ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೀಕರ ಅಪಘಾತದಲ್ಲಿ ಮಹಾರಾಷ್ಟ್ರ ಬಿಜೆಪಿ ಮುಖಂಡ ನಿಧನ
ಭಿವಿಂಡಿ, ಆಗಸ್ಟ್ 28: ಮಹಾರಾಷ್ಟ್ರದ ಭಿವಿಂಡಿಯ ಸರಾವಳಿ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಥಾಣೆ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಗುರುನಾಥ್ ವಾಮನ್ ಲಾಸ್ನೆ ದುರಂತ ಅಂತ್ಯ ಕಂಡಿದ್ದಾರೆ.
ಬೀಗರ ಊಟಕ್ಕೆ ಹೊರಟಿದ್ದವರ ಕಾರು ಅಪಘಾತ: 3 ಸಾವು
ವೇಗವಾಗಿ ಬರುತ್ತಿದ್ದ ಖಾಸಗೀ ಬಸ್ ವೊಂದಕ್ಕೆ ಲಾಸ್ನೆ ಅವರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡದ ಪರಿಣಾಮ ಈ ದುರಂತ ಸಂಭವಿಸಿದೆ. 55 ವರ್ಷದ ನಾಸ್ನೆ ಅವರು ಥಾಣೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಕೆಎಸ್ಆರ್ಟಿಸಿ-ಖಾಸಗಿ ಬಸ್ ಅಪಘಾತ: ಮೂವರ ದುರ್ಮರಣ
ಬಸ್ಸಿನ ಚಾಲಕ ನಾಪಲತ್ತೆಯಾಗಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 304(A), 184 ಮತ್ತು 279ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೋಮವಾರ ಸಂಜೆ 6 ಗಂಟೆಯ ಸುಮಾರಿಗೆ ತಮ್ಮ ಮಾರುತಿ ಸುಜುಕಿ ವಾಗನ್ ಆರ್ ಕಾರಿನಲ್ಲಿ ಲಾಸ್ನೆ ಅವರು ಪ್ರಯಾಣಿಸುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇವರ ನಿಧನಕ್ಕೆ ಮಹಾರಾಷ್ಟ್ರದ ಬಿಜೆಪಿ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
Comments
English summary
Gurunath Waman Lasne, vice-president of Thane district's Bharatiya Janata Party (BJP) unit, died after his car was hit by a speeding private bus near Saravali village in Bhiwandi. He was 55.