Get Updates
Get notified of breaking news, exclusive insights, and must-see stories!

Month of June Speciality: ಜೂನ್‌ನಲ್ಲಿ ಭಾರತದಲ್ಲಿ ಜರುಗಿದ ಮಹತ್ವದ ಘಟನೆಗಳು ಇವು, ಏನೇನು ತಿಳಿಯಿರಿ

ಬೆಂಗಳೂರು, ಮೇ 31: ಭಾರತದ ಸರ್ಕಾರದ ಪ್ರಮುಖ ಆದೇಶಗಳು, ಜನತಾ ಪಕ್ಷದ ಆಡಳಿತ ಆರಂಭ, ಪರಮಾಣು ವಿದ್ಯುತ್ ಕೇಂದ್ರದ ಆರಂಭ ಸೇರಿದಂತೆ ಅನೇಕ ಘಟನೆಗಳು ಇದೇ ಜೂನ್ ತಿಂಗಳಲ್ಲಿ ನಡೆದಿವೆ. ಈ ಕುರಿತ ಸಂಪೂರ್ಣ ವಿವರ ಹೀಗಿದೆ.

* ಜೂನ್ 5 ರಂದು (1975ರಲ್ಲಿ) ಭಾರತದ ಮೊದಲ ಪರಮಾಣು ವಿದ್ಯುತ್ ಸ್ಥಾವರ ಮತ್ತು ತಾರಾಪುರ ಪರಮಾಣು ವಿದ್ಯುತ್ ಕೇಂದ್ರವು ಕರ್ನಾಟಕದ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತು.

Month of June Specialty: Know These Important Events That Happened In India In June

* ಜೂನ್ 11ರಂದು (1984ರಲ್ಲಿ) ಆಪರೇಷನ್ ಬ್ಲೂ ಸ್ಟಾರ್, ಅಮೃತಸರದ ಗೋಲ್ಡನ್ ಟೆಂಪಲ್ ಸಂಕೀರ್ಣದಿಂದ ಸಿಖ್ ಪ್ರತ್ಯೇಕತಾವಾದಿಗಳನ್ನು ತೆಗೆದುಹಾಕಲು ಭಾರತದ ಸರ್ಕಾರದ ಆದೇಶಿಸಿತ್ತು. ಅದರ ಆಧಾರದಲ್ಲಿ ಮಿಲಿಟರಿ ಉದ್ದೇಶಿತ ಕಾರ್ಯಚರಣೆ ನಡೆಸಿತ್ತು.

* ಜೂನ್ 21ರಂದು (1977ರಲ್ಲಿ) ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷವು ಅಂದು ಆಡಳಿತದಲ್ಲಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಿತು. ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸಿದ ನಂತರ ಜನತಾ ಪಕ್ಷವು ಅಧಕಾರ ಚುಕ್ಕಾಣಿ ಹಿಡಿಯಿತು.

* ಜೂನ್ 11ರಂದು (1991ರಲ್ಲಿ) ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಆತ್ಮಹತ್ಯಾ ಬಾಂಬರ್‌ನಿಂದ ಹತ್ಯೆ ಮಾಡಲಾಗಿತ್ತು. ಈ ದುರಂತ ಘಟನೆಯು ರಾಷ್ಟ್ರ ರಾಜಕೀಯದ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು. ಸಾಕಷ್ಟು ಚರ್ಚೆಗಳನ್ನು ಅಂದು ಹುಟ್ಟುಹಾಕಿತ್ತು.

Month of June Specialty: Know These Important Events That Happened In India In June

* ಜೂನ್ 11ರಂದು (1998ರಲ್ಲಿ) ಭಾರತವು ರಾಜಸ್ಥಾನದ ಪೋಖ್ರಾನ್‌ನಲ್ಲಿ ಥರ್ಮೋನ್ಯೂಕ್ಲಿಯರ್ ಸಾಧನ ಸೇರಿದಂತೆ ಪರಮಾಣು ಪರೀಕ್ಷೆಗಳ ಸರಣಿಯನ್ನು ನಡೆಸಿತು. ಇದು ಭಾರತದ ಪರಮಾಣು ಸಾಮರ್ಥ್ಯಗಳಲ್ಲಿ ಅತ್ಯದ್ಭುತ ಬೆಳವಣಿಗೆಗೆ ಕಾರವಾಯಿತು.

* ಜೂನ್ 21ರಂದು (1990ರಲ್ಲಿ)ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಕಾಶ್ಮೀರದಲ್ಲಿ ಹಿಂಸಾಚಾರ ನಡೆಸಿದ್ದರು. ಈ ಘಟನೆ ಅಂದು ಕಾಶ್ಮೀರಿ ಪ್ರದೇಶದಿಂದ ಪಂಡಿತರ ಸಾಮೂಹಿಕ ವಲಸೆಗೆ ಹೋಗುವಂತಾಯಿತು. ಕೆಲವರ ಹತ್ಯೆ ಸಹ ನಡೆಯಿತು.

* ಜೂನ್ 22ರಂದು (1996ರಲ್ಲಿ) ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ ಮೂಲಕ ಮೊದಲ ಬಾರಿಗೆ ದೇಶದ ಪ್ರಧಾನಮಂತ್ರಿಗಳಾಗಿ ಆಡಳಿತ ಆರಂಭಿಸಿದ್ದು ಇದೇ ಜೂನ್ ತಿಂಗಳಲ್ಲಿ.

* ಜೂನ್ 25ರಂದು (1975ರಲ್ಲಿ) ಭಾರತದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಆಯಿತು. ಇದು ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿತು. ಇದು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಂದ ಸರ್ವಾಧಿಕಾರಿ ಆಡಳಿತದ ಪ್ರತೀಕವಾಯಿತು.

* ಜೂನ್ 30 ರಂದು (1985ರಲ್ಲಿ) ಏರ್ ಇಂಡಿಯಾ ವಿಮಾನ 182 ಬೋಯಿಂಗ್ 747, ಐರ್ಲೆಂಡ್ ಕರಾವಳಿಯಲ್ಲಿ ಬಾಂಬ್‌ನಿಂದ ಸ್ಪೋಟವಾಯಿತು. ಈ ದುರದ್ದೇಶದ ಘಟನೆಯಿಂದ ವಿಮಾನದಲ್ಲಿದ್ದ ಸುಮಾರು 320ಕ್ಕೂ ಹೆಚ್ಚು ಜೀವಗಳು ಸಾವನ್ನಪ್ಪಿದವು. ಸ್ವಾತಂತ್ರ್ಯ ಬಯಸುತ್ತಿರುವ ಸಿಖ್ ಉಗ್ರಗಾಮಿಗಳು ಈ ದಾಳಿಗೆ ಕಾರಣ ಎಂಬುದು ತಿಳಿದು ಬಂತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+