Get Updates
Get notified of breaking news, exclusive insights, and must-see stories!

INDIA: 14 ಸುದ್ದಿ ನಿರೂಪಕರ ಕಾರ್ಯಕ್ರಮ ಬಹಿಷ್ಕಾರ: ಪಟ್ಟಿ ಬಿಡುಗಡೆ ಮಾಡಿದ 'ಇಂಡಿಯಾ ಬ್ಲಾಕ್'

ಬೆಂಗಳೂರು, ಸೆಪ್ಟಂಬರ್ 14: ಕೇಂದ್ರ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಬ್ಲಾಕ್ ದೂರದರ್ಶನದ ವಿವಿಧ 14 ಮಂದಿ ಸುದ್ದಿ ನಿರೂಪಕರ (News Anchor) ಕಾರ್ಯಕ್ರಮಗಳನ್ನು ಬಹಿಷ್ಕರಿಸಿದೆ. ಈ ಕುರಿತು ನ್ಯೂಸ್ ಆಂಕರ್ ಹೆಸರುಗಳ ಪಟ್ಟಿ ಮಾಡಿದೆ. ಇವರ ಕಾರ್ಯಕ್ರಮಗಳಿಗೆ ಇಂಡಿಯಾ ಪ್ರತಿನಿಧಿಗಳು ಭಾಗವಹಿಸದೇ ಬಹಿಷ್ಕರಿಸಲಿದ್ದಾರೆ ಎಂಬ ಅಂಶ ಗುರುವಾರ ತಿಳಿದು ಬಂದಿದೆ.

ಬ್ಲಾಕ್ ಇಂಡಿಯಾ 14 ದೂರದರ್ಶನ ಸುದ್ದಿ ನಿರೂಪಕರ ಪಟ್ಟಿ ಬಿಡುಗಡೆ ಮಾಡಿರುವುದಕ್ಕೆ ಮಾಧ್ಯಮಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಬಿಜೆಪಿಯು ಇಂಡಿಯಾದ ನಡೆಯನ್ನು ಖಂಡಿಸಿದೆ. ಇದು 'ತುರ್ತು ಪರಿಸ್ಥಿತಿ 2.0' ಎಂದು ಕರೆದಿದೆ.

opposition-bloc-india-released-list-of-boycott-shows

26 ಪಕ್ಷಗಳ ಇಂಡಿಯದ 'ಬ್ಲಾಕ್‌ ಸಮನ್ವಯ ಸಮಿತಿ' ತನ್ನ ಮೊದಲ ಸಭೆ ನಡೆಸಿ ಜಂಟಿ ಹೇಳಿಕೆ ಪ್ರಕಟಿಸಿದೆ. ಅದರಲ್ಲಿ ಭಾರತದ ಯಾವುದೇ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸದ ಕಾರ್ಯಕ್ರಮಗಳ ನಿರೂಪಕರ ಹೆಸರನ್ನು ಗುರುತಿಸಲು ಸಮಿತಿಯು ತನ್ನ ಮಾಧ್ಯಮ ಗುಂಪಿಗೆ ಅಧಿಕಾರ ನೀಡಿತ್ತು. ಅದರಂತೆ 14 ಜನರನ್ನು ಗುರುತಿಸಲಾಗಿದೆ.

ಸಮಾಜದಲ್ಲಿ ಧ್ವೇಷ ಹರಡಿಸಲಾಗುತ್ತಿದೆ: ಇಂಡಿಯಾ ಬ್ಲಾಕ್

ಈ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು, ಇಂದು ಸುದ್ದಿ ನಿರೂಪಕರ ಪಟ್ಟಿ ತಯಾರಿಸಿದ್ದೇವೆ. ಅದರಲ್ಲಿ ಕೆಲವರನ್ನು ಗುರುತಿಸಿದ್ದು, ಅವರ ಕಾರ್ಯಕ್ರಮಗಳನ್ನು ನಮ್ಮ ಪ್ರತಿನಿಧಿಗಳು ಬಹಿಷ್ಕರಿಸಲಿದ್ದಾರೆ. ಏಕೆಂದರೆ ದ್ವೇಷ ತುಂಬಿದ ನಿರೂಪಣೆಯನ್ನು ಕಾನೂನುಬದ್ಧಗೊಳಿಸಲು ನಾವು ಬಯಸುವುದಿಲ್ಲ. ಹೀಗಾಗಿ ಅಂತವರ ಕಾರ್ಯಕ್ರಮಗಳಿಗೆ ತೆರಳುವುದಿಲ್ಲ ಎಂದರು.

ನಮ್ಮ ನಾಯಕರ ವಿರುದ್ಧ ಸುದ್ದಿ ಮಾಡುತ್ತೀರಿ, ಮೀಮ್‌ಗಳ ಮಾಡುವ ಜೊತೆಗೆ ನಮ್ಮ ನಾಯಕ ಭಾಷಣಗಳನ್ನು ತಿರುಚಲಾಗುತ್ತಿದೆ. ಅಲ್ಲದೇ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇಂತವರ ವಿರುದ್ಧ ನಾವು ಹೋರಾಡಲು ಸಜ್ಜಾಗಿದ್ದೇವೆ. ಮಾಧ್ಯಮಗಳ ಮೂಲಕ ಸಮಾಜದಲ್ಲಿ ಹಿಂಸಾಚಾರದ ರೂಪದಲ್ಲಿ ದ್ವೇಷವನ್ನು ಹರಡಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಷ್ಟವಿಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಈ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆ. ಯಾವುದೇ ಆಂಕರ್‌ಗಳನ್ನು ನಾವು ವಿರೋಧಿಸುವುದಾಗಲಿ, ದ್ವೇಷಿಸುವುದಾಗಲಿ ಮಾಡುತ್ತಿಲ್ಲ. ಅದಕ್ಕಿಂತ ಹೆಚ್ಚು ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ ಎಂದರು.

opposition-bloc-india-released-list-of-boycott-shows

ಪ್ರಜಾಪ್ರಭುತ್ವದ ನೀತಿಗೆ ವಿರುದ್ಧ ನಿರ್ಧಾರ

ಈ ಕಾರಣದಿಂದ ಸುದ್ದಿವಾಹಿನಿಗಳ ಪಟ್ಟಿ ಬಿಡುಗಡೆ ಮಾಡಿದ್ದರೂ ಸಹ ಅದನ್ನು ಬೆಂಬಲಿಸಬಾರದು ಎಂಬ ಕಾರಣಕ್ಕೆ ಕೆಲವು ಮಾಧ್ಯಮಗಳು ಪಟ್ಟಿಯನ್ನು ವರದಿಗಳಲ್ಲಿ ಪ್ರಕಟಿಸಿಲ್ಲ ಇಂಡಿಯಾ ಮೈತ್ರಿಯ ಮಾಧ್ಯಮ ಸಮಿತಿಯು ತೆಗೆದುಕೊಂಡ ಈ ನಿರ್ಧಾರವು ಅಪಾಯಕಾರಿ ಬೆಳವಣಿಗೆಯ ಪೂರ್ವ ನಿದರ್ಶನ ಹೊಂದಿದಂತಿದೆ. ಇಂತಹ ನಿಷೇಧ, ಬಹಿಷ್ಕಾರಗಳು "ಪ್ರಜಾಪ್ರಭುತ್ವದ ನೀತಿಗೆ ವಿರುದ್ಧವಾಗಿದೆ" ಮತ್ತು ಇದು ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ ಎಂದು ಎನ್‌ಬಿಡಿಎ ತಿಳಿಸಿದೆ. ಅಲ್ಲದೇ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಇಂಡಿಯಾ ಮೈತ್ರಿಕೂಟದ ಬ್ಲಾಕ್‌ಗೆ ಎನ್‌ಬಿಡಿಎ ಒತ್ತಾಯಿಸಿದೆ.

ಮಾಧ್ಯಮಗಳನ್ನು ಬೆದರಿಸಿದ ಇತಿಹಾಸ ಕಾಂಗ್ರೆಸ್‌ಗೆ ಇದೆ: ಬಿಜೆಪಿ

ಇದೆಲ್ಲ ಬೆಳವಣಿಗೆ ಮಧ್ಯೆ ಮಾಧ್ಯಮಗಳ ಸುದ್ದಿ ನಿರೂಪಕರ ಕಾರ್ಯಕ್ರಮ ಬಹಿಷ್ಕಾರದ ನಡೆಯನ್ನು ಬಿಜೆಪಿ ಖಂಡಿಸಿದೆ. ಕಾಂಗ್ರೆಸ್ ಪಕ್ಷವು ಮಾಧ್ಯಮಗಳನ್ನು ಬೆದರಿಸುವ ಇತಿಹಾಸ ಹೊಂದಿದೆ ಎಂದು ತುರ್ತುಪರಿಸ್ಥಿತಿ ಯನ್ನು ನೆನಪಿಸಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ವಾಗ್ದಾಳಿ ನಡೆಸಿದರು.

ಇದೇ ಕಾಂಗ್ರೆಸ್‌ನ ಇಂದಿರಾ ಗಾಂಧಿಯವರು ಬದ್ಧ ನ್ಯಾಯಾಂಗ, ಬದ್ಧ ಅಧಿಕಾರಶಾಹಿ ಮತ್ತು ಭಯಾನಕ ತುರ್ತು ಪರಿಸ್ಥಿತಿಯನ್ನು ಹೇರಲು ಕರೆ ನೀಡಿದರು. ರಾಜೀವ್ ಗಾಂಧಿ ಮಾಧ್ಯಮವನ್ನು ರಾಜ್ಯದ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು ಆದರೆ ದಯನೀಯವಾಗಿ ವಿಫಲರಾದರು. ಇನ್ನೂ ಸೋನಿಯಾ ಗಾಂಧಿಯವರ ನೇತೃತ್ವದ ಯುಪಿಎ ಕೇವಲ ಕಾಂಗ್ರೆಸ್ ಅವರ ಅಭಿಪ್ರಾಯಗಳನ್ನು ಇಷ್ಟಪಡದ ಕಾರಣ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ನಿಷೇಧಿಸಿತ್ತು ಎಂದು ಅವರು ಕಿಡಿ ಕಾರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+