Natasha Poonawalla: ₹126 ಕೋಟಿ ಬೆಲೆಯ ದುಬಾರಿ ಉಂಗುರ ಧರಿಸಿದ ನತಾಶಾ ಪೂನಾವಾಲಾ
ಭಾರತೀಯ ಬಿಲಿಯನೇರ್ ನತಾಶಾ ಪೂನಾವಾಲಾ ಅವರು ಈಗಾಗಲೇ ತಮ್ಮ ಐಷಾರಾಮಿ ಜೀವನಶೈಲಿಯಿಂದ ಹೆಸರುವಾಸಿ. ಉನ್ನತ ದರ್ಜೆಯ ವಿನ್ಯಾಸಕ ಉಡುಗೆಗಳಿಂದ ಹಿಡಿದು ಸೊಗಸಾದ ಆಭರಣಗಳವರೆಗೆ ನತಾಶಾ ಫ್ಯಾಷನ್ ಪ್ರಿಯರ ಹುಬ್ಬೇರಿಸುತ್ತಾರೆ. ಇದೀಗ ನತಾಶಾ ತಾವು ಧರಿಸಿರುವ ದುಬಾರಿ ಉಂಗುರದಿಂದ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಆಭರಣ ತಜ್ಞ ಮತ್ತು ಫ್ಯಾಷನ್ ಕಂಟೆಂಟ್ ಕ್ರಿಯೇಟರ್ ಧ್ರುಮಿತ್ ಮೆರುಲಿಯಾ ಅವರು ನತಾಶಾ ಅವರ ಅಪರೂಪದ ಗುಲಾಬಿ ವಜ್ರದ ಉಂಗುರವನ್ನು ಬೆಳಕಿಗೆ ತಂದಿದ್ದು, ಉಂಗುರದ ಮೌಲ್ಯ ₹126 ಕೋಟಿಗೂ ಹೆಚ್ಚು ಎಂದು ಬಹಿರಂಗಪಡಿಸಿದ್ದಾರೆ. ಈ ದುಬಾರಿ ಉಂಗುರದ ಹಿಂದಿನ ಇತಿಹಾಸವನ್ನೂ ಅವರು ತಿಳಿಸಿದ್ದಾರೆ.
ಈ ಉಂಗುರವು ಒಂದು ಕಾಲದಲ್ಲಿ ಫ್ರಾನ್ಸ್ನ ಕೊನೆಯ ರಾಣಿ ಮೇರಿ ಅಂಟೋನೆಟ್ಗೆ ಸೇರಿತ್ತು ಎನ್ನಲಾಗಿದೆ. ಧ್ರುಮಿತ್ ಮೆರುಲಿಯಾ ಅವರು ನತಾಶಾ ಅವರ ವೈಯಕ್ತಿಕ ಸಂಗ್ರಹದಿಂದ ಬಂದಿರುವ ಈ ಗುಲಾಬಿ ಬಣ್ಣದ ವಜ್ರದ ಉಂಗುರದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ವಿವರ ಹಂಚಿಕೊಂಡಿದ್ದಾರೆ. ಈ ಉಂಗುರದ ಮೌಲ್ಯ ₹126 ಕೋಟಿಗೂ ಹೆಚ್ಚು ಮತ್ತು ಕೆಲವು ಆಭರಣಗಳಿಗೆ ಹೊಂದಿಕೆಯಾಗದ ಪರಂಪರೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದ್ದಾರೆ.

ಧ್ರುಮಿತ್ ಮೆರುಲಿಯಾ ಅವರು ಈ ಗುಲಾಬಿ ವಜ್ರದ ಉಂಗುರವನ್ನು ಜಗತ್ತಿಗೆ ಪರಿಚಯಿಸಿದಾಗ, ಈ ರತ್ನ ಕೇವಲ ಐಷಾರಾಮಿ ವಸ್ತುವಲ್ಲ, ಆದರೆ ಯುಗಗಳನ್ನು ದಾಟಿ ಬಂದಿರುವ ಇತಿಹಾಸದ ಒಂದು ಭಾಗವಾಗಿದೆ. ಈ ಉಂಗುರದ ಹೃದಯಭಾಗದಲ್ಲಿ ಕಂಗೊಳಿಸುವ ರತ್ನವು ಕೇವಲ ವಜ್ರವಲ್ಲ, ಅದು ವಿಶಿಷ್ಟವಾದ ಫ್ಯಾನ್ಸಿ ನೇರಳೆ-ಗುಲಾಬಿ ಬಣ್ಣದ ಚಮತ್ಕಾರ ಎಂದು ಬಣ್ಣಿಸಿದ್ದಾರೆ.
