ಇಸ್ರೋದ ಚಂದ್ರಯಾನ 2ರ ಮೇಲೆ ಉತ್ತರ ಕೊರಿಯಾ ಹ್ಯಾಕರ್ಸ್ ದಾಳಿ
ನವದೆಹಲಿ, ನವೆಂಬರ್ 9: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2ರ ವಿಕ್ರಂ ಲ್ಯಾಂಡರ್ಅನ್ನು ಚಂದ್ರನ ಮೇಲೆ ಇಳಿಸುವ ವೇಳೆ ಉತ್ತರ ಕೊರಿಯಾದ ಹ್ಯಾಕರ್ಗಳು ಇಸ್ರೋ ಮೇಲೆ ದಾಳಿ ಮಾಡಿದ್ದವು ಎಂಬ ಆಘಾತಕಾರಿ ಸಂಗತಿ ವರದಿಯಾಗಿದೆ.
ಉತ್ತರ ಕೊರಿಯಾದ ಹ್ಯಾಕರ್ಗಳಿಂದ ದಾಳಿಗೊಳಗಾದ ಐದು ಸರ್ಕಾರಿ ಸಂಸ್ಥೆಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೂಡ ಒಂದು ಸೈಬರ್ ಪರಿಣತರು ಹೇಳಿದ್ದಾಗಿ ಬ್ರಿಟನ್ನ 'ಡೇಲಿ ಮೇಲ್' ವರದಿ ಮಾಡಿದೆ.
ತಮ್ಮ ಸಿಸ್ಟಂಗಳಿಗೆ ಉತ್ತರ ಕೊರಿಯಾದ ಸ್ಪಾಮರ್ಗಳು ರವಾನಿಸಿದ್ದ ಕುತಂತ್ರದ ಇಮೇಲ್ಗಳನ್ನು (ಫಿಶಿಂಗ್) ಇಸ್ರೋ ಸಿಬ್ಬಂದಿ ತಿಳಿಯದೆ ತೆರೆದು ಆಕಸ್ಮಿಕವಾಗಿ ಮಾಲ್ವೇರ್ಗಳನ್ನು ಇನ್ಸ್ಟಾಲ್ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ಇಸ್ರೋದ ಚಂದ್ರಯಾನ 2 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕೊನೆಯ ಹಂತದಲ್ಲಿ ಇಸ್ರೋ ಕೇಂದ್ರದಿಂದ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ಆದರೆ ಅಧಿಕಾರಿಗಳು ಚಂದ್ರಯಾನ ಯೋಜನೆ ಮೇಲೆ ಸೈಬರ್ ದಾಳಿ ನಡೆದಿದೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ.

ಉತ್ತರ ಕೊರಿಯಾ ಸರ್ಕಾರದ ಮಾಲ್ವೇರ್
ಈ ದಾಳಿಯ ಬಗ್ಗೆ ಇಸ್ರೋಗೆ ಸೆಪ್ಟೆಂಬರ್ನಲ್ಲಿಯೇ ಮಾಹಿತಿ ನೀಡಲಾಗಿತ್ತು. 'ಡಿಟ್ರ್ಯಾಕ್' ಎಂಬ ಮಾಲ್ವೇರ್ ಬಳಸಿ ದಾಳಿ ನಡೆಸಲಾಗಿದೆ. ಡಿಟ್ರ್ಯಾಕ್ ಮಾಲ್ವೇರ್ ಉತ್ತರ ಕೊರಿಯಾ ಸರ್ಕಾರದ ನಿಯಂತ್ರಣದಲ್ಲಿರುವ ಲಾಜಾರಸ್ ಎಂಬ ಗುಂಪಿಗೆ ಸಂಬಂಧಿಸಿದ್ದಾಗಿದೆ.
ಸೈಬರ್ ಭದ್ರತಾ ಸಂಸ್ಥೆ ಕಾಸ್ಪೆರೆಸ್ಕಿ ನೀಡಿರುವ ವರದಿ ಪ್ರಕಾರ, ಭಾರತದ 18 ರಾಜ್ಯಗಳಲ್ಲಿನ ಅರ್ಥಿಕ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಈ ಮಾಲ್ವೇರ್ ಪತ್ತೆಯಾಗಿದೆ.

