ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದ ಮದರಸಾಗಳ ಮಾನ್ಯತೆ ರದ್ದು

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಜೂ. 2: ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡಿ, ಮುಸ್ಲಿಂ ಕೋಟಾಕ್ಕೂ ತೀಲಾಂಜಲಿ ಹೇಳಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ಮದರಸಾಗಳ ಶೈಕ್ಷಣಿಕ ಮಾನ್ಯತೆಯನ್ನು ರದ್ದು ಮಾಡಿದೆ. ಮದರಸಾಗಳು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.

ಸರ್ಕಾರದ ನಿರ್ಧಾರದ ಬಗ್ಗೆ ಅನೇಕ ಟೀಕೆ ಟಿಪ್ಪಣಿಗಳು ಕೇಳಿ ಬಂದಿವೆ. ಎಲ್ಲರಿಗೂ ಏಕರೂಪದ ಶಿಕ್ಷಣ ನೀಡಲು ರದ್ದು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮರ್ಥನೆ ನೀಡಿದ್ದಾರೆ.[ಮದ್ರಸಾ ಎಂದರೇನು?]

madarasa

ಮದರಸಾ ಜತೆಗೆ ಇಸ್ಲಾಮಿಕ್ ಸೆಮಿನರಿಗಳು ರದ್ದು
ಮಹಾರಾಷ್ಟ್ರದ ಯಾವ ಮದರಸಾ ಮತ್ತು ಇಸ್ಲಾಮಿಕ್ ಸೆಮಿನರಿಗಳು ಇನ್ನು ಮುಂದೆ ಸರ್ಕಾರದ ಅನುಮತಿ ಪಡೆದ ಶಿಕ್ಷಣ ಸಂಸ್ಥೆಗಳಾಗಿರುವುದಿಲ್ಲ. ಕೆಲ ರಾಜ್ಯಗಳಲ್ಲಿ ಈ ಹಿಂದೆಯೇ ಮದರಸಾಗಳ ಮಾನ್ಯತೆಯನ್ನು ರದ್ದು ಮಾಡಲಾಗಿತ್ತು.

ರದ್ದು ಮಾಡಲು ಕಾರಣವೇನು?
ಮಹಾರಾಷ್ಟ್ರ ಸರ್ಕಾರ ಮದರಸಾ ಮತ್ತು ಮದರಸಾಗಳಲ್ಲಿ ಕಲಿತು ಹೊರಬಂದ ವಿದ್ಯಾರ್ಥಿಗಳ ಮೇಲೆ ಒಂದು ಸಮೀಕ್ಷೆ ಮಾಡಿತ್ತು. ಸಮೀಕ್ಷೆಯಲ್ಲಿ ಕೆಲ ಆಘಾತಕಾರಿ ಸಂಗತಿಗಳು ಹೊರ ಬಂದಿದ್ದವು.[ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ]

ಮದರಸಾಗಳಲ್ಲಿ ವ್ಯಾಸಂಗ ಮಾಡಿದವರು ಮುಖ್ಯ ವಾಹಿನಿಯಿಂದ ದೂರವಾಗುವ ಕೆಲ ವಿಚಾರಗಳನ್ನು ಬೆಳೆಸಿಕೊಂಡಿದ್ದರಿ. ಇವರನ್ನೆಲ್ಲ ಮುಖ್ಯ ವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಮದರಸಾಗಳಿಗೆ ನೀಡಿದ್ದ ಮಾನ್ಯತೆ ರದ್ದು ಮಾಡಲಾಗಿದೆ ಎಂದು ಮಹಾ ಸರ್ಕಾರ ತಿಳಿಸಿದೆ.

ಕಾಂಗ್ರೆಸ್ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮುಸ್ಲಿಂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು ಪ್ರತಿಭಟನೆ ಹಾದಿ ಹಿಡಿದಿವೆ. ಅಲ್ಲದೇ ನ್ಯಾಯಾಲಯದಲ್ಲೂ ಈ ಬಗ್ಗೆ ಪ್ರಶ್ನೆ ಮಾಡಲು ಮುಂದಾಗಿದ್ದಾರೆ.

English summary
The Maharashtra state government has derecognized Madrasas and termed the students as out of school children on the ground that they do not provide formal education. The move which has been termed as controversial was backed by Chief Minister Devendra Fadnavis who intends bringing children to main stream schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X