ಉಂಗುರಕ್ಕಿದೆ ಐತಿಹಾಸಿಕ ಹಿನ್ನೆಲೆ
ಈ ಉಂಗುರವನ್ನು ಮೇರಿ-ಥೆರೆಸ್ ಪಿಂಕ್ ಡೈಮಂಡ್ ರಿಂಗ್ ಎಂದು ಕರೆಯಲಾಗುತ್ತದೆ. ಇದು ಯುರೋಪಿಯನ್ ಇತಿಹಾಸದಲ್ಲಿ ಉಲ್ಲೇಖವಾಗಿರುವ ಹೆಸರಾಗಿದ್ದು, ಇದರ ಹೃದಯಭಾಗದಲ್ಲಿ 10.38-ಕ್ಯಾರೆಟ್ ಫ್ಯಾನ್ಸಿ ನೇರಳೆ-ಗುಲಾಬಿ ವಜ್ರವಿದೆ. ಇದನ್ನು ಗಾಳಿಪಟದ ಅದ್ಭುತ ಶೈಲಿಯಲ್ಲಿ ಕತ್ತರಿಸಲಾಗಿದೆ. ಈ ಕಲ್ಲು 18ನೇ ಶತಮಾನದ್ದು. ಈ ರತ್ನವು ಫ್ರೆಂಚ್ ಕ್ರಾಂತಿಯ ಮೊದಲು, ಸುಂದರಿ ರಾಣಿ ಮೇರಿ ಅಂಟೋನೆಟ್ ಅವರ ವೈಯಕ್ತಿಕ ಸಂಪತ್ತಿನ ಭಾಗವಾಗಿತ್ತು. ನಂತರ ಅವರಿಂದ ಅವರ ಮಗಳು, ಫ್ರೆಂಚ್ ರಾಣಿಯ ಏಕೈಕ ಬದುಕುಳಿದ ಮಗು ಡಚೆಸ್ ಮೇರಿ-ಥೆರೆಸ್ ಡಿಅಂಗೌಲೆಮ್ಗೆ ರವಾನಿಸಲಾಗಿತು ಎಂಬ ಉಲ್ಲೇಖವಿದೆ.
ಇದರ ಈಗಿ ಮೌಲ್ಯ ಸುಮಾರು ₹126 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ರಾಜಮನೆತನದ ಪರಂಪರೆ ಮತ್ತು ಆಧುನಿಕ ಕಲೆಯ ಮಿಶ್ರಣದೊಂದಿಗೆ ಇದು ಕೇವಲ ಒಂದು ಆಭರಣವಾಗಿ ಉಳಿಯದೆ, ಯುರೋಪಿಯನ್ ರಾಜಮನೆತನದ ವಂಶಾವಳಿಯೊಂದಿಗೆ ನೇರ ಸಂಪರ್ಕ ಹೊಂದಿರುವ ವಿರಳ ಆಭರಣದ ತುಣುಕು ಎನಿಸಿಕೊಂಡಿದೆ. ಇತ್ತೀಚೆಗೆ ಲಂಡನ್ನಲ್ಲಿ ನಡೆದ ಇಶಾ ಅಂಬಾನಿ ಅವರ "ಪಿಂಕ್ ಬಾಲ್" ಕಾರ್ಯಕ್ರಮದಲ್ಲಿ ಈ ಅಪರೂಪದ ವಜ್ರವನ್ನು ನತಾಶಾ ಪೂನಾವಾಲಾ ಧರಿಸಿ ಗಮನ ಸೆಳೆದಿದ್ದರು. ನತಾಶಾ ಈಗ ಕೇವಲ ಒಬ್ಬ ಶ್ರೀಮಂತ ಉದ್ಯಮಿಯಾಗಿರದೆ, ವಿಶ್ವದ ಅತ್ಯಂತ ಶ್ರೇಷ್ಠ ಆಭರಣ ಸಂಗ್ರಹಕಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications