ನರೇಂದ್ರ ಮೋದಿ ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಮೋದಿ, ಕೆಲವು ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಿದ್ದಾರೆ. ಪಂಚರಾಜ್ಯಗಳ ಚುನಾವಣೆ 2017ರ ನಂತರ ರಕ್ಷಣಾ ಖಾತೆ ಸಚಿವರು ಬದಲಾಗಿದ್ದಾರೆ.

ನವದೆಹಲಿ, ನ.10 : ಮೇ ತಿಂಗಳಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದ್ದು, 21 ನೂತನ ಸಚಿವರನ್ನು ಸೇರಿಸಿಕೊಂಡಿದ್ದಾರೆ. ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಮೋದಿ, ಕೆಲವು ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಿದ್ದಾರೆ. ಪಂಚರಾಜ್ಯಗಳ ಚುನಾವಣೆ 2017ರ ನಂತರ ರಕ್ಷಣಾ ಖಾತೆ ಸಚಿವರು ಬದಲಾಗಿದ್ದಾರೆ.

ಡಿ.ವಿ.ಸದಾನಂದ ಗೌಡರ ಕೈಯಲ್ಲಿದ್ದ ರೈಲ್ವೆ ಖಾತೆಯನ್ನು ಸುರೇಶ್ ಪ್ರಭು ಅವರಿಗೆ ನೀಡಲಾಗಿದ್ದು, ಸದಾನಂದ ಗೌಡರಿಗೆ ಕಾನೂನು ಖಾತೆ ನೀಡಲಾಗಿದೆ. ಅರುಣ್ ಜೇಟ್ಲಿ ಅವರ ಕೈಯಲ್ಲಿದ್ದ ಗೃಹ ಖಾತೆಯನ್ನು ಗೋವಾದ ಮಾಜಿ ಸಿಎಂ ಮನೋಹರ್ ಪಾರಿಕ್ಕರ್ ಅವರಿಗೆ ನೀಡಲಾಗಿದೆ. [ರೈಲ್ವೆ ಸದಾನಂದ ಗೌಡರ ಕೈ ತಪ್ಪಲು 5 ಕಾರಣಗಳು]

Narendra Modi

ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿದ್ದ ಜಿ.ಎಂ.ಸಿದ್ದೇಶ್ವರ ಅವ­ರಿಗೆ ಬೃಹತ್‌ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಜವಾಬ್ದಾರಿ ನೀಡಲಾಗಿದೆ. ಜಿ.ಎಂ.ಸಿದ್ದೇಶ್ವರ ತೆಲುಗು ದೇಶಂನ ಅಶೋಕ್‌ ಗಜಪತಿರಾಜ್‌ ಅವರ ಅಧೀನದಲ್ಲಿ ಕೆಲಸ ಮಾಡು­ತ್ತಿದ್ದರು. ಅವರೀಗ ಶಿವಸೇನಾ ಅನಂತ­ಗೀತೆ ಅವರಿಗೆ ಕಿರಿಯ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ನರೇಂದ್ರ ಮೋದಿ ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?
ನರೇಂದ್ರ ಮೋದಿ ( ಪ್ರಧಾನಿ)
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ,
ಪಿಂಚಣಿ, ಪರಮಾಣು ಶಕ್ತಿ,
ಬ್ಯಾಹ್ಯಾಕಾಶ, ಹಂಚಿಕೆಯಾದಗ ಎಲ್ಲಾ ಖಾತೆ ಹಾಗೂ
ಎಲ್ಲಾ ಪ್ರಮುಖ ನೀತಿ ವಿಷಯ
ರಾಜನಾಥ್ ಸಿಂಗ್
ಗೃಹ ವ್ಯವಹಾರ
ಮನೋಹರ್ ಪಾರಿಕ್ಕರ್
ರಕ್ಷಣೆ(ಮಾರ್ಚ್ 10ರಂದು ರಾಜೀನಾಮೆ ಅಂಗೀಕಾರ)
ಸುಷ್ಮಾ ಸ್ವರಾಜ್
ವಿದೇಶಾಂಗ ಮತ್ತು ಸಾಗರೋತ್ತರ ವ್ಯವಹಾರ
ಅರುಣ್ ಜೇಟ್ಲಿ
ಹಣಕಾಸು, ಕಾರ್ಪೊರೇಟ್ ವ್ಯವಹಾರ, ಮಾಹಿತಿ ಮತ್ತು ಪ್ರಸಾರ, ರಕ್ಷಣಾ ಖಾತೆ(ಹೆಚ್ಚುವರಿ)
ಎಂ.ವೆಂಕಯ್ಯ ನಾಯ್ಡು
ನಗರಾಭಿವೃದ್ಧಿ, ವಸತಿ, ನಗರ ಬಡತನ ನಿರ್ಮೂಲನೆ,
ಸಂಸದೀಯ ವ್ಯವಹಾರ
ನಿತಿನ್ ಗಡ್ಕರಿ
ರಸ್ತೆ, ಸಾರಿಗೆ ಮತ್ತು ಹೆದ್ದಾರಿ, ನೌಕಾಯಾನ
ಸುರೇಶ್ ಪ್ರಭು
ರೈಲ್ವೆ
ಡಿ.ವಿ.ಸದಾನಂದ ಗೌಡ
ಕಾನೂನು ಮತ್ತು ನ್ಯಾಯಾಂಗ
ಉಮಾ ಭಾರತಿ
ಜಲ ಸಂಪನ್ಮೂಲ, ನದಿ ಅಭಿವೃದ್ಧಿ, ಗಂಗಾ ಪುನರುಜ್ಜೀವನ
ನಜ್ಮಾ ಹೆಫ್ತುಲ್ಲಾ
ಅಲ್ಪ ಸಂಖ್ಯಾತ ವ್ಯವಹಾರಗಳು
ರಾಮ ವಿಲಾಸ್ ಪಾಸ್ವಾನ್
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
ಕಲ್ರಾಜ್ ವಿಶ್ರಾ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ದಿಮೆಗಳು
ಮೇನಕಾ ಗಾಂಧಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಅನಂತ ಕುಮಾರ್
ರಾಸಾಯನಿಕ ಮತ್ತು ರಸಗೊಬ್ಬರ
ರವಿಶಂಕರ ಪ್ರಸಾದ್
ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ
ಜಗತ್ ಪ್ರಕಾಶ್ ನಡ್ಡಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅಶೋಕ್ ಗಜಪತಿ ರಾಜು
ನಾಗರಿಕ ವಿಮಾನಯಾನ
ಅನಂತ ಗೀತೆ
ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳು
ಹರ್ಸಿಮ್ರತ್ ಕೌರ್ ಬಾದಲ್
ಆಹಾರ ಸಂಸ್ಕರಣಾ ಕೈಗಾರಿಕೆಗಳು
ನರೇಂದ್ರ ಸಿಂಗ್ ತೋಮರ್
