Leopards in Tirumala: ಅಯ್ಯೋ.. ಚಿರತೆ ಬಂತು ಓಡಿ... ಓಡಿ...... ತಿಮ್ಮಪ್ಪನ ಭಕ್ತರಿಗೆ ಎದುರಾದ ಕ್ರೂರ ಪ್ರಾಣಿ!
ತಿರುಪತಿಯಲ್ಲಿ ಕಾಡು ಪ್ರಾಣಗಳ ಕಾಟ ಮುಂದುವರೆದಿದ್ದು ಭಕ್ತರಲ್ಲಿ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಹೌದು....ಕಲಿಯುಗ ಶ್ರೀ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರ ತಿರುಮಲದಲ್ಲಿ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡಿದೆ.
ಸೋಮವಾರ ಮಧ್ಯಾಹ್ನ ಅಲಿಪಿರಿ ಪಾದಚಾರಿ ಮಾರ್ಗದ ಮೆಟ್ಟಿಲುಗಳಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿವೆ. ಪಾದಚಾರಿ ಮಾರ್ಗದಲ್ಲಿ ಭಕ್ತರು ಸಾಗುತ್ತಿದ್ದ ವೇಳೆ ಚಿರತೆಗಳು ಎದುರಾಗಿವೆ. ಇದರಿಂದಾಗಿ ಭಕ್ತರು ಆತಂಕಗೊಂಡು ಕಿರುಚಾಡಿದ್ದಾರೆ.

ಭಕ್ತರ ಕಿರುಚಾಟಕ್ಕೆ ಹೆದರಿದ ಚಿರತೆಗಳು ಅಲ್ಲಿಂದ ಅರಣ್ಯಕ್ಕೆ ಓಡಿಹೋಗಿವೆ. ಮೆಟ್ಟಿಲಲ್ಲಿ ಚಿರತೆ ಕಂಡ ಭಕ್ತರು ಬೆಚ್ಚಿಬಿದ್ದು ವಾಪಸ್ ಓಡಿ ಹೋಗಿದ್ದಾರೆ. ಕೂಡಲೇ ಟಿಟಿಡಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಟಿಟಿಡಿ ಸಿಬ್ಬಂದಿ ಜಾಗೃತ ದಳಕ್ಕೆ ಮಾಹಿತಿ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಜಾಗೃತ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಚಿರತೆಗಳ ಚಲನವಲನದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಅರಣ್ಯ ಸಿಬ್ಬಂದಿ ಚಿರತೆಗಳ ಜಾಡು ಹಿಡಿಯಲು ಮೈದಾನಕ್ಕೆ ಇಳಿದಿದ್ದಾರೆ. ಮತ್ತೊಂದೆಡೆ ಚಿರತೆಗಳ ಚಲನವಲನದಿಂದ ಭದ್ರತಾ ಸಿಬ್ಬಂದಿ ಎಚ್ಚೆತ್ತಿದ್ದಾರೆ. ಭಕ್ತರು ಸರತಿ ಸಾಲಿನಲ್ಲಿ ಒಂಟಿಯಾಗಿ ಹೋಗದೆ ಗುಂಪು ಗುಂಪಾಗಿ ಹೋಗುವಂತೆ ಸೂಚಿಸಲಾಗಿದೆ.
ತಿರುಮಲ ಬೆಟ್ಟದಲ್ಲಿ ಚಿರತೆ ಐದಾರು ದಿನಗಳ ಹಿಂದೆ ಕಾಣಿಸಿಕೊಂಡಿತ್ತು. ತಿರುಪತಿಯಿಂದ ತಿರುಮಲಕ್ಕೆ ಹೋಗುವ ಎರಡನೇ ಘಾಟ್ ರಸ್ತೆಯಲ್ಲಿ ವಾಹನ ಸವಾರರಿಗೆ ಚಿರತೆ ಕಾಣಿಸಿಕೊಂಡಿತ್ತು. ಭಕ್ತರು ಕಾರಿನಲ್ಲಿ ಹೋಗುತ್ತಿದ್ದಾಗ ಮುಂಜಾನೆ ಚಿರತೆಯೊಂದು ಕಾರಿಗೆ ಅಡ್ಡಲಾಗಿ ಸಾಗಿತ್ತು. ಇದರಿಂದ ತಬ್ಬಿಬ್ಬಾದ ಭಕ್ತರು ಚಿರತೆ ರಸ್ತೆ ದಾಟಿ ತೆರಳುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಅಲಿಪಿರಿ ನಡಿಗೆದಾರಿಯಲ್ಲಿ ಏಕಕಾಲಕ್ಕೆ ಎರಡು ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಭಕ್ತರಲ್ಲಿ ಭಯ ಹುಟ್ಟಿಸುತ್ತಿದೆ.

ತಿರುಪತಿಯಲ್ಲಿ ವಿಐಪಿ ದರ್ಶನ ಆರಂಭ..
ತಿರುಮಲ ತಿರುಪತಿ ದೇವಸ್ಥಾನಂ ಶ್ರೀವಾರಿ ಭಕ್ತರಿಗೆ ಸಿಹಿಸುದ್ದಿ ನೀಡಿದೆ. ವಿಐಪಿ ದರ್ಶನಕ್ಕಾಗಿ ಟಿಟಿಡಿ ನಿನ್ನೆಯಿಂದ (ಸೋಮವಾರ) ಶಿಫಾರಸು ಪತ್ರಗಳನ್ನು ಸ್ವೀಕರಿಸುತ್ತಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿಐಪಿ ಬ್ರೇಕ್ ದರ್ಶನಗಳು ಪುನರಾರಂಭಗೊಂಡಿವೆ. ಸೋಮವಾರದಿಂದ ಈ ಪತ್ರಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 13ರಂದು ಚುನಾವಣಾ ಪ್ರಕ್ರಿಯೆ ಮುಗಿದಿದ್ದು ಶ್ರೀವಾರಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದರ ಭಾಗವಾಗಿ ದಿನಕ್ಕೆ ಹತ್ತು ವಿಐಪಿ ಮತ್ತು ಹತ್ತು ರೂ.300 ಎಸ್ಇಡಿ ಟಿಕೆಟ್ಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಸದರಿಗೆ 12 ವಿಐಪಿ ಬ್ರೇಕ್ ಟಿಕೆಟ್ ಹಾಗೂ ಶಾಸಕರಿಗೆ ಆರು ವಿಐಪಿ ಬ್ರೇಕ್ ಟಿಕೆಟ್ ಗಳನ್ನು ಶಿಫಾರಸು ಪತ್ರದ ಮೇರೆಗೆ ನೀಡಲಾಗುತ್ತಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಇದೇ 22ರಂದು ನೃಸಿಂಹ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿ ವರ್ಷ ವೈಶಾಖ ಮಾಸದ ಸ್ವಾತಿ ನಕ್ಷತ್ರದಲ್ಲಿ ನೃಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಜಯಂತ್ಯುತ್ಸವದ ಅಂಗವಾಗಿ ಶ್ರೀ ಯೋಗನರಸಿಂಹಸ್ವಾಮಿ ಮೂರ್ತಿಗೆ ವಿಶೇಷ ಅಭಿಷೇಕದಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ವೈಶಾಖ ಮಾಸ ಮಹೋತ್ಸವದ ಅಂಗವಾಗಿ ತಿರುಮಲ ವಸಂತ ಮಂಟಪದಲ್ಲಿ ಮಧ್ಯಾಹ್ನ 3ರಿಂದ 4.30ರವರೆಗೆ ಶ್ರೀ ನರಸಿಂಹಸ್ವಾಮಿಗೆ ಪೂಜಾ ಕಾರ್ಯಕ್ರಮ ನಡೆಯಲಿದೆ.











Click it and Unblock the Notifications