Get Updates
Get notified of breaking news, exclusive insights, and must-see stories!

ಬಿಹಾರದಲ್ಲಿ ಮುಂದೆ ಅಧಿಕಾರದ ಗದ್ದುಗೆ ಏರುವ ಕಲಿ ಯಾರು?

ಪಾಟ್ನಾ, ಡಿಸೆಂಬರ್ 13: ಬಿಹಾರದಲ್ಲಿ ಮುಂದಿನ ಉತ್ತರಾಧಿಕಾರಿ ಯಾರು ಎಂಬುದರ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ತೇಜಸ್ವಿ ಯಾದವ್ ನೇತೃತ್ವದಲ್ಲಿ ನಡೆಯಲಿದೆ ಎಂಬ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.

ಆಡಳಿತಾರೂಢ 'ಮಹಾಘಟಬಂಧನ್' ಶಾಸಕರ ಸಭೆಯಿಂದ ಹೊರಹೊಮ್ಮಿದ ನಾಯಕರು ತಿಳಿಸಿದ್ದಾರೆ. 2024ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಹಾಘಟಬಂಧನ್ ಒಕ್ಕೂಟವು ಸೋಲಿಸಬಹುದೆಂದು ಸಮರ್ಥಿಸಿಕೊಂಡಿದ್ದರೂ ಸಹ ಸಪ್ತಪಕ್ಷದ ಜೆಡಿ(ಯು) ವರಿಷ್ಠರು ಮತ್ತೊಮ್ಮೆ ಮುಂದಿನ ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಿ ತಮ್ಮನ್ನು ತಳ್ಳಿಹಾಕಿದ್ದಾರೆ.

ರಾಜ್ಯದಲ್ಲಿ ತೇಜಸ್ವಿ ಯಾದವ್ ಭವಿಷ್ಯದ ನಾಯಕ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆರಳು ಮಾಡಿ ತೋರಿಸಿದ್ದಾರೆ. ಬಿಹಾರದಲ್ಲಿ 2025ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ತೇಜಸ್ವಿ ಯಾದವ್ ನಾಯಕತ್ವದಲ್ಲಿಯೇ ನಡೆಸುವುದಾಗಿ ಸಿಪಿಐ (ಎಂಎಲ್) ಲಿಬರೇಶನ್‌ನ ಶಾಸಕಾಂಗ ಪಕ್ಷದ ನಾಯಕ ಮಹಬೂಬ್ ಆಲಂ ಹೇಳಿದ್ದಾರೆ.

ಬಿಹಾರದಲ್ಲಿ ನಿತೀಶ್ ನಂತರ ತೇಜಸ್ವಿ ಯಾದವ್ ನಾಯಕತ್ವ

ಬಿಹಾರದಲ್ಲಿ ನಿತೀಶ್ ನಂತರ ತೇಜಸ್ವಿ ಯಾದವ್ ನಾಯಕತ್ವ

"ಬಿಜೆಪಿ ಪ್ರತಿನಿಧಿಸುವ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ಮಹಾಮೈತ್ರಿಕೂಟಕ್ಕೆ ಇದು ಲಾಭವಾಗಲಿದೆ ಎಂದು ನಾವು ಭಾವಿಸುತ್ತೇವೆ. ತೇಜಸ್ವಿ ಯಾದವ್ ಯುವ ಮತ್ತು ಶಕ್ತಿಯುತ ನಾಯಕ" ಎಂದು ಮಹಬೂಬ್ ಆಲಂ ಹೇಳಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆರ್‌ಜೆಡಿಯ ಸಂಸ್ಥಾಪಕ ಅಧ್ಯಕ್ಷ ಲಾಲೂ ಪ್ರಸಾದ್‌ರ ಕಿರಿಯ ಪುತ್ರ ತೇಜಸ್ವಿ ಯಾದವ್, ಆಗ ಮುಖ್ಯಮಂತ್ರಿಯನ್ನು ಹೊಂದಿದ್ದ 'ಮಹಾಘಟಬಂಧನ್' ಅನ್ನು 2020ರ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಶಾಲಿ ಚುನಾವಣಾ ಸಾಧನವಾಗಿ ಬಳಸಿಕೊಂಡರು. ಅದಾಗ್ಯೂ ಎನ್‌ಡಿಎ ಕಷ್ಟದಿಂದ ಹೊರಬರಲು ಸಾಧ್ಯವಾಗಲಿಲ್ಲ.

ಆಗಸ್ಟ್‌ನಲ್ಲಿ ಬಿಜೆಪಿಗೆ ಟಾಟಾ, ಬಾಯ್ ಬಾಯ್ ಎಂದಿದ್ದ ನಿತೀಶ್

ಆಗಸ್ಟ್‌ನಲ್ಲಿ ಬಿಜೆಪಿಗೆ ಟಾಟಾ, ಬಾಯ್ ಬಾಯ್ ಎಂದಿದ್ದ ನಿತೀಶ್

ಈ ಮೊದಲು ಬಿಜೆಪಿ ಜೊತೆಗೆ ಸೇರಿಕೊಂಡು ಬಿಹಾರದಲ್ಲಿ ಸರ್ಕಾರವನ್ನು ರಚಿಸಿದ್ದ ನಿತೀಶ್ ಕುಮಾರ್ ಮೈತ್ರಿಕೂಟದಿಂದ ಹೊರ ಬಂದಿದ್ದರು. ಇದೇ ವರ್ಷದ ಆಗಸ್ಟ್‌ನಲ್ಲಿ ಬಿಜೆಪಿಯನ್ನು ತ್ಯಜಿಸಿದ ಅವರು, ಲಾಲು ಪ್ರಸಾದ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು ದಂತಕಥೆ ಆಯಿತು. ಇದರ ಬೆನ್ನಲ್ಲೇ ಅವರು ಕೇಸರಿ ಪಕ್ಷದೊಂದಿಗೆ ಹೊಂದಿದ್ದ ದೀರ್ಘಕಾಲದ ಒಡನಾಟವನ್ನು ಪೂರ್ಣಗೊಳಿಸಿದ್ದೇವೆ ಎಂದು ಪ್ರತಿಪಾದಿಸುತ್ತಿದ್ದರು.

ಬಿಹಾರದಲ್ಲಿ ಲಾಲೂ ಪುತ್ರನೇ ಭವಿಷ್ಯದ ನಾಯಕ!

ಬಿಹಾರದಲ್ಲಿ ಲಾಲೂ ಪುತ್ರನೇ ಭವಿಷ್ಯದ ನಾಯಕ!

"ಭವಿಷ್ಯದಲ್ಲಿ ತೇಜಸ್ವಿ ಯಾದವ್ ಬಿಹಾರದ ಯುವ ನಾಯಕರಾಗಲಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಬಹಳ ಸಮಯದಿಂದ ಹೇಳುತ್ತಿದ್ದಾರೆ. ಅವರು ನಳಂದಾದಲ್ಲಿ ಹೇಳಿದ್ದನ್ನು ನಾನು ಇಲ್ಲಿ ಹೇಳುತ್ತಿದ್ದೇನೆ," ಎಂದು ವಿಜಯ್ ಕುಮಾರ್ ಚೌಧರಿ ಹೇಳಿದರು. ತಮ್ಮ ತವರು ಜಿಲ್ಲೆಯಲ್ಲಿ ಹಲ್ಲಿನ ಆಸ್ಪತ್ರೆಯನ್ನು ಉದ್ಘಾಟಿಸಿದ ವಿಜಯ್ ಕುಮಾರ್ ಚೌಧರಿ ತೇಜಸ್ವಿ ಯಾದವ್ ಅವರನ್ನು ಬೆಂಬಲಿಸುವ ಬಗ್ಗೆ ಮಾತನಾಡುವಾಗ ಹಿಂದಿನ ದಿನ ನಿತೀಶ್ ಕುಮಾರ್ ಭಾಷಣವನ್ನು ಉಲ್ಲೇಖಿಸುತ್ತಿದ್ದರು. ನಾವು ಒಟ್ಟಾಗಿ ಸರ್ಕಾರವನ್ನು ನಡೆಸುತ್ತಿದ್ದೇವೆ. ನಮ್ಮ ಮುಂದಿರುವ ಪ್ರಮುಖ ಸವಾಲಿನ ಮೇಲೆ ಕೇಂದ್ರೀಕರಿಸಬೇಕಾಗಿದೆ. ಅದುವೇ 2024ರ ಲೋಕಸಭೆ ಚುನಾವಣೆಯಾಗಿದೆ" ಎಂದು ತೇಜಸ್ವಿ ಯಾದವ್ ಹೇಳಿದರು.

ನಿತೀಶ್ ಕುಮಾರ್ ಪ್ರಧಾನಿ ಹುದ್ದೆ ರೇಸ್‌ನಲ್ಲಿಲ್ಲ

ನಿತೀಶ್ ಕುಮಾರ್ ಪ್ರಧಾನಿ ಹುದ್ದೆ ರೇಸ್‌ನಲ್ಲಿಲ್ಲ

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಮಂತ್ರಿ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ಶಾಸಕರ ಸಭೆಯಲ್ಲಿ ವಿಜಯ್ ಕುಮಾರ್ ಚೌಧರಿ ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದರು. ಆದರೆ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ನಿಂತರೆ 2024 ರಲ್ಲಿ ಬಿಜೆಪಿಯನ್ನು ಸೋಲಿಸಬಹುದು. ಆ ದಿಕ್ಕಿನಲ್ಲಿ ಅವರು ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ," ಎಂದರು. ಇದರ ಮಧ್ಯೆ ಈ ವರ್ಷದ ಆಗಸ್ಟ್‌ನಲ್ಲಿನ ಕ್ರಾಂತಿಯ ಪರಿಣಾಮವಾಗಿ ಅಧಿಕಾರವನ್ನು ಕಳೆದುಕೊಂಡಿರುವ ಬಿಜೆಪಿಯು ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿತು.

ನಿತೀಶ್ ಕುಮಾರ್ ಯಾರನ್ನಾದರೂ ಉತ್ತರಾಧಿಕಾರಿಯನ್ನಾಗಿ ಮಾಡಲು ಬಯಸಿದರೆ, ಅವರು ಅಧಿಕಾರವನ್ನು ಹಸ್ತಾಂತರಿಸುವ ನೈತಿಕ ಧೈರ್ಯ ತೋರಿಸಬೇಕು. ಇದು ಜೆಡಿಯುನಲ್ಲಿ ಬಂಡಾಯಕ್ಕೆ ಕಾರಣವಾಗುವುದರಿಂದ ಅವರು ಹಾಗೆ ಮಾಡಲು ಸಾಧ್ಯವಿಲ್ಲ. ತೇಜಸ್ವಿ ರಿಮೋಟ್ ಕಂಟ್ರೋಲ್ ಮೂಲಕ ಶೋ ನಡೆಸುತ್ತಿರುವ ಬಗ್ಗೆ ಅವರ ಪಕ್ಷದವರು ಈಗಾಗಲೇ ಅಸಮಾಧಾನಗೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ನಿತಿನ್ ನಬಿನ್ ದೂಷಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+