ಗಣಿಗಳು ಮತ್ತು ಉಕ್ಕು
ಚೌಧರಿ ಬೀರೇಂದರ್ ಸಿಂಗ್
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್,
ಕುಡಿಯುವ ನೀರು ಹಾಗೂ ನಿರ್ಮಲೀಕರಣ
ಜುವಲ್ ಓಮರ್
ಬುಡಕಟ್ಟು ವ್ಯವಹಾರಗಳು
ರಾಧಾ ಮೋಹನ್ ಸಿಂಗ್
ಕೃಷಿ
ತಾವರ್ ಚಂದ್ ಗೆಹ್ಲೋಟ್
ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ
ಸ್ಮೃತಿ ಇರಾನಿ
ಮಾನವ ಸಂಪನ್ಮೂಲ ಅಭಿವೃದ್ಧಿ
ಡಾ.ಹರ್ಷವರ್ಧನ್ ವಿಜ್ಞಾನ ಮತ್ತು ತಂತ್ರಜ್ಞಾನ ಭೂ ವಿಜ್ಞಾನ
ಜನರಲ್ ವಿ.ಕೆ.ಸಿಂಗ್
ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಜಾರಿ ( ಸ್ವತಂತ್ರ),
ವಿದೇಶಾಂಗ ಮತ್ತು ಸಾಗರೋತ್ತರ ವ್ಯವಹಾರಗಳು
ಇಂದರ್‌ಜಿತ್ ಸಿಂಗ್ ರಾವ್
ಯೋಜನೆ (ಸ್ವತಂತ್ರ), ರಕ್ಷಣೆ
ಸಂತೋಷ್ ಕುಮಾರ್ ಗಂಗ್ವಾರ್
ಜವಳಿ (ಸ್ವತಂತ್ರ)
ಬಂಡಾರು ದತ್ತಾತ್ರೇಯ
ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ)
ರಾಜೀವ್ ಪ್ರತಾಪ್ ರೂಡಿ
ಕೌಶಲ್ಯ ಅಭಿವೃದ್ಧಿ/ಉದ್ಯಮ ಶೀಲತೆ (ಸ್ವತಂತ್ರ),
ಸಂಸದೀಯ ವ್ಯವಹಾರಗಳು
ಶ್ರೀಪಾದ್ ಯೆಸ್ಸೊ ನಾಯ್ಕ್
ಆಯುಷ್(ಸ್ವತಂತ್ರ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಧರ್ಮೇಂದ್ರ ಪ್ರಧಾನ್
ಪೆಟ್ರೋಲಿಯಂ ನೈಸರ್ಗಿಕ ಅನಿಲ (ಸ್ವತಂತ್ರ)
ಸರ್ಬಾನಂದ ಸೋನೊವಾಲ್
ಯುವ ವ್ಯವಹಾರಗಳು ಮತ್ತು ಕ್ರೀಡೆಗಳು (ಸ್ವತಂತ್ರ)
ಪ್ರಕಾಶ್ ಜಾವಡೇಕರ್
ಪರಿಸರ, ಅರಣ್ಯ ಹಾಗೂ ಹವಾಮಾನ ವೈಫರೀತ್ಯ (ಸ್ವತಂತ್ರ)
ಪಿಯೂಶ್ ಗೋಯಲ್
ವಿದ್ಯುತ್, ಕಲ್ಲಿದ್ದಲು, ನವ ಮತ್ತು ಮರುಬಳಕೆ ಇಂಧನ (ಸ್ವತಂತ್ರ)
ಡಾ.ಜಿತೇಂದ್ರ ಸಿಂಗ್
ಈಶಾನ್ಯ ಪ್ರಾಂತ್ರ್ಯಗಳ ಅಭಿವೃದ್ಧಿ (ಸ್ವತಂತ್ರ)
ನಿರ್ಮಲಾ ಸೀತಾರಾಮನ್
ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ)
ಡಾ.ಮಹೇಶ್ ಶರ್ಮಾ
ಸಂಸ್ಕೃತಿ, ಪ್ರವಾಸೋದ್ಯಮ (ಸ್ವತಂತ್ರ),
ನಾಗರಿಕ ವಿಮಾನಯಾನ
