತ್ಯೆಯನ್ನು ಸಂಭ್ರಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂತಹ ಹೀನ ಮನಸ್ಥಿತಿ ಪಾಕಿಸ್ತಾನದವರಿಗೆ ಬಿಟ್ಟು ಬೇರಾರಿಗೂ ಬರಲು ಸಾಧ್ಯವಿಲ್ಲವೆಂದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
We had an office for them.
— Subhi Vishwakarma (@subhi_karma) April 24, 2025
See cakes being delivered at Pakistan High Commission in Delhi today.
What's this celebration for? #PahalgamTerroristAttack pic.twitter.com/YaRhkdN3tw
ಡಿಜಿಟಲ್ ಮ್ಯಾಪ್ ಬಳಸಿ ಭಾರತಕ್ಕೆ ಬಂದು ಕೃತ್ಯ
ಕಾಶ್ಮೀರದಲ್ಲಿನ ಸುಂದರ ವಾತಾವರಣ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಪ್ರವಾಸಿಗರ ಹತ್ಯೆಗೆ ಬಂದಿದ್ದ ಉಗ್ರರು ಡಿಜಿಟಲ್ ತರಬೇತಿ ಪಡೆದಿದ್ದಾರೆ. ದುಷ್ಟರು ಡಿಜಿಟಲ್ ಮ್ಯಾಪ್ ಬಳಕೆ ಮಾಡುವುದನ್ನು ಕಲಿತಿದ್ದಾರೆ. ಅದರ ಸಹಾಯದಿಂದಲೇ ಪಹಲ್ಗಾಮ್ ಪ್ರದೇಶ ನುಗ್ಗಿ ಹೇಡಿಗಳಂತೆ ನಿಶಸ್ತ್ರ ನಾಗರಿಕರ ಮೇಲೆ ಪೌರುಷ ತೋರಿದ್ದಾರೆ. ಉಗ್ರ ಡಿಜಿಟಲ್ ಮ್ಯಾಪ್ ಬಳಕೆಯನ್ನು ಭಾರತಿಯ ಗುಪ್ತಚರ ಇಲಾಖೆ ಮಾಹಿತಿ ಖಚಿತಪಡಿಸಿದೆ.
ಪ್ರಧಾನಿ ಕಾರ್ಯಕ್ರಮಕ್ಕೆ ಟೈಟ್ ಸೆಕ್ಯೂರಿಟಿ
ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದಾಳಿ ಬೆನ್ನಲ್ಲೆ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮೇಲಿಂದ ಮೇಲೆ ಸಭೆಗಳು ನಡೆದಿವೆ. ಪ್ರಧಾನಿ ಮೋದಿಯವರು ಕಾರ್ಯಕ್ರಮದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಭಾರೀ ಬಿಗಿ ಭದ್ರತೆ ನೀಡಲಾಗಿದೆ. ಪ್ರಧಾಣಿ ಮೋದಿ ಅವರು ಇಂದು ಬಿಹಾರ ಪ್ರವಾಸದ್ದಾರೆ. ಅಲ್ಲಿ ಅವರಿಗೆ ಫುಲ್ ಟೈಟ್ ಸೆಕ್ಯೂರಿಟಿ ಒದಗಿಸಲಾಗಿದೆ.
ಭಾರತ ಪಾಕ್ ವಿರುದ್ಧ ಕೈಗೊಂಡ ಕ್ರಮಗಳ ಬೆನ್ನಲ್ಲೆ ನಡುಗಿರುವ ಪಾಕಿಸ್ತಾನ, ತುರ್ತು ಸಭೆ ನಡೆಸುತ್ತಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications