20 ಲಕ್ಷ ಕೋಟಿ ಪ್ಯಾಕೇಜ್; 11 ಗಂಟೆಗೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ
ನವದೆಹಲಿ, ಮೇ 17 : ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಘೋಷಣೆ ಮಾಡಿದ 20 ಲಕ್ಷ ಕೋಟಿ ಪ್ಯಾಕೇಜ್ನ 5ನೇ ಹಂತದ ವಿವರ ಇಂದು 11 ಗಂಟೆಗೆ ಪ್ರಕಟವಾಗಲಿದೆ. ಹಣಕಾಸು ಸಚಿವರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಕಳೆದ 4 ದಿನಗಳಿಂದ ಪ್ರತಿದಿನ ಸಂಜೆ 4 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಭಾನುವಾರ ಬೆಳಗ್ಗೆ 11 ಗಂಟೆಗೆ ಅವರು ಪತ್ರಿಕಾಗೋಷ್ಠಿ ನಡೆಸಲಿದ್ದು, ಪ್ಯಾಕೇಜ್ನ 5ನೇ ಹಂತದ ವಿವರಗಳನ್ನು ನೀಡಲಿದ್ದಾರೆ.
ನರೇಂದ್ರ ಮೋದಿ ಘೋಷಣೆ ಮಾಡಿದ ಪ್ಯಾಕೇಜ್ ಅನ್ನು 5 ಹಂತಗಳಾಗಿ ವಿಂಗಡನೆ ಮಾಡಲಾಗಿತ್ತು. 4 ಹಂತಗಳನ್ನು ಈಗಾಗಲೇ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ. ಕೊನೆಯ ಹಂತದ ವಿವರಣೆಯನ್ನು ಬೆಳಗ್ಗೆ 11ಗಂಟೆಗೆ ನೀಡಲಿದ್ದಾರೆ.

ಈಗಾಗಲೇ ನಾಲ್ಕು ದಿನ ನಿರಂತರವಾಗಿ ಆರ್ಥಿಕ ಪ್ಯಾಕೇಜ್ನ ವಿವರಗಳನ್ನು ಹಣಕಾಸು ಸಚಿವರು ನೀಡಿದ್ದಾರೆ. ಕಾರ್ಮಿಕರು, ಕೈಗಾರಿಕೆಗಳು, ಇಂಧನ, ಮೀನುಗಾರಿಕೆ, ವಸತಿ, ಕೃಷಿ, ತೋಟಗಾರಿಕೆ ಮುಂತಾದ ಕ್ಷೇತ್ರಗಳಿಗೆ ಸರ್ಕಾರ ನೀಡುವ ನೆರವನ್ನು ಘೋಷಣೆ ಮಾಡಿದ್ದಾರೆ.
ಭಾನುವಾರ ಪ್ಯಾಕೇಜ್ನ 5ನೇ ಮತ್ತು ಕೊನೆಯ ಹಂತದ ಘೋಷಣೆಗಳನ್ನು ಹಣಕಾಸು ಸಚಿವರು ಮಾಡಲಿದ್ದಾರೆ. ಕೊರೊನಾ ಲಾಕ್ ಡೌನ್ ಪರಿಣಾಮ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಹಾಯಕವಾಗಲಿ ಎಂದು ಕೇಂದ್ರ ಪ್ಯಾಕೇಜ್ ಘೋಷಣೆ ಮಾಡಿದೆ.












Click it and Unblock the Notifications