Get Updates
Get notified of breaking news, exclusive insights, and must-see stories!

Morbi Tragedy: ಸೇತುವೆ ನವೀಕರಿಸಿದ ಕಂಪನಿ ಮಾಲೀಕನೇ A1 ಆರೋಪಿ, ಚಾರ್ಚ್‌ಸೀಟ್‌ನಲ್ಲಿ ಏನಿದೆ? ತಿಳಿಯಿರಿ

ಗುಜರಾತ್ ಮೊರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ನಲ್ಲಿ ಪ್ರಧಾನ ಆರೋಪಿಯನ್ನು ಎಂದು ಹೆಸರಿಸಲಾಗಿದೆ

ಗುಜರಾತ್ ಮೊರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇತುವೆ ನವೀಕರಣ ಸಂಸ್ಥೆಯ ಮುಖ್ಯಸ್ಥನನ್ನು ಚಾರ್ಜ್‌ಶೀಟ್‌ನಲ್ಲಿ ಪ್ರಧಾನ ಆರೋಪಿ ಎಂದು ಹೆಸರಿಸಲಾಗಿದೆ. ಗುಜರಾತ್‌ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆ ಕುಸಿದು 135 ಜನರು ಸಾವನ್ನಪ್ಪಿದರು. ಈ ಘಟನೆ ನಡೆದು ಸುಮಾರು ಮೂರು ತಿಂಗಳ ನಂತರ ಸೇತುವೆಯ ನಿರ್ವಹಣೆ ಮತ್ತು ದುರಸ್ತಿಗಾಗಿ ನೇಮಕಗೊಂಡ ಕಂಪನಿಯ ಉನ್ನತ ಮುಖ್ಯಸ್ಥ ಜಯಸುಖ್ ಪಟೇಲ್ ಅವರನ್ನು ಚಾರ್ಜ್‌ಶೀಟ್‌ನಲ್ಲಿ ಪ್ರಧಾನ ಆರೋಪಿ ಎಂದು ಹೆಸರಿಸಲಾಗಿದೆ.

ಘಟನೆ ಬಳಿಕ ಒರೆವಾ ಗ್ರೂಪ್‌ನ ಪ್ರವರ್ತಕ ಮತ್ತು ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ನಾಪತ್ತೆಯಾಗಿದ್ದಾರೆ. ಕಳೆದ ವಾರ ಆತನ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲು ಜನವರಿ 16ರಂದು ಜಾಮೀನು ಕೋರಿ ಅರ್ಜಿ ಅವರು ಸಲ್ಲಿಸಿದ್ದರು. 1,262 ಪುಟಗಳ ಚಾರ್ಜ್ ಶೀಟ್ ಅವರನ್ನು ಪ್ರಮುಖ ಆರೋಪಿಯಾಗಿದ್ದು ಆದರೆ ಅವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಒರೆವಾ ಗ್ರೂಪ್ ಕಂಪನಿ ಮುಖ್ಯಸ್ಥ ಪ್ರಧಾನ ಆರೋಪಿ

ಒರೆವಾ ಗ್ರೂಪ್ ಕಂಪನಿ ಮುಖ್ಯಸ್ಥ ಪ್ರಧಾನ ಆರೋಪಿ

"ಆದಷ್ಟು ಬೇಗ ಆತನನ್ನು ಬಂಧಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯ ಆತನನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ" ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಯಾದವ್ ಹೇಳಿದ್ದಾರೆ. ಅಜಂತಾ ಬ್ರಾಂಡ್‌ನಡಿಯಲ್ಲಿ ಗೋಡೆ ಗಡಿಯಾರಗಳನ್ನು ತಯಾರಿಸಲು ಹೆಸರುವಾಸಿಯಾದ ಒರೆವಾ ಗ್ರೂಪ್ ಕಂಪನಿಗೆ, ಮಚ್ಚು ನದಿಯ ಮೇಲಿನ 100 ವರ್ಷಗಳಷ್ಟು ಹಳೆಯದಾದ ತೂಗು ಸೇತುವೆಯ ನವೀಕರಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ನೀಡಲಾಗಿತ್ತು. ನವೀಕರಣ, ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಸೇತುವೆ ಪುನಃ ತೆರೆದ ನಾಲ್ಕು ದಿನಗಳ ನಂತರ ಅಕ್ಟೋಬರ್ 30 ರಂದು ಸೇತುವೆ ಕುಸಿದಿದೆ.

ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚನೆ

ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚನೆ

ಮೊರ್ಬಿ ಸೇತುವೆ ಕುಸಿತಕ್ಕೆ ಕಾರಣ ಪತ್ತೆ ಹಚ್ಚಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತು. ಈ ತಂಡ ಒರೆವಾ ಗ್ರೂಪ್‌ನ ಕಳಪೆ ನಿರ್ವಹಣೆ, ಸೇತುವೆಯ ಮೇಲಿನ ಜನರ ಸಂಖ್ಯೆಯನ್ನು ಮಿತಿಗೊಳಿಸಲು ವಿಫಲತೆ ಮತ್ತು ಟಿಕೆಟ್‌ಗಳ ಅನಿಯಂತ್ರಿತ ಮಾರಾಟದಂತಹ ಹಲವಾರು ಲೋಪಗಳಿಂದಾಗಿ ಸೇತುವೆ ಕುಸಿದಿದೆ ಎಂದು ಉಲ್ಲೇಖಿಸಿದೆ. ಸುಮಾರು 300 ಜನರು ಸೇತುವೆಯ ಮೇಲೆ ಇದ್ದು ಹೆಚ್ಚು ಭಾರದಿಂದಾಗಿ ಕೇಬಲ್‌ಗಳು ತುಂಡಾಗಿ ಸೇತುವೆ ಕುಸಿದಿದೆ ಎಂದು ಪೊಲೀಸರು ಹೇಳುತ್ತಾರೆ.

ಪ್ರತಿಪಕ್ಷಗಳ ಆರೋಪವೇನು?

ಪ್ರತಿಪಕ್ಷಗಳ ಆರೋಪವೇನು?

ಉಪಗುತ್ತಿಗೆದಾರರು, ಟಿಕೆಟ್ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ದಿನಗೂಲಿ ಕಾರ್ಮಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಈ ಹಿಂದೆ ಬಂಧಿತರಾದ ಒಂಬತ್ತು ಮಂದಿಯೊಂದಿಗೆ ಪಟೇಲ್ ಅವರನ್ನು 10 ನೇ ಆರೋಪಿ ಎಂದು ಪಟ್ಟಿ ಮಾಡಲಾಗಿದೆ. ಆದರೆ ಈ ಘಟನೆಯಿಂದ ದೊಡ್ಡ ಕೈಗಳಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಗುಜರಾತ್‌ನ ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯವಾಗಿ ಪ್ರಭಾವಿ ಕೈಗಾರಿಕೋದ್ಯಮಿಯನ್ನು ರಕ್ಷಿಸುವ ಆರೋಪವನ್ನು ಎದುರಿಸುತ್ತಿದೆ.

ಎಫ್‌ಎಸ್‌ಎಲ್ ವರದಿ

ಎಫ್‌ಎಸ್‌ಎಲ್ ವರದಿ

ಘಟನೆಯ ಕುರಿತಾದ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಯು ಸೇತುವೆಯ ನವೀಕರಣದ ಸಮಯದಲ್ಲಿ ತುಕ್ಕು ಹಿಡಿದ ಕೇಬಲ್‌ಗಳು, ಮುರಿದ ಆಂಕರ್ ಪಿನ್‌ಗಳು ಮತ್ತು ಸಡಿಲವಾದ ಬೋಲ್ಟ್‌ಗಳನ್ನು ಪರಿಹರಿಸಲಾಗಿಲ್ಲ ಎಂದು ಬಹಿರಂಗಪಡಿಸಿದೆ. ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯುವ ಮೊದಲು ಅದರ ಭಾರ ಹೊರುವ ಸಾಮರ್ಥ್ಯವನ್ನು ನಿರ್ಣಯಿಸಲು ಒರೆವಾ ಗ್ರೂಪ್ ಯಾವುದೇ ಪರಿಣಿತ ಏಜೆನ್ಸಿಯನ್ನು ನೇಮಿಸಿಕೊಂಡಿಲ್ಲ ಎಂದು ವರದಿ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+