ಮುಖ್ತಾರ್ ಅಬ್ಬಾಸ್ ನಕ್ವಿ
ಅಲ್ಪ ಸಂಖ್ಯಾತ ಮತ್ತು ಸಂಸದೀಯ ವ್ಯವಹಾರ
ರಾಮ್ ಕೃಪಾಲ್ ಯಾದವ್
ಕುಡಿಯುವ ನೀರು ಮತ್ತು ನಿರ್ಮಲೀಕರಣ
ಹರಿಭಾಯಿ ಪಾರ್ಥೀಭಾಯಿ ಚೌಧರಿ
ಗೃಹ ವ್ಯವಹಾರಗಳು
ಸನ್ವರ್ ಲಾಲ್ ಜಾಟ್
ಜಲ ಸಂಪನ್ಮೂಲ, ನದಿ ಅಭಿವೃದ್ಧಿ
ಮತ್ತು ಗಂಗಾ ಪುನರುಜ್ಜೀವನ
ಮೋಹನ್ ಭಾಯ್ ಕುಂಡರಿಯ
ಕೃಷಿ
ಗಿರಿರಾಜ್ ಸಿಂಗ್
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು
ಹನ್ಸರಾಜ್ ಗಂಗಾರಾಮ್ ಅಹಿರ್
ರಸಾಯನಿಕ ಮತ್ತು ರಸಗೊಬ್ಬರ
ಜಿ.ಎಂ.ಸಿದ್ದೇಶ್ವರ ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳು
ಮನೋಜ್ ಸಿನ್ಹಾ
ರೈಲ್ವೆ
ನಿಹಾಲ್ ಚಂದ್‌
ಪಂಚಾಯತ್ ರಾಜ್
ಉಪೇಂದ್ರ ಕುಶ್ವಾಹ
ಮಾನವ ಸಂಪನ್ಮೂಲ ಅಭಿವೃದ್ಧಿ
ರಾಧಾ ಕೃಷ್ಣನ್ ಪಿ
ರಸ್ತೆ ಸಾರಿಗೆ, ಹೆದ್ದಾರಿ ಮತ್ತು ನೌಕಾಯಾನ
ಕಿರಣ್ ರಿಜಿಜು
ಗೃಹ ವ್ಯವಹಾರ
ಕೃಷ್ಣನ್ ಪಾಲ್
ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ
ಡಾ.ಸಂಜೀವ್ ಕುಮಾರ್
ಕೃಷಿ
ಮನುಷ್ಕ್ ಭಾಯಿ ಧನ್‌ಜಿಭಾಯಿ
ಬುಡಕಟ್ಟು ವ್ಯವಹಾರ
ರಾವ್ ಸಾಹೇಬ್ ದಾದಾರಾವ್ ದನ್ವೆ
ಗ್ರಾಹಕ ವ್ಯವಹಾರ,
ಆಹಾರ ಮತ್ತು ಸಾರ್ವಜನಿಕ ವಿತರಣೆ
ವಿಷ್ಣುದೇವ್ ಸಾಯಿ

ಗಣಿ ಮತ್ತು ಉಕ್ಕು

ಸುದರ್ಶನ್ ಭಗತ್
ಗ್ರಾಮೀಣಾಭಿವೃದ್ಧಿ
ಪ್ರೊ.ರಾಮ್‌ಶಂಕರ್ ಮಾನಸ ಸಂಪನ್ಮೂಲ ಅಭಿವೃದ್ಧಿ
ವೈ.ಎಸ್.ಚೌಧರಿ ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ
ಜಯಂತ್ ಸಿನ್ಹಾ
ಹಣಕಾಸು
ರಾಜ್ಯವರ್ಧನ್ ಸಿಂಗ್ ರಾಥೋಡ್
ಮಾಹಿತಿ ಮತ್ತು ಪ್ರಸಾರ
ಬಾಬುಲ್ ಸುಪ್ರಿಯಾ ಬಾರಲ್
ಗ್ರಾಮೀಣಾಭಿವೃದ್ಧಿ, ವಸತಿ ಮತ್ತು ನಗರ
ಬಡತನ ನಿರ್ಮೂಲನೆ
ಸಾಧ್ವಿ ನಿರಂಜನ್ ಜ್ಯೋತಿ
ಆಹಾರ ಸಂಸ್ಕರಣಾ ಕೈಗಾರಿಕೆಗಳು
ವಿಜಯ್ ಸಂಪ್ಲಾ
ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+