Maldives-India Row: ಮಾಲ್ಡೀವ್ಸ್ ಬಹಿಷ್ಕಾರ ಅಭಿಯಾನ ಬೆಂಬಲಿಸಿ 'ಈಸಿ ಮೈ ಟ್ರಿಪ್' ವಿಮಾನ ಟಿಕೆಟ್ ಬುಕ್ಕಿಂಗ್ ರದ್ದು,ವಿವರ
ಬೆಂಗಳೂರು, ಜನವರಿ 08: ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಮಾಲ್ಡಿವ್ಸ್ ಸಚಿವರ ಕೀಳು ಅಭಿರುಚಿಯ ಹೇಳಿಕೆ ವಿರುದ್ಧ ಮಾಲ್ಡಿವ್ಸ್ ಬಹಿಷ್ಕಾರ (#BoycottMaldives) ಸಾಮಾಜಿಕ ಜಾಲತಾಣ ಅಭಿಯಾನ ಎರಡನೇ ದಿನವು ಮುಂದುವರಿದಿದೆ. ಇದೀಗ ಭಾರತ ಬೆಂಬಲಿಸಿರುವ 'ಈಸಿ ಮೈ ಟ್ರಿಪ್' (EaseMyTrip) ಟ್ರಾವೆಲ್ ಏಜೆನ್ಸಿಯು ಮಾಲ್ಡಿವ್ಸ್ಗೆ ತೆರಳುವ ವಿಮಾನಗಳ ಬುಕ್ಕಿಂಗ್ ಗಳನ್ನು ರದ್ದುಗೊಳಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಲಕ್ಷದ್ವೀಪ ಭೇಟಿಯ ನಂತರ ಮಾಲ್ಡಿವ್ಸ್ ಮೂವರು ಸಚಿವರು ಮಾಡಿದ ಅವಹೇಳನಕಾರಿ ಪ್ರತಿಕ್ರಿಯೆ ನಂತರ ಮಾಲ್ಡಿವ್ ಬಹಿಷ್ಕಾರ ಜೊತೆಗೆ #ChaloLakshadweep ಟ್ರೆಂಡ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಟರು, ಖ್ಯಾತ ಕ್ರಿಕೆಟಿಗರು, ಟ್ರಾವೆಲ್ ಏಜೆನ್ಸಿ ಕಂಪನಿಗಳು ಸೇರಿದಂತೆ ಅನೇಕ ಭಾರತೀಯರು ಸಹ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಾಲ್ಡಿವ್ಸ್ ಬಹಿಷ್ಕಾರದ ಮೂಲಕ 'ಭಾರತ ಎಂದರೆ ನಾವೆಲ್ಲ' ಎಂಬ ಒಗ್ಗಟ್ಟನ್ನು ಹಾಗೂ ಭಾರತಕ್ಕೆ, ದೇಶದ ಪ್ರಧಾನಿಗೆ ಅವಮಾನಿಸಿದರೆ ಸಹಿಸಲ್ಲ ಎಂಬ ಸ್ಪಷ್ಟ ಸಂದೇಶವನ್ನು ಭಾರತೀಯರು ಮಾಲ್ಡಿವ್ಸ್ಗೆ ಅಭಿಯಾನದ ಮೂಲಕ ರವಾನಿಸಿದ್ದಾರೆ.
EaseMyTrip ಸಿಇಒ ಪೋಸ್ಟ್ನಲ್ಲೇನಿದೆ?
ಭಾರತದೊಂದಿಗೆ ಇದೀಗ EaseMyTrip ಸಹ ನಿಂತಿದೆ. ಭಾರತೀಯ ಆನ್ಲೈನ್ ಟ್ರಾವೆಲ್ ಕಂಪನಿಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನಿಶಾಂತ್ ಪಿಟ್ಟಿ ಅವರು ಸೋಮವಾರ ಬಾಯ್ಕಾಟ್ ಮಾಲ್ಡಿವ್ಸ್ ಅಭಿಯಾನ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಮ್ಮ ರಾಷ್ಟ್ರದೊಂದಿಗೆ ಒಗ್ಗಟ್ಟಿನಿಂದ ಇದ್ದು, EaseMyTrip ಎಲ್ಲಾ ಮಾಲ್ಡೀವ್ಸ್ ವಿಮಾನ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ' ಆನ್ಲೈನ್ ಪ್ರಯಾಣ ಪರಿಹಾರ ಪೂರೈಕೆದಾರ ನಮ್ಮ ಸಂಸ್ಥೆಯು ಚಲೋಲಕ್ಷದ್ವೀಪ (#ChaloLakshadweep) ಅಭಿಯಾನಕ್ಕೆ ಭೇಟಿ ನೀಡಲು ಆರಂಭಿಸಿದೆ ಎಂದು ಬರೆದುಕೊಂಡಿದ್ದಾರೆ.