ಆಡಳಿತದ ಕಂಪ್ಯೂಟರ್ ಮೇಲೆ ದಾಳಿ
ಇದೇ ಮಾಲ್ವೇರ್ ಬಳಸಿ ತಮಿಳುನಾಡಿನ ಕುಡಂಕುಳಂನಲ್ಲಿರುವ ಅಣುಶಕ್ತಿ ಸ್ಥಾವರ (ಎನ್ಪಿಸಿಐಎಲ್) ವ್ಯವಸ್ಥೆಯನ್ನು ಹ್ಯಾಕ್ ಮಾಡಲಾಗಿತ್ತು. ಅಣು ಸ್ಥಾವರದ ಡೇಟಾಗಳು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಲಾಗಿತ್ತು. ಇಲ್ಲಿ ಕಾಣಿಸಿಕೊಂಡ ಮಾಲ್ವೇರ್ಗಳು ಆಡಳಿತಾತ್ಮಕ ಕಂಪ್ಯೂಟರ್ಗಳನ್ನು ಗುರಿಯಾಗಿರಿಸಿಕೊಂಡಿದ್ದವೇ ವಿನಾ, ಅಣುಸ್ಥಾವರ ನಿಯಂತ್ರಣ ವ್ಯವಸ್ಥೆಯನ್ನಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

ಸೈಬರ್ ಭದ್ರತಾ ಕೇಂದ್ರಕ್ಕೆ ಮಾಹಿತಿ
ದೇಶದಲ್ಲಿನ ದುರುದ್ದೇಶಪೂರ್ವಕ ಸೈಬರ್ ಚಟುವಟಿಕೆಗಳನ್ನು ಮತ್ತು ಸೈಬರ್ ಸಮರಗಳನ್ನು ನಿಭಾಯಿಸಲು ಸ್ಥಾಪಿಸಲಾಗಿರುವ ರಾಷ್ಟ್ರೀಯ ಸೈಬರ್ ಕೋಆರ್ಡಿನೇಷನ್ ಸೆಂಟರ್ಗೆ ಅಮೆರಿಕ ಮೂಲದ ಸೈಬರ್ ಭದ್ರತಾ ಕಂಪೆನಿಯೊಂದು ಕೂಡುಕುಳಂನ ಎನ್ಪಿಸಿಐಎಲ್ ಡೊಮೈನ್ ಕಂಟ್ರೋಲರ್ಗಳಿಗೆ ಮಾಲ್ವೇರ್ ಮೂಲಕ ನುಗ್ಗಿರುವ ಮಾಹಿತಿಯನ್ನು ಸೆ. 3ರಂದು ನೀಡಿದ್ದವು.

ಹ್ಯಾಕ್ ಆಗಿಲ್ಲ ಎಂದ ಇಸ್ರೋ
ಇಸ್ರೋದ ವ್ಯವಸ್ಥೆಗೆ ಕೂಡ ಪ್ರವೇಶಿಸಿದ್ದ ಡಿಟ್ರ್ಯಾಕ್, ಚಂದ್ರಯಾನ ಲ್ಯಾಂಡರ್ ಇಳಿಸುವ ನಿಗದಿತ ದಿನದ ಎರಡು ದಿನಕ್ಕೂ ಮೊದಲು ಸೆ.4ರಂದು ಈ ಭದ್ರತಾ ಉಲ್ಲಂಘನೆ ಮಾಡಿರುವ ಬಗ್ಗೆ ಸರ್ಕಾರಿ ಸಂಸ್ಥೆಗಳಿಗೆ ತಿಳಿಸಲಾಗಿತ್ತು. ಆದರೆ ಇಸ್ರೋ ಹ್ಯಾಕಿಂಗ್ ಪ್ರಯತ್ನಗಳಿಗೆ ತನ್ನ ವ್ಯವಸ್ಥೆ ಬಲಿಯಾಗಿಲ್ಲ ಎಂದು ಹೇಳಿತ್ತು ಎಂಬುದಾಗಿ ವರದಿ ತಿಳಿಸಿದೆ.
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ











Click it and Unblock the Notifications