ನಿಗೂಢ ಗಣಿಯಲ್ಲಿ 13 ಕಾರ್ಮಿಕರ ನಾಪತ್ತೆ, 2 ದಿನವಾದರೂ ಸುದ್ದಿಯಿಲ್ಲ!
ಶಿಲ್ಲಾಂಗ್(ಮೇಘಾಲಯ), ಡಿಸೆಂಬರ್ 15: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ 13 ಕಾರ್ಮಿಕರು ಗಣಿಯ ಆಳದಲ್ಲಿ ಸಿಲುಕಿಕೊಂಡಿದ್ದು ಎರಡು ದಿನವಾದರೂ ಒಬ್ಬರೂ ಪತ್ತೆಯಾಗಿಲ್ಲ.
ಘಟಣೆ ಡಿಸೆಂಬರ್ 12 ರಂದು ನಡೆದಿದ್ದು, ಇದುವರೆಗೂ ಕಾರ್ಮಿಕರ ಪತ್ತೆಯಾಗಿಲ್ಲದ ಕಾರಣ, ಅವರೆಲ್ಲರೂ ಮೃತರಾಗಿರಬಹುದು ಎಂದು ಶಂಕಿಸಲಾಗಿದೆ.
ಕಲ್ಲು ಗಣಿಯೊಳಗೆ ಹಠಾತ್ ಪ್ರವಾಹ, 13 ಕಾರ್ಮಿಕರು ಸತ್ತಿರುವ ಶಂಕೆ
ಗಣಿಯೊಳಗೆ ಬಿಲದಂಥ ಪ್ರದೇಶವಿದ್ದು, ಅವರೆಲ್ಲರೂ ಅಲ್ಲಿಯೇ ಸಿಲುಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಿ, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಈ ಆಳ ಪ್ರದೇಶದಲ್ಲಿ ನೀರು ಸಹ ತುಂಬಿಕೊಂಡಿದ್ದು, ರಕ್ಷಣಾ ಸಿಬ್ಬಂದಿ ನೀರನ್ನು ಮೇಲಕ್ಕೆತ್ತುವ ಕಾರ್ಯ ಮಾಡುತ್ತಿದ್ದಾರೆ.
ರಾಷ್ಟ್ರೀಯ ವಿಪತ್ತು ದಳ, ರಾಜ್ಯ ವಿಪತ್ತು ದಳದ ಸುಮಾರು ನೂರಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಗಣಿಯಾಳದಲಲಿ ಸಿಲುಕಿಕೊಂಡರವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಎರಡು ದಿನವಾದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಗ್ರಾನೈಟ್ ಗಣಿಗಾರಿಕೆ ಪರವಾನಗಿ ಪ್ರಕ್ರಿಯೆ ಸರಳಗೊಳಿಸಲು ಕುಮಾರಸ್ವಾಮಿ ಸೂಚನೆ
ಗಣಿಯ ಯಾವುದೇ ನಕ್ಷೆ ಇಲ್ಲದ ಕಾರಣ, ಇವರೆಲ್ಲ ಎಲ್ಲಿರಬಹದು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ.
ಮೇಘಾಲಯದಲ್ಲಿ ಇಲಿಯ ಬಿಲದಂಥ ಈ ಗಣಿಗಳು ಸರ್ವೇಸಾಮಾನ್ಯವಾಗಿದ್ದು, ಇದನ್ನು ಸ್ಥಳೀಯರೇ ಅಗೆದು ಮಾಡಿರುವುದರಿಂದ ಸಾಕಷ್ಟು ಅಪಾಯಕಾರಿಯೂ ಆಗಿದೆ.