Get Updates
Get notified of breaking news, exclusive insights, and must-see stories!

Makarjyoti darshan: ಶಬರಿಮಲೆಯಲ್ಲಿ ಮೊಳಗಿತು ‘ಸ್ವಾಮಿಯೇ ಶರಣಂ ಅಯ್ಯಪ್ಪಾ’ ಘೋಷ- ಲಕ್ಷಾಂತರ ಭಕ್ತರು ಭಾಗಿ

ಶಬರಿಮಲೆ ಜನವರಿ 16: ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸೋಮವಾರ ಸಂಜೆ ಅಯ್ಯಪ್ಪಸ್ವಾಮಿ ಮಕರಜ್ಯೋತಿ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದರು. ಜ್ಯೋತಿ ದರ್ಶನಕ್ಕೆ ಲಕ್ಷಾಂತರ ಅಯ್ಯಪ್ಪ ಭಕ್ತರು ಆಗಮಿಸಿದ್ದರು. ತಿರುವಾಭರಣ ಘಟ್ಟ ಮುಗಿದ ನಂತರ ಪೊನ್ನಂಬಲಮೇಡು ಪರ್ವತದ ಶಿಖರದಲ್ಲಿ ಮಕರಜ್ಯೋತಿ ದರ್ಶನವಾಯಿತು.

ಈ ಸಂದರ್ಭದಲ್ಲಿ 'ಸ್ವಾಮಿಯೇ ಶರಣಂ ಅಯ್ಯಪ್ಪಾ' ಎಂದು ಶಬರಿಗಿರಿಯರು ಜೈಕಾರ ಹಾಕಿದರು. ಲಕ್ಷಾಂತರ ಭಕ್ತರು ಮಕರಜ್ಯೋತಿಯನ್ನು ನೇರವಾಗಿ ನೋಡಿ ಪುಳಕಿತರಾದರು. ಕೋಟಿಗಟ್ಟಲೆ ಜನ ಟಿವಿಯಲ್ಲಿ ನೋಡಿ ಪುನೀತರಾದರು. ಜ್ಯೋತಿ ದರ್ಶನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

Makarjyoti darshan at Sabarimala: Lakhs of devotees participate

ಮಕರಜ್ಯೋತಿ ನೋಡಲು ಆಗಮಿಸಿದ ಭಕ್ತರಿಗೆ ಟ್ರಾವೆನ್ ಕೋರ್ ದೇವಸ್ತಾನಂ ಮಂಡಳಿ ಸೂಕ್ತ ವ್ಯವಸ್ಥೆ ಮಾಡಿತ್ತು. ಟ್ರಾವೆನ್ ಕೋರ್ ಟೆಂಪಲ್ ಬೋರ್ಡ್ ನಿಂದ 50 ಸಾವಿರ ಜನರಿಗೆ ಟೋಕನ್ ನೀಡಲಾಗಿತ್ತು. ಅಯ್ಯಪ್ಪ ಪಂಭಾನಾಡಿ, ಸನ್ನಿಧಾನಂ, ಹಿಲ್ ಟಾಪ್, ಟೋಲ್ ಪ್ಲಾಜಾದಲ್ಲಿ ಮಕರಜ್ಯೋತಿ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜ್ಯೋತಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿ ವರ್ಷವೂ ಮಕರಜ್ಯೋತಿಯ ದರ್ಶನವಾಗುತ್ತದೆ. ಇಲ್ಲಿನ ಜನರು ಇದನ್ನು ಮಕರವಿಳಕ್ಕು ವಾರ್ಷಿಕ ಹಬ್ಬ ಎಂದು ಕರೆಯುತ್ತಾರೆ. ಸಂಜೆ ಪಂದಳ ರಾಜವಂಶಸ್ಥರು ತಿರುವಾಭರಣಗಳೊಂದಿಗೆ ಸನ್ನಿಧಾನಕ್ಕೆ ಆಗಮಿಸುತ್ತಾರೆ. ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರು ಅವರನ್ನು ಸ್ವಾಗತಿಸಿ ತಾವು ತಂದಿದ್ದ ಚಿನ್ನಾಭರಣಗಳಿಂದ ಅಯ್ಯಪ್ಪನಿಗೆ ಅಲಂಕಾರ ಮಾಡಿದರು. ನಂತರ ಪೊನ್ನಂಬಲಮೇಡುವಿನಿಂದ ಮಕರಜ್ಯೋತಿ ಕಾಣಿಸಿಕೊಳ್ಳುತ್ತದೆ.

ಮರಕಜ್ಯೋತಿ ಸಂದರ್ಶಿಸಿ ಅಯ್ಯಪ್ಪನಿಗೆ ಇರುಮುಡಿಯನ್ನು ಅರ್ಪಿಸುವುದರಿಂದ ಶ್ರೀಗಳು ಆಧ್ಯಾತ್ಮಿಕ ಅನುಭವವನ್ನು ಪಡೆಯುತ್ತಾರೆ. ಇದೇ ವೇಳೆ ಈ ವರ್ಷ ಕೋಟ್ಯಂತರ ಭಕ್ತರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದರು. ಆದರೆ, ಅಲ್ಲಿನ ಸರಕಾರ ಕುಡಿಯುವ ನೀರು, ಅನ್ನಸಂತರ್ಪಣೆಯಂತಹ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಿಲ್ಲ ಎಂದು ಹಲವು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಮಕರ ಜ್ಯೋತಿಗೆ ಬರುವ ಭಕ್ತರಿಗೆ ನೀರು ಹಾಗೂ ಲಘು ಉಪಾಹಾರ ವಿತರಿಸಲಾಯಿತು. ಜ.14 ಮತ್ತು 15ರಂದು ಮಕರಜ್ಯೋತಿಗೆ ಆಗಮಿಸಲಿರುವ ಸುಮಾರು 1 ಲಕ್ಷ ಅಯ್ಯಪ್ಪ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನೂ ದೇವಸ್ವಂ ಮಂಡಳಿ ಒದಗಿಸಿದೆ. ದೇವಸ್ವಂ ಬೋರ್ಡ್‌ ಸೂಚಿಸುವ ಸ್ಥಳ ಹೊರತುಪಡಿಸಿ ಭಕ್ತರು ಅರಣ್ಯ ಪ್ರದೇಶಗಳಿಗೆ ಪ್ರವೇಶಿಸಬಾರದು. ಕಟ್ಟಡಗಳ ಮೇಲೆ ಏರುವಂತಿಲ್ಲ. ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ನೀಡುವ ಸೂಚನೆ ಪಾಲಿಸಲು ವಿಶೇಷ ಕಾಳಜಿ ವಹಿಸಬೇಕು. ಚಿಕ್ಕ ಮಕ್ಕಳು ಮತ್ತು ಹಿರಿಯ ವಯಸ್ಕರು ಜ.14, 15 ಹೊರತುಪಡಿಸಿ ಜ.16ರಿಂದ 20ರವರೆಗೆ ಅಯ್ಯಪ್ಪ ದರ್ಶನ ಪಡೆಯುವಂತೆ ದೇವಸ್ವಂ ಮಂಡಳಿ ಅಧ್ಯಕ್ಷರು ಸೂಚಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+