In solidarity with our nation, @EaseMyTrip has suspended all Maldives flight bookings ✈ #TravelUpdate #SupportingNation #LakshadweepTourism #ExploreIndianlslands #Lakshadweep#ExploreIndianIslands @kishanreddybjp @JM_Scindia @PMOIndia @tourismgoi @narendramodi @incredibleindia https://t.co/wIyWGzyAZY
— Nishant Pitti (@nishantpitti) January 7, 2024
'ಲಕ್ಷದ್ವೀಪವು ನೀರು ಮತ್ತು ಬೀಚ್ಗಳು ಮಾಲ್ಡೀವ್ಸ್/ಸೆಶೆಲ್ಸ್ನಂತೆಯೇ ಉತ್ತಮವಾಗಿವೆ. ನಾವು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚೆಗೆ ಭೇಟಿ ನೀಡಿದ ಈ ಪ್ರಾಚೀನ ತಾಣವನ್ನು ಪ್ರಚಾರ ಮಾಡಲು ಅಸಾಮಾನ್ಯ ವಿಶೇಷ ಕೊಡುಗೆಗಳೊಂದಿಗೆ ಬರುತ್ತೇವೆ'' ಎಂದು EaseMyTrip ನ ನಿಶಾಂತ್ ಪಿಟ್ಟಿ ತಿಳಿಸಿದ್ದಾರೆ.
ಟ್ರೆಂಡಿಂಗ್ ಆದ #BoycottMaldives
ಹೌದು, ಲಕ್ಷದ್ವೀಪದ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಹಂಚಿಕೊಂಡ ಬಳಿಕ ಕೀಳು ಹೇಳಿಕೆ ನೀಡಿದ ಮಾಲ್ಡಿವ್ಸ್ ಸಚಿವರನ್ನು ಅಲ್ಲಿನ ಸರ್ಕಾರ ಅಮಾನತು ಮಾಡಿದೆ. ಅವರ ಹೇಳಿಕೆಗಳು ಬಹಿರಂಗವಾಗುತ್ತಿದ್ದಂತೆ X ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ #BoycottMaldives, #ChaloLakshadweep ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. ನಾವು ಭಾರತವನ್ನು, ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತೇವೆ ಎಂದು ಅಭಿಯಾನ ಆರಂಭವಾಗಿದೆ.
ಭಾರತೀಯ ಪ್ರವಾಸ ನಿರ್ವಾಹಕರ ಸಂಘವು ಮುಂದಿನ 20-25 ದಿನಗಳಲ್ಲಿ ಬಹಿಷ್ಕಾರದ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ರಜಾದಿನದ ಮೋಜಿಗಾಗಿ ಮಾಲ್ಡವ್ಸ್ ಪ್ಲಾನ್ಗಳನ್ನು ರದ್ದುಗೊಳಿಸಿದ್ದಾರೆ. ಸದ್ಯ ಮಾಲ್ಡೀವ್ಸ್ಗೆ ಪ್ರವಾಸವನ್ನು ಕಾಯ್ದಿರಿಸುವುದಿಲ್ಲ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ರಾಜೀವ್ ಮೆಹ್ರಾ ಹೇಳಿದ್ದಾರೆ.

ದೇಶದ ಪ್ರವಾಸೋದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ಮೆಚ್ಚಿನ ಪ್ರವಾಸಿ ತಾಣವಾಗಿದ್ದ ಈ ಮಾಲ್ಡಿವ್ಸ್ಗೆ ಡಿಸೆಂಬರ್ 2023 ರವರೆಗೆ ಭಾರತೀಯ ಪ್ರವಾಸಿಗರು ಹೆಚ್ಚು (ಒಟ್ಟು 2,09,198) ಭೇಟಿ ಕೊಟ್ಟಿದ್ದಾರೆ. ಭಾರತದ ನಂತರ ರಷ್ಯಾ (2,09,146) ಹಾಗೂ ನಂತರ ಚೀನಾ ದೇಶದವರು (1,87,118) ಮಾಲ್ಡಿವ್ಸ್ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆಗಿದ್ದೇನು?
ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಲಕ್ಷದ್ವೀಪಕ್ಕೆ ಇತ್ತೀಚೆಗೆ ಪ್ರಧಾನಿ ಮೋದಿ ತೆರಳಿದ್ದರು. ಬಳಿಕ ಅಲ್ಲಿನ ಸುಂದರ ತಾಣಗಳ ಫೋಟೊಗಳನ್ನು ಹಂಚಿಕೊಂಡಿದ್ದರು. ಮಾಲ್ಡಿವ್ಸ್ಗೆ ಲಕ್ಷದ್ವೀಪ ಪರ್ಯಾಯ ತಾಣವಾಗಲು ಕಾರಣವಾಗಿದ್ದಾರೆ ಪ್ರಧಾನಿ ಮೋದಿ ಎಂದು ಮಾಲ್ಡಿವ್ಸ್ನ ಸಚಿವರು ಭಾರತದ ಕುರಿತು ಲಘುವಾಗಿ ಮಾತನಾಡಿದ್ದರು. ಇದು ಬಹಿರಂಗವಾಗುತ್ತಿದ್ದಂತೆ ಮಾಲ್ಡಿವ್ಸ್ ಬಹಿಷ್ಕಾರ, ವಿಮಾನ ಟಿಕೆಟ್ ಬುಕ್ಕಿಂಗ್ ರದ್ದು ಮಾಡುವ ಜೊತೆಗೆ ಚಲೋ ಲಕ್ಷದ್ವೀಪ್ ಅಭಿಯಾನ ಆರಂಭವಾಗಿದೆ.
-
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
ಅಪ್ಪನ ಸಕ್ಕರೆ ಚಟ ಬಿಡಿಸಲು ಮೋದಿ ಮೊರೆ ಹೋದ ಯುವಕ: ವಿಡಿಯೋ Viral, ಪ್ರಧಾನಿಯಿಂದ ಬಂತು ಅಚ್ಚರಿಯ ರಿಪ್ಲೈ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್












Click it and Unblock the Notifications