ಭರವಸೆ ನೀಡಿದ್ದಕ್ಕಿಂತ ವೇಗವಾಗಿ ಪೂರ್ಣಗೊಂಡ ಗ್ರಾಮೀಣ ವಿದ್ಯುತ್ ಸಂಪರ್ಕ, ಇದು ಮೋದಿ ಹಾದಿ
Recommended Video

ನವದೆಹಲಿ, ಅಕ್ಟೋಬರ್ 24: ಆಗಸ್ಟ್ 15ನೇ ತಾರೀಕು 2015ನೇ ಇಸವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಇನ್ನು 1000 ದಿನದಲ್ಲಿ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದಿದ್ದರು. ಏಪ್ರಿಲ್ 28ನೇ ತಾರೀಕು 2018ರಲ್ಲಿ ಮಣಿಪುರದ ಪುಟ್ಟ ಗ್ರಾಮ ಲೀಸಂಗ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಮೋದಿ ಸರಕಾರ ಗ್ರಾಮೀಣ ಭಾರತದಲ್ಲಿ ಶೇ 100ರಷ್ಟು ವಿದ್ಯುತ್ ಸಂಪರ್ಕ ಒದಗಿಸಿತು.
ಇದಕ್ಕಾಗಿ ಕೇಳಿದ್ದು 1000 ದಿನಗಳು. ಆದರೆ ಗುರಿ ಈಡೇರಿದ್ದು 988 ದಿನಗಳಲ್ಲಿ. ಗ್ರಾಮೀಣ ವಿದ್ಯುದ್ದೀಕರಣ ಎಂಬುದು ಮೋದಿಯವರ ಬಹು ಪ್ರೀತಿಯ ಯೋಜನೆ. ಚುನಾವಣೆ ಭರವಸೆಗಳ ಪೈಕಿ ಅತಿ ಮುಖ್ಯವಾದದ್ದರಲ್ಲಿ ಇದು ಒಂದಾಗಿತ್ತು. 2014ರ ಚುನಾವಣೆಯ ಒಟ್ಟಾರೆ ಪ್ರಚಾರದಲ್ಲಿ ಅಭಿವೃದ್ಧಿ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ನೀಡುವ ಮಾತು ನೀಡಿದ್ದರು.
ಈ ವರ್ಷದ ಏಪ್ರಿಲ್ 29ನೇ ತಾರೀಕು ನರೇಂದ್ರ ಮೋದಿ ಟ್ವೀಟ್ ಮಾಡಿದರು. "ಭಾರತದ ಅಭಿವೃದ್ಧಿಯ ಪಥದಲ್ಲಿ ಈ ದಿನವು ಐತಿಹಾಸಿಕ ದಿನವಾಗಿ ನೆನಪಿನಲ್ಲಿ ಉಳಿಯುತ್ತದೆ". "ನಿನ್ನೆಯಷ್ಟೇ ನಾವು ನೀಡಿದ ಮಾತನ್ನು ಪೂರ್ತಿ ಮಾಡಿದ್ದೇವೆ. ಇದರಿಂದಾಗಿ ಹಲವಾರು ಭಾರತೀಯರ ಜೀವನದಲ್ಲಿ ಮುಂದೆಂದಿಗೂ ಬದಲಾವಣೆ ಆಗುತ್ತದೆ! ನನಗೆ ಬಹಳ ಸಂತಸವಾಗಿದೆ. ಭಾರತದ ಪ್ರತಿ ಹಳ್ಳಿಗೂ ಈಗ ವಿದ್ಯುತ್ ಸಂಪರ್ಕ ಇದೆ" ಎಂದಿದ್ದರು.

ಭಾರತ ಸ್ವತಂತ್ರಗೊಂಡಾಗ ಅಂದರೆ 1947ರಲ್ಲಿ 1500 ಹಳ್ಳಿಗಳ್ಳಿಗೆ ಮಾತ್ರ ವಿದ್ಯುತ್ ಸಂಪರ್ಕವಿತ್ತು. 1991ನೇ ಇಸವಿ ಹೊತ್ತಿಗೆ 481,124ಕ್ಕೆ ತಲುಪಿತು. ಇಂಧನ ಸಚಿವಾಲಯದ ವರದಿ ಪ್ರಕಾರ 597,464 ಗಣತಿಯಾದ ಹಳ್ಳಿಗಳ ಪೈಕಿ 597,464 ಹಳ್ಳಿಗಳಲ್ಲೂ (ಶೇ 100%) ಈಗ ವಿದ್ಯುತ್ ಸಂಪರ್ಕ ಇದೆ.
ಇದರ ಅರ್ಥ ಎಲ್ಲ 100% ಮನೆಗಳಲ್ಲೂ ವಿದ್ಯುತ್ ಸಂಪರ್ಕ ಇದೆ ಅಂತಲ್ಲ. ಕೇಂದ್ರ ಇಂಧನ ಸಚಿವಾಲಯದ ವ್ಯಾಖ್ಯಾನದ ಪ್ರಕಾರ, ಹಳ್ಳಿಯೊಂದು ವಿದ್ಯುದ್ದೀಕರಣ ಆಗಿದೆ ಅಂದರೆ, 10%ನಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಇರಬೇಕು. ಇನ್ನು ಸಾರ್ವಜನಿಕ ಸ್ಥಳಗಳಾದ ಶಾಲೆ, ಪಂಚಾಯಿತಿ ಕಚೇರಿ, ಆರೋಗ್ಯ ಕೇಂದ್ರ ಮತ್ತು ಸಮುದಾಯ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರಬೇಕು.
ಓಹ್, ಇಷ್ಟೇನಾ ಅಂದುಕೊಳ್ಳಬೇಡಿ. ಗ್ರಾಮೀಣ ಭಾಗದಲ್ಲಿ 100% ವಿದ್ಯುದ್ದೀಕರಣ ಅನ್ನೋದು ಅಷ್ಟು ಸುಲಭದ ಮಾತು ಖಂಡಿತಾ ಅಲ್ಲ. ಗ್ರಾಮೀಣ ಭಾಗದ ವಿದ್ಯುದ್ದೀಕರಣದ ಜತೆಗೆ ಭಾರತವನ್ನು ವಿದ್ಯುತ್ ಮಿಗಿತ ದೇಶವನ್ನಾಗಿ ಮಾಡುವುದು ಸಾಧನೆಯೇ ಸರಿ. ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಿ ಬೆಳಕು ಹೊತ್ತಿಕೊಂಡಿದೆ. ಆ ಕಾರಣಕ್ಕೆ ಮೋದಿ ಸರಕಾರದಲ್ಲಿ ಇಂಧನ ಸಚಿವಾಲಯ ಅದ್ಭುತವಾಗಿ ಕಾರ್ಯ ನಿರ್ವಹಿಸಿದೆ ಅಂತ ಹೇಳುವುದರಲ್ಲಿ ತಪ್ಪೇನೂ ಇಲ್ಲ.
ಬಿಜೆಪಿ ಸರಕಾರದ ಅವಧಿಯಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯುತ್ ಮಿಗಿತದ ದೇಶವಾಗಿದೆ. ವಿವಿಧ ಸಚಿವಾಲಯದ ಮಧ್ಯೆ ಒಂದು ತಂತು ಬೆಸೆಯುವ ಮೂಲಕ ಆ ಸಾಧನೆ ಮಾಡಲು ಸಾಧ್ಯವಾಗಿದೆ. ಇಂಧನ, ಕಲ್ಲಿದ್ದಲು ಮತ್ತು ಹೊಸದಾದ ನವೀಕರಿಸಬಹುದಾದ ಶಕ್ತಿ ಮೂಲದ ಸಚಿವಾಲಯಗಳೆಲ್ಲ ಒಟ್ಟಾಗಿ ಕೆಲಸ ಮಾಡುವ ಮೂಲಕ ಈ ಸಾಧನೆ ಸಾಧ್ಯವಾಗಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications