MLA slapped Voter: ವೋಟ್ ಹಾಕೋಕೆ ಬಂದ ಮತದಾರ ಎಂಎಲ್ಎಗೆ ಗೂಸಾ ಕೊಟ್ಟಿದ್ದೇಕೆ? ಮುಂದೇನಾಯ್ತು?
ಲೋಕಸಭೆ ಚುನಾವಣೆ 2024ರ ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 175 ಸ್ಥಾನಗಳಿಗೆ ಮತದಾನ (ಮೇ 13) ನಡೆಯಿತು. ಈ ವೇಳೆ ಶಾಸಕ ಹಾಗೂ ಮತದಾರನ ನಡುವೆ ಮಾರಾಮರಿ ನಡೆದಿದೆ. ಅದು ಕೂಡ ಮತದಾನ ಕೇಂದ್ರದಲ್ಲಿ ಇಬ್ಬರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಮಾಜಕ್ಕೆ ಮಾದರಿಯಾಗಿರಬೇಕಾಗಿದ್ದ ಜನನಾಯಕನ ಇಂಥಹ ವರ್ತನೆಗೆ ಎಲ್ಲಡೆ ಆಕ್ರೊಶ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ಸಿಪಿ ಶಾಸಕ ಎ ಶಿವಕುಮಾರ್ ಅವರು ಮತದಾನ ಕೇಂದ್ರದಲ್ಲಿ ಮತದಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಪಕ್ಷದ ಶಾಸಕ ಎ ಶಿವಕುಮಾರ್ ಮತದಾರನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯವಿದೆ. ಮತದಾರನು ಕೂಡ ಶಾಸಕರ ವಿರುದ್ಧ ಪ್ರತಿದಾಳಿ ನಡೆಸಿ ಥಳಿಸಿದ್ದಾನೆ. ವಿಡಿಯೊದಲ್ಲಿ ಶಿವಕುಮಾರ್ ಹಾಗೂ ಮತದಾರ ಇಬ್ಬರೂ ಪರಸ್ಪರ ಹಲ್ಲೆ ಮಾಡುತ್ತಿರುವುದು ಕಂಡು ಬರುತ್ತದೆ.
VVIP arrogance & goondagardi on full display
— Shehzad Jai Hind (Modi Ka Parivar) (@Shehzad_Ind) May 13, 2024
YSRCP MLA A Sivakumar slaps voter in Andhra Pradesh's Guntur
Telangana Congress neta kicks voter
Congress’ Randeep Surjewala once said Janta is Rakshas !
If this is how they are treating voters at the polling booth imagine what… pic.twitter.com/w3RU0TLlL1
ಶಾಸಕ ಎ ಶಿವಕುಮಾರ್ ಸಿಟ್ಟಿನಿಂದ ಮತದಾರನತ್ತ ಸಾಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮತದಾರ ಶಿವಕುಮಾರ್ಗೆ ಕಪಾಳಮೋಕ್ಷ ಮಾಡುವ ಮೂಲಕ ಪ್ರತಿದಾಳಿ ಮಾಡುವುದಿದೆ. ಇದಾದ ಬಳಿಕ ಶಾಸಕರ ಬೆಂಬಲಿಗರು ಮತದಾರನಿಗೆ ಥಳಿಸಿದ್ದಾರೆ.
ಬಿಜೆಪಿ ಮುಖಂಡ ಶೆಹಜಾದ್ ಪೂನಾವಾಲಾ ವಾಗ್ದಾಳಿ
ಈ ವಿಡಿಯೋವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ಶೆಹಜಾದ್ ಪೂನಾವಾಲಾ ಕೂಡ ಹಂಚಿಕೊಂಡಿದ್ದಾರೆ. ಶೆಹಜಾದ್ ಪೂನಾವಾಲಾ ಅವರು ಶಾಸಕರ ವರ್ತನೆಯನ್ನು ಅಹಂಕಾರ ಮತ್ತು ಗೂಂಡಾಗಿರಿ ಎಂದು ಕರೆದಿದ್ದಾರೆ.
VIDEO| Lok Sabha Elections 2024: YSRCP leader VS Shivakumar engaged in a slapping battle with a voter at a polling booth of Andhra Pradesh's Guntur. #LSPolls2024WithPTI #LokSabhaElections2024
— Press Trust of India (@PTI_News) May 13, 2024
(Full video available on PTI Videos - https://t.co/n147TvqRQz) pic.twitter.com/SB9gqgmsGp
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಶೆಹಜಾದ್ ಪೂನಾವಾಲಾ, "ವಿವಿಐಪಿ ದುರಹಂಕಾರ ಮತ್ತು ಗೂಂಡಾಗಿರಿ ಎದ್ದು ಕಾಣುತ್ತಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ವೈಎಸ್ಆರ್ಸಿಪಿ ಶಾಸಕ ಎ ಶಿವಕುಮಾರ್ ಮತದಾರರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಮತಗಟ್ಟೆಯಲ್ಲಿ ಮತದಾರರೊಂದಿಗೆ ಈ ರೀತಿ ವರ್ತಿಸುತ್ತಿದ್ದರೆ, ಚುನಾವಣೆಯ ನಂತರ ಅವರು ಏನು ಮಾಡುತ್ತಾರೆ ಎಂದು ಯೋಚಿಸಿ. ಈ ಪಕ್ಷಗಳನ್ನು ಮತ್ತು ನಾಯಕರನ್ನು ಹೊರಹಾಕುವ ಸಮಯ ಬಂದಿದೆ!'' ಎಮದು ಬರೆದಿದ್ದಾರೆ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications