ತಮಿಳುನಾಡಿನಲ್ಲಿ ಹಾಲಿನ ಬೆಲೆ ಏರಿಕೆ: ಮಾರಾಟದಲ್ಲಿ ಶೇ. 5ರಷ್ಟು ಕುಸಿತ
ಚೆನ್ನೈ, ನವೆಂಬರ್ 21: ತಮಿಳುನಾಡಿನಲ್ಲಿ ಹಾಲಿನ ಬೆಲೆಯಲ್ಲಿನ ಹೆಚ್ಚಳದ ಪರಿಣಾಮದಿಂದ ಪ್ರೀಮಿಯಂ ಮತ್ತು ಟೀ ಮೇಟ್ (ಕೆಂಪು) ಹಾಲಿನ ಪ್ಯಾಕೇಟ್ಗಳ ದೈನಂದಿನ ಮಾರಾಟವು 5% ರಷ್ಟು ಕುಸಿತ ಕಂಡಿದೆ.
ತಮಿಳುನಾಡಿನ ಹಾಲಿನ ಬ್ರ್ಯಾಂಡ್ ಆದ ಆವಿನ್ ಮೂರು ವಾರಗಳ ಹಿಂದೆ ಈ ಎರಡು ಬ್ರಾಂಡ್ಗಳ ಪ್ಯಾಕೇಟ್ಗಳ ಬೆಲೆಯನ್ನು ಪ್ರತಿ ಲೀಟರ್ಗೆ ಕ್ರಮವಾಗಿ 12 ಮತ್ತು 11 ರೂಪಾಯಿಯಷ್ಟು ಹೆಚ್ಚಿಸಿತ್ತು. ಇದರಿಂದ ಕಡಿಮೆ ಸಂಖ್ಯೆಯ ಜನರು ಮಾತ್ರ ಆವಿನ್ನ ಪ್ರಮಾಣಿತ (ಗ್ರೀನ್ ಮ್ಯಾಜಿಕ್) ಹಾಲನ್ನು ಖರೀದಿಸಲು ಪ್ರಾರಂಭಿಸಿದ್ದರು. ಅಲ್ಲದೆ ಹೆಚ್ಚಿನ ಆವಿನ್ ಹಾಲು ಖರೀದಿ ಮಾಡುವ ಗ್ರಾಹಕರು ಎಮ್ಮೆ ಹಾಲು ಖರೀದಿಸಲು ಮುಂದಾದರು.
ತಮಿಳುನಾಡಿನಲ್ಲಿ ಹಾಲಿನ ಬೆಲೆ ಹೆಚ್ಚಳ ಮಾಡಿರುವುದರಿಂದ ಬಿಜೆಪಿ ಹಾಗೂ ಇತರ ಪಕ್ಷಗಳು ಪ್ರತಿಭಟನೆ ನಡೆಸಿವೆ. ''ಬೆಲೆ ಏರಿಕೆ ನೇರವಾಗಿ ಬಡವರ ಹೊಟ್ಟೆ ಮೇಲೆ ಹೊಡೆದ ಹೊಡೆತವಾಗಿದೆ. ಇದರಿಂದ ಜನಸಾಮಾನ್ಯ ಜೇಬಿಗೆ ಕತ್ತರಿ ಬೀಳಲಿದೆ. ಹಾಗಾಗಿ ಏರಿಸಿದ ಬೆಲೆಯನ್ನು ಹಿಂಪಡೆಯಬೇಕು'' ಎಂದು ವಿಪಕ್ಷಗಳು ಆಗ್ರಹಿಸಿವೆ.

ತಮಿಳುನಾಡಿನ ಮಧುರೈನಂತಹ ದಕ್ಷಿಣದ ಜಿಲ್ಲೆಗಲ್ಲಿ ಜನರು ಖಾಸಗಿ ಮಾರಾಟಗಾರರಿಂದ ಹಾಲನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಇದು ಮಾರಾಟಗಾರರಿಗೆ ಹೆಚ್ಚಿನ ಲಾಭಾಂಶವನ್ನು ನೀಡುತ್ತದೆ. ಚಿಲ್ಲರೆ ವ್ಯಾಪಾರಿಗಳಿಗೆ ವಿತರಿಸಲಾದ ಪ್ರತಿ ಲೀಟರ್ ಹಾಲಿಗೆ ಹೋಲಿಸಿದರೆ ಆವಿನ್ ವಿತರಕರು ಸಾಮಾನ್ಯವಾಗಿ 2 ಮತ್ತು 3 ರೂಪಾಯಿಗಳ ಲಾಭ ಪಡೆಯುತ್ತಾರೆ.
''ಖಾಸಗಿ ಡೈರಿಗಳು ತಮ್ಮ ವಿತರಕರಿಗೆ ಪ್ರತಿ ಲೀಟರ್ಗೆ 6.50 ರೂಪಾಯಿವರೆಗೆ ಪಾವತಿಸುತ್ತವೆ. ಮಧುರೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಸ್ತುತ ಆವಿನ್ ಹಾಲಿನ ಬೆಲೆ ಏರಿಕೆ ಕಾರಣದಿಂದ ಟೀ ಅಂಗಡಿಗಳು ತಮ್ಮ ಬೆಲೆಯನ್ನು ಪ್ರತಿ ಕಪ್ಗೆ 2 ರೂಪಾಯಿಯಷ್ಟು ಹೆಚ್ಚಿಸುವಂತೆ ಒತ್ತಾಯಿಸಲಾಗಿದೆ'' ಎಂದು ತಮಿಳುನಾಡು ಹಾಲು ವಿತರಕರ ಕಲ್ಯಾಣ ಸಂಘದ ಎಸ್ ಎ ಪೊನ್ನುಸಾಮಿ ಹೇಳಿದ್ದಾರೆ.

ಹಾಲಿನ ಬೆಲೆ ಹೆಚ್ಚಾದರೂ ಚೆನ್ನೈನಲ್ಲಿ ಟೀ ಬೆಲೆ ಬದಲಾಗಿಲ್ಲ. ಏಕೆಂದರೆ ಅಂಗಡಿಗಳು ಆಂಧ್ರಪ್ರದೇಶದ ಖಾಸಗಿ ಡೈರಿಗಳಿಂದ ಹಾಲಿನ ಸರಬರಾಜು ಮಾಡುವ ಎಮ್ಮೆ ಹಾಲನ್ನು ಬಳಸುವುದನ್ನು ಮುಂದುವರೆಸುತ್ತಿವೆ. ತಮಿಳುನಾಡು ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಎಸ್ ಎಂ ನಾಸರ್ ಅವರು ಟೀ ಅಂಗಡಿಗಳು ಮಾತ್ರವಲ್ಲದೆ ರೆಸ್ಟೋರೆಂಟ್ಗಳು, ಮದುವೆಗಳು ಮತ್ತು ಅಡುಗೆ ಕಂಪನಿಗಳು ಹಾಗೂ ಹೋಟೆಲ್ಗಳಲ್ಲಿಯೂ ಸಹ ಬೃಹತ್ ಹಾಗೂ ಚಿಲ್ಲರೆ ಆರ್ಡರ್ಗಳನ್ನು ನೀಡುವ ಮೂಲಕ ವಾಣಿಜ್ಯ ಹಾಲಿನ ಪ್ಯಾಕೆಟ್ಗಳ ಮಾರಾಟವನ್ನು ಹೆಚ್ಚಿಸಲು ಈಗಿನಿಂದಲೇ ಕ್ರಮವಹಿಸುವಂತೆ ಆವಿನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆವಿನ್ನ ವ್ಯವಸ್ಥಾಪಕ ನಿರ್ದೇಶಕ ಸುಬ್ಬಯ್ಯ ಮಾತನಾಡಿ, ಐಸ್ಕ್ರೀಂ, ಮೊಸರು, ಮಜ್ಜಿಗೆ ಮತ್ತು ಲಸ್ಸಿಗಳನ್ನು ಉತ್ಪಾದಿಸುವ ಉತ್ಪಾದನಾ ಸೌಲಭ್ಯಗಳನ್ನು ರಾಜ್ಯಾದ್ಯಂತ ಸುಧಾರಿಸಲಾಗುತ್ತಿದೆ. ಪ್ರಸಕ್ತ ಹಿಂಗಾರು ಹಂಗಾಮಿನಲ್ಲೂ ದಿನಕ್ಕೆ ಸುಮಾರು 36 ಲಕ್ಷ ಲೀಟರ್ ಹಾಲು ಮಾರಾಟ ಮಾಡುವಲ್ಲಿ ಆವಿನ್ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications