ಇಸ್ರೋದ ಚಂದ್ರಯಾನ 2ರ ಮೇಲೆ ಉತ್ತರ ಕೊರಿಯಾ ಹ್ಯಾಕರ್ಸ್ ದಾಳಿ
ನವದೆಹಲಿ, ನವೆಂಬರ್ 9: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2ರ ವಿಕ್ರಂ ಲ್ಯಾಂಡರ್ಅನ್ನು ಚಂದ್ರನ ಮೇಲೆ ಇಳಿಸುವ ವೇಳೆ ಉತ್ತರ ಕೊರಿಯಾದ ಹ್ಯಾಕರ್ಗಳು ಇಸ್ರೋ ಮೇಲೆ ದಾಳಿ ಮಾಡಿದ್ದವು ಎಂಬ ಆಘಾತಕಾರಿ ಸಂಗತಿ ವರದಿಯಾಗಿದೆ.
ಉತ್ತರ ಕೊರಿಯಾದ ಹ್ಯಾಕರ್ಗಳಿಂದ ದಾಳಿಗೊಳಗಾದ ಐದು ಸರ್ಕಾರಿ ಸಂಸ್ಥೆಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೂಡ ಒಂದು ಸೈಬರ್ ಪರಿಣತರು ಹೇಳಿದ್ದಾಗಿ ಬ್ರಿಟನ್ನ 'ಡೇಲಿ ಮೇಲ್' ವರದಿ ಮಾಡಿದೆ.
ತಮ್ಮ ಸಿಸ್ಟಂಗಳಿಗೆ ಉತ್ತರ ಕೊರಿಯಾದ ಸ್ಪಾಮರ್ಗಳು ರವಾನಿಸಿದ್ದ ಕುತಂತ್ರದ ಇಮೇಲ್ಗಳನ್ನು (ಫಿಶಿಂಗ್) ಇಸ್ರೋ ಸಿಬ್ಬಂದಿ ತಿಳಿಯದೆ ತೆರೆದು ಆಕಸ್ಮಿಕವಾಗಿ ಮಾಲ್ವೇರ್ಗಳನ್ನು ಇನ್ಸ್ಟಾಲ್ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ಇಸ್ರೋದ ಚಂದ್ರಯಾನ 2 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕೊನೆಯ ಹಂತದಲ್ಲಿ ಇಸ್ರೋ ಕೇಂದ್ರದಿಂದ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ಆದರೆ ಅಧಿಕಾರಿಗಳು ಚಂದ್ರಯಾನ ಯೋಜನೆ ಮೇಲೆ ಸೈಬರ್ ದಾಳಿ ನಡೆದಿದೆ ಎಂಬ ವರದಿಯನ್ನು ನಿರಾಕರಿಸಿದ್ದಾರೆ.

ಉತ್ತರ ಕೊರಿಯಾ ಸರ್ಕಾರದ ಮಾಲ್ವೇರ್
ಈ ದಾಳಿಯ ಬಗ್ಗೆ ಇಸ್ರೋಗೆ ಸೆಪ್ಟೆಂಬರ್ನಲ್ಲಿಯೇ ಮಾಹಿತಿ ನೀಡಲಾಗಿತ್ತು. 'ಡಿಟ್ರ್ಯಾಕ್' ಎಂಬ ಮಾಲ್ವೇರ್ ಬಳಸಿ ದಾಳಿ ನಡೆಸಲಾಗಿದೆ. ಡಿಟ್ರ್ಯಾಕ್ ಮಾಲ್ವೇರ್ ಉತ್ತರ ಕೊರಿಯಾ ಸರ್ಕಾರದ ನಿಯಂತ್ರಣದಲ್ಲಿರುವ ಲಾಜಾರಸ್ ಎಂಬ ಗುಂಪಿಗೆ ಸಂಬಂಧಿಸಿದ್ದಾಗಿದೆ.
ಸೈಬರ್ ಭದ್ರತಾ ಸಂಸ್ಥೆ ಕಾಸ್ಪೆರೆಸ್ಕಿ ನೀಡಿರುವ ವರದಿ ಪ್ರಕಾರ, ಭಾರತದ 18 ರಾಜ್ಯಗಳಲ್ಲಿನ ಅರ್ಥಿಕ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಈ ಮಾಲ್ವೇರ್ ಪತ್ತೆಯಾಗಿದೆ.

ಆಡಳಿತದ ಕಂಪ್ಯೂಟರ್ ಮೇಲೆ ದಾಳಿ
ಇದೇ ಮಾಲ್ವೇರ್ ಬಳಸಿ ತಮಿಳುನಾಡಿನ ಕುಡಂಕುಳಂನಲ್ಲಿರುವ ಅಣುಶಕ್ತಿ ಸ್ಥಾವರ (ಎನ್ಪಿಸಿಐಎಲ್) ವ್ಯವಸ್ಥೆಯನ್ನು ಹ್ಯಾಕ್ ಮಾಡಲಾಗಿತ್ತು. ಅಣು ಸ್ಥಾವರದ ಡೇಟಾಗಳು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಲಾಗಿತ್ತು. ಇಲ್ಲಿ ಕಾಣಿಸಿಕೊಂಡ ಮಾಲ್ವೇರ್ಗಳು ಆಡಳಿತಾತ್ಮಕ ಕಂಪ್ಯೂಟರ್ಗಳನ್ನು ಗುರಿಯಾಗಿರಿಸಿಕೊಂಡಿದ್ದವೇ ವಿನಾ, ಅಣುಸ್ಥಾವರ ನಿಯಂತ್ರಣ ವ್ಯವಸ್ಥೆಯನ್ನಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

ಸೈಬರ್ ಭದ್ರತಾ ಕೇಂದ್ರಕ್ಕೆ ಮಾಹಿತಿ
ದೇಶದಲ್ಲಿನ ದುರುದ್ದೇಶಪೂರ್ವಕ ಸೈಬರ್ ಚಟುವಟಿಕೆಗಳನ್ನು ಮತ್ತು ಸೈಬರ್ ಸಮರಗಳನ್ನು ನಿಭಾಯಿಸಲು ಸ್ಥಾಪಿಸಲಾಗಿರುವ ರಾಷ್ಟ್ರೀಯ ಸೈಬರ್ ಕೋಆರ್ಡಿನೇಷನ್ ಸೆಂಟರ್ಗೆ ಅಮೆರಿಕ ಮೂಲದ ಸೈಬರ್ ಭದ್ರತಾ ಕಂಪೆನಿಯೊಂದು ಕೂಡುಕುಳಂನ ಎನ್ಪಿಸಿಐಎಲ್ ಡೊಮೈನ್ ಕಂಟ್ರೋಲರ್ಗಳಿಗೆ ಮಾಲ್ವೇರ್ ಮೂಲಕ ನುಗ್ಗಿರುವ ಮಾಹಿತಿಯನ್ನು ಸೆ. 3ರಂದು ನೀಡಿದ್ದವು.

ಹ್ಯಾಕ್ ಆಗಿಲ್ಲ ಎಂದ ಇಸ್ರೋ
ಇಸ್ರೋದ ವ್ಯವಸ್ಥೆಗೆ ಕೂಡ ಪ್ರವೇಶಿಸಿದ್ದ ಡಿಟ್ರ್ಯಾಕ್, ಚಂದ್ರಯಾನ ಲ್ಯಾಂಡರ್ ಇಳಿಸುವ ನಿಗದಿತ ದಿನದ ಎರಡು ದಿನಕ್ಕೂ ಮೊದಲು ಸೆ.4ರಂದು ಈ ಭದ್ರತಾ ಉಲ್ಲಂಘನೆ ಮಾಡಿರುವ ಬಗ್ಗೆ ಸರ್ಕಾರಿ ಸಂಸ್ಥೆಗಳಿಗೆ ತಿಳಿಸಲಾಗಿತ್ತು. ಆದರೆ ಇಸ್ರೋ ಹ್ಯಾಕಿಂಗ್ ಪ್ರಯತ್ನಗಳಿಗೆ ತನ್ನ ವ್ಯವಸ್ಥೆ ಬಲಿಯಾಗಿಲ್ಲ ಎಂದು ಹೇಳಿತ್ತು ಎಂಬುದಾಗಿ ವರದಿ ತಿಳಿಸಿದೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ












Click it and Unblock the Notifications