Get Updates
Get notified of breaking news, exclusive insights, and must-see stories!

Om Birla vs K Suresh: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಚುನಾವಣೆ, ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ ನೂತನ ಸಂಸತ್

ನವದೆಹಲಿ, ಜೂನ್. 26: ಲೋಕಸಭೆಯ ಇತಿಹಾಸದಲ್ಲಿ ಅಪರೂಪದ ಘಟನೆಗೆ ನೂತನ ಸಂಸತ್ ಸಾಕ್ಷಿಯಾಗಲಿದೆ. ಸ್ಪೀಕರ್ ಹುದ್ದೆಗೆ ಇಂದು (ಜೂನ್. 26) ಚುನಾವಣೆ ನಡೆಯಲಿದೆ. ಆರಂಭದಲ್ಲಿ ಒಮ್ಮತಕ್ಕೆ ಬಂದರೂ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಪ್ರತಿಪಕ್ಷಗಳ ನಡುವಿನ ಮಾತುಕತೆ ಮುರಿದುಬಿದ್ದ ನಂತರ ಲೋಕಸಭೆ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ.

ಎನ್‌ಡಿಎ ತನ್ನ ಅಭ್ಯರ್ಥಿಯಾಗಿ ಬಿಜೆಪಿ ಸಂಸದ, ಮಾಜಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಯ್ಕೆ ಮಾಡಿದ್ದರೆ, ಪ್ರತಿಪಕ್ಷಗಳು ಹಿರಿಯ ಕಾಂಗ್ರೆಸ್ ನಾಯಕ, ಕೇರಳದ ಮಾವೇಲಿಕರದಿಂದ ಎಂಟು ಅವಧಿಯ ಸಂಸದ ಕೆ ಸುರೇಶ್ ಕೆ ಸುರೇಶ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಸ್ಪೀಕರ್ ಸ್ಥಾನಕ್ಕೆ ಬುಧವಾರ ಬೆಳಗ್ಗೆ 11 ಗಂಟೆಗೆ ಚುನಾವಣೆ ನಡೆಯಲಿದೆ.

Om Birla vs K Suresh Rare Election For Lok Sabha Speaker Today

ಏಳು ಸಂಸದರು ಮತ ಚಲಾಯಿಸುವಂತಿಲ್ಲ

ಇಂಡಿಯಾ ಬಣಕ್ಕೆ ಚುನಾವಣೆಯಲ್ಲಿ ಗೆಲ್ಲಲು 271 ಮತಗಳು ಬೇಕು. 542 ರಲ್ಲಿ ಅರ್ಧದಷ್ಟು (ವಯನಾಡ್ ಸ್ಥಾನ ಖಾಲಿಯಾಗಿದೆ) ಮತಗಳು ಬೇಕಾಗುವುದರಿಂದ ಗೆಲುವು ಸುಲಭದ ಕೆಲಸವಲ್ಲ. ಸಂಖ್ಯಾಬಲದ ಪ್ರಕಾರ, ಲೋಕಸಭೆಯಲ್ಲಿ ಎನ್‌ಡಿಎ 293 ಸದಸ್ಯರನ್ನು ಹೊಂದಿದ್ದರೆ, ಇಂಡಿಯಾ ಬ್ಲಾಕ್ 232 ಸದಸ್ಯರನ್ನು ಹೊಂದಿದೆ.

ಅಲ್ಲದೆ, ಇಂಡಿಯಾ ಬ್ಲಾಕ್‌ನ ಐವರು ಮತ್ತು ಬ್ಬರು ಸ್ವತಂತ್ರರು ಸೇರಿದಂತೆ ಲೋಕಸಭೆಯಲ್ಲಿ ಇನ್ನೂ ಏಳು ಸಂಸದರು ಪ್ರಮಾಣ ವಚನ ಸ್ವೀಕರಿಸಬೇಕಿದೆ. ಮೂಲಗಳ ಪ್ರಕಾರ ಸ್ಪೀಕರ್ ಆಯ್ಕೆ ಬಳಿಕ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪರಿಣಾಮವಾಗಿ, ಈ ಏಳು ಸಂಸದರು ಲೋಕಸಭಾ ಸ್ಪೀಕರ್ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.

ಬಿಜೆಪಿಗೆ YSRCP ಬೆಂಬಲ

ಇದಲ್ಲದೆ, ಯಾವುದೇ ಮೈತ್ರಿಕೂಟದ ಭಾಗವಲ್ಲದ ವೈಎಸ್‌ಆರ್‌ಸಿಪಿ ಸ್ಪೀಕರ್ ಚುನಾವಣೆಯಲ್ಲಿ ಓಂ ಬಿರ್ಲಾ ಅವರನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಪಕ್ಷ 232 ಸ್ಥಾನಗಳನ್ನು ಹೊಂದಿದ್ದರೆ, ಎನ್‌ಡಿಎ 293 ಸಂಸದರನ್ನು ಹೊಂದಿದೆ. ಇದಕ್ಕೆ ವೈಎಸ್ ಜಗನ್‌ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್‌ನ 4 ಸಂಸದರ ಬೆಂಬಲವೂ ದೊರೆಯುವ ನಿರೀಕ್ಷೆಯಿದೆ.

ಉಪಸಭಾಪತಿ ಸ್ಥಾನ: ಮೂಡದ ಒಮ್ಮತ

ಸರ್ಕಾರ ಮತ್ತು ಪ್ರತಿಪಕ್ಷಗಳು ಆರಂಭದಲ್ಲಿ ಒಮ್ಮತಕ್ಕೆ ಬಂದವು. ಆದರೆ, ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡುವ ಬಗ್ಗೆ ಸರ್ಕಾರ ಬದ್ಧತೆ ತೋರದ ಹಿನ್ನೆಲೆಯಲ್ಲಿ ಮಾತುಕತೆ ಮುರಿದುಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಸ್ಪೀಕರ್ ಅಭ್ಯರ್ಥಿಯ ಬಗ್ಗೆ ಒಮ್ಮತ ಮೂಡಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಸರ್ಕಾರ ನಿಯೋಜಿಸಿತ್ತು.

Om Birla vs K Suresh Rare Election For Lok Sabha Speaker Today

ರಾಜನಾಥ್ ಸಿಂಗ್ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಕಾಂಗ್ರೆಸ್‌ನ ಕೆಸಿ ವೇಣುಗೋಪಾಲ್ ಅವರು ಓಂ ಬಿರ್ಲಾ ಅವರನ್ನು ಅವಿರೋಧವಾಗಿ ಮರು ಆಯ್ಕೆ ಮಾಡಿದ್ದಕ್ಕಾಗಿ ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನದ ಭರವಸೆಯನ್ನು ಕೋರಿದರು. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಯಾವುದೇ ಷರತ್ತುಬದ್ಧ ಬೆಂಬಲವನ್ನು ನೀಡದ ಕಾರಣ ಮಮಾತುಕತೆ ಮುರಿದುಬಿತ್ತು.

ಸ್ಪೀಕರ್ ಆಯ್ಕೆ ನಂತರ ಉಪಸಭಾಪತಿ ಸ್ಥಾನದ ಕುರಿತು ಚರ್ಚೆ ನಡೆಯಲಿದ್ದು, ಪ್ರತಿಪಕ್ಷಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಸಭೆಯಲ್ಲಿದ್ದ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಆದರೆ, ಕೆ.ಸಿ.ವೇಣುಗೋಪಾಲ್ ಹಠ ಹಿಡಿದಿದ್ದರಿಂದ ಮಾತುಕತೆ ಮುರಿದುಬಿತ್ತು. ಹೀಗಾಗಿ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.

ಇನ್ನು, "ನಾವು ಗೆಲ್ಲುತ್ತೇವೆಯೋ, ಸೋಲುತ್ತೇವೆಯೋ ಗೊತ್ತಿಲ್ಲ... ಆದರೆ ಹೋರಾಟ ಮಾಡುತ್ತೇವೆ, ಉಪಸಭಾಪತಿ ಸ್ಥಾನ ಪಡೆಯುವ ಹಕ್ಕು ಪ್ರತಿಪಕ್ಷಗಳಿಗೆ ಇತ್ತು. ಆದರೆ ಅವರು ನೀಡಲಿಲ್ಲ" ಎಂದು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಕೆ.ಸುರೇಶ್ ಹೇಳಿದ್ದಾರೆ.

ಗೊಂದಲದಲ್ಲಿಯೇ ಇದೆ ಟಿಎಂಸಿ!

ಎಲ್ಲಾ ಎನ್‌ಡಿಎ ಮೈತ್ರಿಕೂಟದ ಸದಸ್ಯರು ಓಂ ಬಿರ್ಲಾ ಅವರ ನಾಮನಿರ್ದೇಶನ ಪತ್ರಗಳಿಗೆ ಸಹಿ ಹಾಕಿದ್ದಾರೆ. ಮತ್ತೊಂದೆಡೆ, ಟಿಎಂಸಿ ಹೊರತುಪಡಿಸಿ ಎಲ್ಲಾ ಪ್ರಮುಖ ಇಂಡಿಯಾ ಬ್ಲಾಕ್ ಸದಸ್ಯರು ಕೆ ಸುರೇಶ್ ಅವರ ನಾಮಪತ್ರಕ್ಕೆ ಸಹಿ ಮಾಡಿದ್ದಾರೆ. ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಸ್ಪೀಕರ್ ಸ್ಥಾನಕ್ಕೆ ಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ಮೊದಲು ಪಕ್ಷದ ಜೊತೆಗೆ ಸಮಾಲೋಚಿಸಲಾಗಿಲ್ಲ ಮತ್ತು ಇದು ಏಕಪಕ್ಷೀಯ ನಿರ್ಧಾರ ಎಂದು ಆರೋಪಿಸಿದ್ದಾರೆ. ಹೀಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಡೆ ಇನ್ನೂ ನಿಗೂಢವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+