ಗೌರಿ ಲಂಕೇಶ್ ಹಂತಕರ ಹೆಸರಲ್ಲಿ 7 ಪತ್ರಕರ್ತರಿಗೆ ಜೀವ ಬೆದರಿಕೆ
ಬೆಂಗಳೂರು, ಸೆಪ್ಟೆಂಬರ್ 28: ಗೌರಿ ಲಂಕೇಶ್ ಹಂತಕರ ಹೆಸರಿನಲ್ಲಿ 7 ಮಂದಿ ಪತ್ರಕರ್ತರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣ ಬೆಳಕಿಗೆ ಬಂದಿದೆ.
ಏಷಿಯನ್ ಇಂಟರ್ನ್ಯಾಷನಲ್ ನ ಅಭಯ್ ಕುಮಾರ್ ದುಬೆ, ಕ್ವಿಂಟ್ ವೆಬ್ಸೈಟ್ ನ ಸೋಹಿನಿ ಗುಹಾ ರಾಯ್, ಫಸ್ಟ್ ಪೋಸ್ಟ್ ದೇವದ್ರತ್ ಘೋಷ್ ಸೇರಿ 7 ಪತ್ರಕರ್ತರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ವಾಟ್ಸಾಪ್, ಫೋನ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿದ್ದುಈ ಸಂಬಂಧ ಪತ್ರಕರ್ತರು ನೊಯ್ಡಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರ್.ಎಸ್.ಎಸ್ ಮತ್ತು ಸಂಘ ಪರಿವಾರವನ್ನು ಟೀಕಿಸಿ ಬರೆಯದಂತೆ ಪತ್ರಕರ್ತರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪತ್ರಕರ್ತರಿಗೆ ಬೆದರಿಕೆ ಹಾಕಿರುವ ಮಾಹಿತಿಯನ್ನು ನೊಯ್ಡಾ ಪೊಲೀಸರು ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ಎಸ್ಐಟಿ ಪೊಲೀಸರಿಗೆ ನೀಡಿದ್ದಾರೆ ಎನ್ನುವ ಮಾಹಿತಿಗಳಿವೆ.












Click it and Unblock the Notifications