ಆರ್ಡರ್ ಮಾಡಿದ ಚಿಕನ್ ಬಿರಿಯಾನಿಯಲ್ಲಿ ಹಲ್ಲಿ ಪತ್ತೆ: ಜೊಮೆಟೋ ಎಡವಟ್ಟು
ಹೈದರಾಬಾದ್, ಡಿಸೆಂಬರ್ 5: ಹೈದರಾಬಾದ್ನ ವ್ಯಕ್ತಿಯೊಬ್ಬರು ಬಾವರ್ಚಿ ಹೋಟೆಲ್ನಿಂದ ಜೊಮಾಟೊ ಮೂಲಕ ಆರ್ಡರ್ ಮಾಡಿದ್ದ ಚಿಕನ್ ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಜೊಮಾಟೊ ಪ್ರತಿಕ್ರಿಯೆ ನೀಡಿದೆ.
ತೆಲುಗು ಸ್ಕ್ರೈಬ್ ಟ್ವಿಟ್ಟರ್ನಲ್ಲಿ ವೀಡಿಯೊ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಈ ವಿಷಯವು ವೈರಲ್ ಆಗಿದೆ. ಟ್ವಿಟ್ನಲ್ಲಿ, "ಲೋನಿ ಬವರ್ಚಿ ಹೋಟೆಲ್ ಹೈದರಾಬಾದ್ ಆರ್ಟಿಸಿ ಕ್ರಾಸ್ ರೋಡ್ನಲ್ಲಿ ಚಿಕನ್ ಬಿರಿಯಾನಿಯಲ್ಲಿ ಹಲ್ಲಿ ಸೇರಿಸಿ ನೀಡಲಾಗಿದೆ ಎಂದು ಬರೆಯಲಾಗಿದೆ.

ಅಂಬರ್ಪೇಟೆಯ ಡಿಡಿ ಕಾಲೋನಿಯ ವಿಶ್ವ ಆದಿತ್ಯ ಆನ್ಲೈನ್ನಲ್ಲಿ ಜೊಮಾಟೊದಲ್ಲಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದರು. ಜೊಮಾಟೊ ಡೆಲಿವರಿ ಬಾಯ್ ತಂದಿದ್ದ ಚಿಕನ್ ಬಿರಿಯಾನಿಗೆ ಹಲ್ಲಿ ಸಿಕ್ಕಿದೆ ಎಂದು ಆರೋಪಿಸಿದ್ದಕ್ಕೆ ಬವರ್ಚಿ ಆಡಳಿತ ಮಂಡಳಿ ನಿರ್ಲಕ್ಷ್ಯದ ಉತ್ತರ ನೀಡಿದ್ದರು.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಈ ಹಿಂದಿನ ನಿರ್ಲಕ್ಷ್ಯಕ್ಕೆ ರೆಸ್ಟೋರೆಂಟ್ ಅನ್ನು ಟೀಕಿಸಿ, ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳದ ಹೋಟೆಲ್ನವರ ವಿರುದ್ಧ ನಿರಾಶೆ ವ್ಯಕ್ತಪಡಿಸಿದರು. "ಈಗಾಗಲೇ, ಈ ಹೋಟೆಲ್ ಅನ್ನು ಆಹಾರ ನಿರೀಕ್ಷಕರು ಕೆಲವು ಬಾರಿ ನಿರ್ಬಂಧಿಸಿದ್ದಾರೆ. ಆದರೆ ಅದನ್ನು ಮತ್ತೆ ಏಕೆ ಸೇವೆ ನೀಡಲಾಗುತ್ತಿದೆ? ಇಂತಹ ಪ್ರಮಾದಗಳಿಗೆ ದಂಡದ ಮೊತ್ತವು ಸಾಕಾಗುವುದಿಲ್ಲ. ಗ್ರಾಹಕರ ಪ್ರಾಣದೊಂದಿಗೆ ಆಟವಾಡುವುದು ಸಲ್ಲದು. ಇದು ಮ್ಯಾನೇಜ್ಮೆಂಟ್ನವರ ಸಂಪೂರ್ಣ ನಿರ್ಲಕ್ಷ್ಯ." ಎಂದು ಆರೋಪಿಸಿದ್ದಾರೆ.
ಮತ್ತೊಬ್ಬರು, ಅನೇಕ ರೆಸ್ಟೋರೆಂಟ್ಗಳಲ್ಲಿ ನೈರ್ಮಲ್ಯದ ಕೊರತೆಇದೆ. ನಿಮ್ಮ ಜೀವಗಳನ್ನು ಉಳಿಸಲು ಹೊರಗೆ ತಿನ್ನುವುದನ್ನು ನಿಲ್ಲಿಸಿ. ಈ ರೆಸ್ಟೋರೆಂಟ್ಗಳಿಗೆ ಇದು ಕೇವಲ ವ್ಯವಹಾರವಾಗಿದೆ; ಅವರು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಹೇಳಿದರು. ಈ ಪೋಸ್ಟ್ ಟ್ವಿಟರ್ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಪೋಸ್ಟ್ ವೈರಲ್ ಆದ ನಂತರ, ಜೊಮಾಟೊ ಕೇರ್ ಹೇಳಿಕೆಯನ್ನು ನೀಡಿದೆ. ತಾವು ಸಮಸ್ಯೆಯನ್ನು ಗುರುತಿಸಿದ್ದು, ಗ್ರಾಹಕರೊಂದಿಗೆ ಸಂವಹನ ನಡೆಸಿದ್ದೇವೆ ಎಂದು ಭರವಸೆ ನೀಡಿದರು. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಸೂಕ್ತ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಜೊಮೊಟೊದಲ್ಲಿ ಈ ಘಟನೆಯು ಹೊಸತಲ್ಲ. ಈ ವರ್ಷದ ಆರಂಭದಲ್ಲಿ ಮುಂಬೈನ ಪಾಪಾ ಪಾಂಚೋ ದಾ ಧಾಬಾ ಕೋಳಿ ಭಕ್ಷ್ಯದಲ್ಲಿ ಇಲಿ ಕಂಡುಬಂದಾಗ ವಿವಾದ ಉಂಟಾಗಿತ್ತು. ಜುಲೈನಲ್ಲಿ ಪಂಜಾಬ್ನ ಲುಧಿಯಾನದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು ವಿಶ್ವಕರ್ಮ ಚೌಕ್ ಬಳಿಯ ಲುಧಿಯಾನಾದ ಪರ್ಕಾಶ್ ಧಾಬಾದಲ್ಲಿ ಕುಟುಂಬವೊಂದಕ್ಕೆ ಚಿಕನ್ ಥಾಲಿಯಲ್ಲಿ ಇಲಿ ಪತ್ತೆಯಾಗಿತ್ತು. ಈ ಹಿಂದೆ ಗ್ರಾಹಕರು ತಮ್ಮ ಸಸ್ಯಾಹಾರಿ ಭಕ್ಷ್ಯಗಳಲ್ಲಿ ಮಾಂಸವನ್ನು ಸ್ವೀಕರಿಸುವ ಬಗ್ಗೆ ದೂರು ನೀಡಿದ ಅನೇಕ ನಿದರ್ಶನಗಳಿವೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications