ಕೊಲ್ಕತಾ: ಲೈಂಗಿಕ ಅಲ್ಪಸಂಖ್ಯಾತರ ಅವತಾರದಲ್ಲಿ ದುರ್ಗಾದೇವಿ
ಕೊಲ್ಕತಾ ಅಕ್ಟೋಬರ್, 16 : ದುರ್ಗಾದೇವಿ ಆರಾಧನೆ ದಸರಾ ಹಬ್ಬದ ಪ್ರಮುಖ ವಿಶೇಷತೆಯಾಗಿದ್ದು, ನಾನಾ ರೂಪದಲ್ಲಿ ದುರ್ಗಾದೇವಿ ಮೂರ್ತಿ ರೂಪುಗೊಳ್ಳುತ್ತವೆ. ಈ ಬಾರಿ ಕೊಲ್ಕತ್ತಾದ ದುರ್ಗಾದೇವಿ ಮೂರ್ತಿಎಲ್ಲರ ಗಮನ ಸೆಳೆಯುತ್ತಿದ್ದು, ಭಾರತದ ವಿಭಿನ್ನ ಶೈಲಿಯ ದುರ್ಗಾದೇವಿ ವಿಗ್ರಹಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.
ಹೌದು ದಸರಾ ಹಬ್ಬದ ಪ್ರಯುಕ್ತ ಕಲ್ಕತ್ತಾದ ಜಾಯ್ ಮಿತ್ರಾ ಸ್ಟ್ರೀಟ್ ನಲ್ಲಿ ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಸದಸ್ಯರು ದುರ್ಗಾದೇವಿಗೆ ಲೈಂಗಿಕ ಅಲ್ಪಸಂಖ್ಯಾತರ ರೂಪ ಕೊಟ್ಟಿದ್ದು, ಭಾರತದ ಮೊದಲ ವಿಶೇಷ ದುರ್ಗಾದೇವಿ ವಿಗ್ರಹ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.[ಲೈಂಗಿಕ ಅಲ್ಪಸಂಖ್ಯಾತರಿಗೆ ತೆರೆದ ವೈಟ್ ಹೌಸ್ ಬಾಗಿಲು]

ನಗರದ ಹಲವಾರು ಲೈಂಗಿಕ ಅಲ್ಪಸಂಖ್ಯಾತರು ಸೇರಿಕೊಂಡು ದುರ್ಗಾದೇವಿಗೆ ತಮ್ಮದೇ ರೂಪ ಕೊಟ್ಟು ದೇವಿಯಲ್ಲಿ ತಮ್ಮನ್ನು ಕಂಡುಕೊಂಡಿದ್ದಾರೆ. ಅಲ್ಲದೇ ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಹಿರಿಯ ಸದಸ್ಯರಿಂದ ಅಕ್ಟೋಬರ್ 18ರ ಭಾನುವಾರದಂದು ದುರ್ಗಾದೇವಿಯನ್ನು ಪೂಜಿಸಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.[ಲೈಂಗಿಕ ಅಲ್ಪಸಂಖ್ಯಾತರಿಗೊಂದು ವಿಶೇಷ ಮ್ಯಾಗಜೀನ್ ]
'ಇತ್ತೀಚಿನ ದಿನಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತಾಗಿ ಜನರಲ್ಲಿ ಸಾಕಷ್ಟು ಪೂರ್ವಗ್ರಹಗಳು ಬೆಳೆದಿದೆ. ಇದನ್ನುಹೋಗಲಾಡಿಸುವ ಪಣತೊಟ್ಟ ನಾವು ದುರ್ಗಾದೇವಿಗೆ ಈ ರೀತಿ ರೂಪ ಕೊಟ್ಟಿದ್ದೇವೆ. ಒಟ್ಟಿನಲ್ಲಿ ಜನರಲ್ಲಿ ನಮ್ಮ ಬಗ್ಗೆ ಬೆಳೆದಿರುವ ತಾತ್ಸಾರ ಮನೋಭಾವವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದೇವೆ' ಎಂದು ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಸದಸ್ಯರು ಹೇಳುತ್ತಾರೆ.
India's first Transgender Durga Puja to be held in Kolkata pic.twitter.com/4XXg5BMkyy
— TIMES NOW (@TimesNow) October 16, 2015 -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications