ಅಸ್ಸಾಂ : ಭಯೋತ್ಪಾದಕರ ಸಂಚು ವಿಫಲಗೊಳಿಸಿದ ಸೇನೆ
ನವದೆಹಲಿ, ಆಗಸ್ಟ್ 14 : ಅಸ್ಸಾಂನಲ್ಲಿ ಸಂಭವಿಸಬಹುದಾಗಿದ್ದ ಭಾರೀ ಭಯೋತ್ಪಾದಕ ದಾಳಿಯನ್ನು ಸೇನೆ ವಿಫಲಗೊಳಿಸಿದೆ. ರೈಲ್ವೆ ಹಳಿಯ ಮೇಲೆ ಇಟ್ಟಿದ್ದ ಸ್ಫೋಟಕಗಳನ್ನು ಸೇನೆ ವಶಪಡಿಸಿಕೊಂಡಿದ್ದು, ನಿಷ್ಕ್ರಿಯಗೊಳಿಸಿದೆ.
ಕೋಕ್ರಾಜಾರ್-ಗೌಹಾತಿ
ರೈಲ್ವೆ
ಹಳಿಯ
ಮೇಲೆ
ಇಡಲಾಗಿದ್ದ
7
ಕೆಜಿ
ಸ್ಫೋಟಕಗಳನ್ನು
ಸೇನಾ
ಸಿಬ್ಬಂದಿ
ಶುಕ್ರವಾರ
ಬೆಳಗ್ಗೆ
ವಶಪಡಿಸಿಕೊಂಡಿದ್ದಾರೆ.
ಸ್ವಾತಂತ್ರ
ದಿನಾಚರಣೆ
ಹಿನ್ನಲೆಯಲ್ಲಿ
ಉತ್ತರ
ಭಾರತದ
ರಾಜ್ಯಗಳಲ್ಲಿ
ಭಯೋತ್ಪಾದಕ
ದಾಳಿ
ನಡೆಯಬಹುದು
ಎಂದು
ಗುಪ್ತಚರ
ಇಲಾಖೆ
ಸೂಚನೆ
ರವಾನಿಸಿತ್ತು.
ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಉಧಾಂಪುರ್ನಲ್ಲಿ ಕೆಲವು ದಿನಗಳ ಹಿಂದೆ ಭಯೋತ್ಪಾದಕ ದಾಳಿ ನಡೆದಿತ್ತು. ಉಧಾಂಪುರ್ನಲ್ಲಿ ಉಗ್ರ ಮೊಹಮ್ಮದ್ ನವೀದ್ನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಆದ್ದರಿಂದ ದೇಶದ ಇತರ ರಾಜ್ಯಗಳಲ್ಲಿ ದಾಳಿ ನಡೆಯಬಹುದು ಎಂದು ಎಚ್ಚರಿಕೆ ನೀಡಲಾಗಿದೆ. [ಉಗ್ರ ನವೀದ್ NIA ವಶಕ್ಕೆ]
ಸ್ವಾತಂತ್ರ ದಿನಾಚರಣೆ ಹಿನ್ನಲೆಯಲ್ಲಿ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.