Get Updates
Get notified of breaking news, exclusive insights, and must-see stories!

Heavy Rain alert: ಬಂಗಾಳಕೊಲ್ಲಿಯಲ್ಲಿ ವೈಪರಿತ್ಯ ಸೃಷ್ಟಿ, ರಾಜ್ಯಕ್ಕೆ ಭಾರೀ ಮಳೆ ಸಂಭವ

ಭವನೇಶ್ವರ್, ನವೆಂಬರ್ 15: ಬಂಗಾಳಕೊಲ್ಲಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ತಮಿಳುನಾಡು, ಓಡಿಶಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆ ಅಬ್ಬರಿಸಲಿದೆ. ಭಾರತೀಯ ಹವಾಮಾನ ಇಲಾಖೆಯು ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಲಿದೆ ಎಂದು ಎಚ್ಚರಿಕೆ ನೀಡಿದೆ.

ಮುನ್ಸೂಚನೆ ಪ್ರಕಾರ, ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶವು ಮುಂದಿನ ಒಂದೆರಡು ದಿನಗಳಲ್ಲಿ ತನ್ನ ಮೂಲ ಸ್ಥಾನದಿಂದ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸಲಿದೆ. ನವೆಂಬರ್ 16ರಂದು ವಾಯುಭಾರ ಕುಸಿತವು ತೀವ್ರತೆ ಹೆಚ್ಚಾಗಲಿದೆ. ಆಗ ಇದು ಉತ್ತರ-ಈಶಾನ್ಯ ಭಾಗದತ್ತ ಒಡಿಶಾ ಕರಾವಳಿ ಭಾಗವನ್ನು ನವೆಂಬರ್ 17ರಂದು ತಲುಪುವ ನಿರೀಕ್ಷೆ ಇದೆ. ಹೀಗಾಗಿ ಬೇರೆಲ್ಲ ರಾಜ್ಯಗಳಿಗಿಂತಲೂ ಈ ರಾಜ್ಯಗಳಲ್ಲಿ ಅತ್ಯಧಿಕ ಮಳೆ ನಿರೀಕ್ಷೆ ಇದೆ.

Odisha Rains:IMD Predicts Heavy Rain Next 5 Days for Odisha Due To Low Pressure System

ಅತ್ಯಧಿಕ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಈ ರಾಜ್ಯದಲ್ಲಿ ಕೊಯ್ಲಿಗೆ ಬಂದ ಬೆಳೆ ಕಟಾವು ಮಾಡಿಕೊಳ್ಳುವಂತೆ ರೈತರಿಗೆ ಐಎಂಡಿ ಸಲಹೆ ನೀಡಿದೆ. ಬುಧವಾರದಿಂದ ಮುಂದಿನ ಐದು ದಿನಗಳಲ್ಲಿ ಓಡಿಶಾದಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ನಾಳೆ-ನಾಡಿದ್ದು ಹಲವೆಡೆ ಮಳೆ

ಇದೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಅದರಲ್ಲೂ ನವೆಂಬರ್ 16 ಮತ್ತು 17 ರಂದು ರಾಜ್ಯದ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗಲಿದೆ ಎಂದು ಭುವನೇಶ್ವರ್ ಪ್ರಾದೇಶಿಕ ಐಎಂಡಿ ಕೇಂದ್ರದ ವಿಜ್ಞಾನಿ ಸಂಜೀವ್ ದ್ವಿವೇದಿ ಮಾಹಿತಿ ನೀಡಿದ್ದಾರೆ.

ಒಡಿಶಾದ ಬಹುತೇಕ ಕರಾವಳಿ, ದಕ್ಷಿಣ ಮತ್ತು ಉತ್ತರ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವವಿದೆ. ಹೀಗಾಗಿ ಮೀನುಗಾರರು ಮೀನುಗಾರಿಕೆಗೆ ನೀರಿಗಿಳಿಯಂದೆ ಸೂಚನೆ ನೀಡಲಾಗಿದೆ. ನ.17 ರ ನಂತರ ಮಳೆ ಇಳಿಕೆ ಆಗಿ, ಕೆಲವು ಸ್ಥಳಗಳಲ್ಲಿ ಮಾತ್ರವೇ ಮುಂದುವರಿಯಲಿದೆ ಎಂದು ತಿಳಿಸಿದರು.

Odisha Rains:IMD Predicts Heavy Rain Next 5 Days for Odisha Due To Low Pressure System

ಈ ವಾರಾಂತ್ಯದವರೆಗೂ ಮಳೆ ನಿರೀಕ್ಷೆ

ಅರಬ್ಬಿ ಸಮುದ್ರದಲ್ಲಿ ಉಂಟಾದ ಮೇಲ್ಮೈ ಸುಳಿಗಾಳಿಯ ವಾತಾವರಣ ಸೃಷ್ಟಿಯು ಚೆನ್ನೈ ಭಾಗದಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ. ಏಕೆಂದರೆ ಇದು ದುರ್ಬಲ ಹಂತಕ್ಕೆ ತಲುಪಿದೆ. ಇನ್ನೂ ಬಂಗಾಳಕೊಲ್ಲಿಯಿಂದ ಗಾಳಿ ಸೆಳೆತ ಹೆಚ್ಚಾಗಿರುವುದರಿಂದ ಚೆನ್ನೈನಲ್ಲಿ ಈ ವಾರಾಂತ್ಯದವರೆಗೆ ಕೆಲವೆಡೆ ಧಾರಾಕಾರ ಮಳೆ ಆಗಲಿದೆ.

ಉಳಿದ ಹಲವು ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಚೆನ್ನೈನಲ್ಲಿ ಅಕ್ಟೋಬರ್ 1 ರಿಂದ ಈವರೆಗೆ ಶೇಕಡಾ 57ರಷ್ಟು ಮಳೆ ಕೊರತೆ ಆಗಿದೆ ಎಂದು ಐಎಂಡಿ ಮೂಲಗಳು ತಿಳಿಸಿವೆ.

ತಮಿಳುನಾಡಿನ ಹವಾಮಾನ ವರದಿ ಹೇಗಿದೆ?

ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಚಂಡಮಾರುತದಿಂದಾಗಿ ತಮಿಳುನಾಡಿನ ಹಲವು ಭಾಗಗಳಲ್ಲಿ ಮಧ್ಯಂತರ ಭಾರೀ ಮಳೆಯಾಗುತ್ತಿದೆ. ನಾಗಪಟ್ಟಣಂ ಜಿಲ್ಲೆಯ ವೇಲಂಕಣಿಯಲ್ಲಿ 17 ಸೆಂ.ಮೀ ಮಳೆಯಾಗಿದೆ. ನಾಗಪಟ್ಟಣಂನಲ್ಲಿ 15, ಕಾರೈಕಲ್ 14 ಸೆಂ.ಮೀ ಮಳೆ ದಾಖಲಾಗಿದೆ. ಚೆನ್ನೈ ಆಸು ಪಾಸು ಹೊರತಾಗಿ ತಮಿಳುನಾಡಿಗೆ ಗಂಭೀರ ಸ್ವರೂಪದ ಮಳೆ ಮುನ್ಸೂಚನೆಗಳೂ ಇಲ್ಲ.

ಆಂಧ್ರಪ್ರದೇಶದ ಕೆಲವೆಡೆ ಇಂದು ವ್ಯಾಪಕ ಮಳೆ

ನೆರೆಯ ಆಂಧ್ರಪ್ರದೇಶದ ವಿಶಾಖಪಟ್ಟಣಂ, ವಿಜಯನಗರಂ ಮತ್ತು ಶ್ರೀಕಾಕುಳಂ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ. ಬಂಗಾಳಕೊಲ್ಲಿಯ ಕಡಿಮೆ ಒತ್ತಡದ ಪ್ರದೇಶ ತೀವ್ರಗೊಂಡರೆ ಅಪಾರ ಮಳೆ ಆಗಲೂಬಹುದು. ಸದ್ಯ ಚಿತ್ತೂರು, ತಿರುಪತಿ, ನೆಲ್ಲೂರು ಜಿಲ್ಲೆಗಳಲ್ಲಿ ಮಂಗಳವಾರ ಹಗುರದಿಂದ ಸಾಧಾರಣ ಮಳೆ ದಾಖಲಾಗಿದೆ. ಇಂದು ಒಂದೆರಡು ಕಡೆ ಜೋರು ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+