ರಾಜಸ್ಥಾನ ಭಾರೀ ಬಿರುಗಾಳಿ, ಮಳೆ: 12 ಜನ ಬಲಿ
ಜೈಪುರ, ಏಪ್ರಿಲ್ 12: ಪೂರ್ವ ರಾಜಸ್ಥಾನದಲ್ಲಿ ನಿನ್ನೆ(ಏಪ್ರಿಲ್ 11) ರಾತ್ರಿ ಸುರಿದ ಭಾರೀ ಮಳೆ, ಬಿರುಗಾಳಿಗೆ 12 ಜನ ಮೃತರಾಗಿದ್ದಾರೆ. ಇಲ್ಲಿನ ಧೋಲ್ಪುರ ಪ್ರದೇಶದಲ್ಲಿ ಏಳು ಜನ ಮೃತರಾಗಿದ್ದರೆ, ಭರತ್ಪುರದಲ್ಲಿ ಐದು ಜನ ಮೃತರಾಗಿದ್ದಾರೆ.
ಧೋಲ್ಪುರ ಪ್ರದೇಶ ಜಲಾವೃತವಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯುಂಟಾಗುತ್ತಿದೆ. ಉತ್ತರ ಭಾರತದಲ್ಲಿ ಈಗಾಗಲೇ ಪೂರ್ವ ಮುಂಗಾರಿನ ಸೂಚನೆ ಎಂಬಂತೆ ಮಳೆಯಾಗಿದ್ದು, ಹವಾಮಾನ ಇಲಾಖೆ ಮೊದಲೇ ಮಳೆಯ ಮುನ್ಸೂಚನೆ ನೀಡಿತ್ತು.

ಮಳೆಯ ಕಾರಣ ಆಗ್ರಾ-ಧೋಲ್ಪುರ ರೈಲ್ವೇ ಸಂಪರ್ಕವನ್ನೂ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ದಕ್ಷಿಣ ಭಾರತದಲ್ಲೂ ಕೆಲವು ದಿನಗಳ ಹಿಂದೆ ಮಳೆಯಾಗಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಏ.12 ಮತ್ತು 13 ರಂದು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.












Click it and Unblock the Notifications