ರೈಲ್ವೆ ಟಿಕೆಟ್ ರದ್ದು ಈಗ ಸರಳ; ಬ್ಯಾಂಕ್ ಖಾತೆಗೆ ಹಣ ವಾಪಸ್
ಬೆಂಗಳೂರು, ಅಕ್ಟೋಬರ್ 30 : ಪ್ರಯಾಣಿಕ ಸ್ನೇಹಿಯಾಗಲು ಭಾರತೀಯ ರೈಲ್ವೆ ಮತ್ತೊಂದು ಹೆಜ್ಜೆ ಇಟ್ಟಿದೆ. ಅಧಿಕೃತ ಏಜೆಂಟ್ಗಳ ಮೂಲಕ ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸುವುದವನ್ನು ಸರಳವಾಗಿಸಿದೆ.
ಒಟಿಪಿ ಆಧಾರಿತ ಸುಲಭ, ಪಾರದರ್ಶಕ ವ್ಯವಸ್ಥೆಯನ್ನು ಐಆರ್ಸಿಟಿಸಿ ಜಾರಿಗೆ ತಂದಿದೆ. ಈ ಮೂಲಕ ಸುಲಭವಾಗಿ ಟಿಕೆಟ್ ರದ್ದು ಮಾಡಬಹುದು. ಟಿಕೆಟ್ ರದ್ದಾದ ತಕ್ಷಣ ಪ್ರಯಾಣಿಕರ ಬ್ಯಾಂಕ್ ಖಾತೆಗೆ ಹಣ ಮರುಪಾವತಿಯಾಗುತ್ತದೆ.
ಕಲಬುರಗಿ-ಬೀದರ್ ರೈಲು ಮಾರ್ಗ ವಿದ್ಯುತೀಕರಣಕ್ಕೆ ಒಪ್ಪಿಗೆ
ಪೂರ್ಣ ಪ್ರಮಾಣದ ವೈಟಿಂಗ್ ಲಿಸ್ಟ್ನ ಟಿಕೆಟ್ ಮುಂಗಡ ಕಾಯ್ದಿರಿಸಿದರೆ ಅಥವಾ ಪ್ರಯಾಣಿರೇ ಟಿಕೆಟ್ ರದ್ದುಗೊಳಿಸಿದರೆ ಅವರ ಮೊಬೈಲ್ಗೆ ಒಂದು ಒಟಿಪಿ ರವಾನೆಯಾಗುತ್ತದೆ. ಅದನ್ನು ಏಜೆಂಟ್ಗೆ ನೀಡುವ ಮೂಲಕ ಟಿಕೆಟ್ ರದ್ದುಗೊಳಿಸಬಹುದು.
ವಿಜಯಪುರ-ಯಶವಂತಪುರ ರೈಲು; ವೇಳಾಪಟ್ಟಿ, ನಿಲ್ದಾಣಗಳು
ಅಧಿಕೃತ ಏಜೆಂಟ್ ಟಿಕೆಟ್ ರದ್ದು ಮಾಡಿದ ತಕ್ಷಣ ಪ್ರಯಾಣಿಕರ ಮೊಬೈಲ್ ನಂಬರ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣವನ್ನು ಹಾಕಲಾಗುತ್ತದೆ. ಈ ವ್ಯವಸ್ಥೆಯಿಂದ ಟಿಕೆಟ್ ರದ್ದು ಮಾಡುವುದು ಸರಳವಾದಂತಾಗಿದೆ.
ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿ ಬದಲು
ಐ. ಆರ್. ಸಿ. ಟಿ. ಸಿ ವೆಬ್ಸೈಟ್ ಮೂಲಕ ಎಲ್ಲಾ ದಿನ ಬೆಳಗ್ಗೆ 10 ರಿಂದ ರಾತ್ರಿ 11ರ ತನಕ ಟಿಕೆಟ್ ಬುಕ್ ಮಾಡಬಹುದು. ಈ ಹಿಂದೆ ಒಂದು ಐಡಿಯಲ್ಲಿ ಕೇವಲ 6 ಟಿಕೆಟ್ ಬುಕ್ ಮಾಡಬಹುದಿತ್ತು. ಈಗ ಅದನ್ನು 12ಕ್ಕೆ ಏರಿಕೆ ಮಾಡಲಾಗಿದೆ.