Ram Madir: ಇದೇ ನ. 16, 17ರಂದು ಶ್ರೀರಾಮ ಮಂದಿರ ಖಲಿಸ್ತಾನಿ ಉಗ್ರರ ಟಾರ್ಗೆಟ್...
ನವದೆಹಲಿ, ನವೆಂಬರ್ 12: ಇದೇ ವರ್ಷ ಆರಂಭದಲ್ಲಿ ಉದ್ಘಾಟನೆಗೊಂಡ ದೇಶದ ಕೋಟ್ಯಾಂತರ ಭಕ್ತಾಧಿಗಳ ಆರಾಧ್ಯ ಶ್ರೀರಾಮ ಮಂದಿರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೆಲೆಗೊಂಡಿರು ಶ್ರೀರಾಮಲಲ್ಲಾ ದೇಗುವು ದೇಶದ ಧಾರ್ಮಿಕ ಕೇಂದ್ರವಾಗುತ್ತಿದೆ. ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಇದೀಗ ಉಗ್ರರ ಟಾರ್ಗೆಟ್ ಆಗಿದೆ.
ಶ್ರಿರಾಮ ಭಕ್ತರಿಗೆ ಇದೊಂದು ಕಹಿ ಸುದ್ದಿಯೂ ಆಗಿದೆ. ಖಲಿಸ್ತಾನಿ ಉಗ್ರರು ಅಯೋಧ್ಯೆ ಶ್ರೀರಾಮಂದಿರ ಮೇಲೆ ಹಾಗೂ ಕೆನಡಾದ ಹಿಂದೂ ದೇವಾಲಯಗಳ ಮೇಲೆ ಇದೇ ನವೆಂಬರ್ 16 ಮತ್ತು 17ರಂದು ದಾಳಿ ನಡೆಸುವುದಾಗಿ ಬೆದರಿಕೆ ನೀಡಿದ್ದಾರೆ. ಈ ಸಂಬಂಧ ಕೆನಡಾ ದೇವಾಲಯಗಳು ಹಾಗೂ ರಾಮಮಂದಿರ ದೇವಾಲಯದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.

ಕೇವಲ ಅಯೋಧ್ಯೆ ರಾಮ ಮಂದಿರ ಮಾತ್ರವಲ್ಲದೇ ಕೆನಡಾ ಸೇರಿ ಇತರ ಹಿಂದೂ ದೇವಾಲಯಗಳ ಮೇಲೆ ಇದೇ ತಾರೀಖಿನಲ್ಲಿ ದಾಳಿ ಮಾಡುತ್ತೇವೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಹಾಕಿದ್ದಾರೆನೆಂದು ವರದಿ ಆಗಿದೆ.
ಇನ್ನೂ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರಿಗೂ ಸಹ ಅವರಿಗೆ ನೀವು ಕೆನಡಾ ಪರವಾಗಿರಿ ಇಲ್ಲವೇ ಭಾರತ ಬಿಟ್ಟು ತೊಲಗಿ ಎಂದು ಬೆದರಿಕೆ ಒಡ್ಡಿದ್ದಾನೆ.
ಖಲಿಸ್ತಾನಿ ಉಗ್ರರ ವಿಚಾರ ಭಾರತ ಮತ್ತು ಕೆನಡಾ, ಭಾರತ ಮತ್ತು ಅಮರಿಕಾ ಮಧ್ಯೆ ಬಿಕ್ಕಟ್ಟಿಗೆ ಕಾರಣವಾದ ಹೊತಿನ್ನಲಿಯೇ ಅಮೇರಿಕಾದಲ್ಲಿ ಆಶ್ರಯ ಪಡೆದಿರುವ ಈತ ಹಿಂದೂ ದೇವಾಲಯಗಳ ಮೇಲೆ ದಾಳಿಗೆ ಸಂಚು ರೂಪಿಸಿದ್ದರ ಬಗ್ಗೆ ಸ್ವತಃ ಆತನೇ ಬಾಯಿ ಬಿಟ್ಟಿದ್ದಾನೆ.
ಈ ದಿನ ಮಂದಿರಕ್ಕೆ ತೆರಳಬೇಡಿ: ವಿಡಿಯೋ
ಈ ಹಿಂದಿನಿಂದಲೂ ಖಲಿಸ್ತಾನಿ ಉಗ್ರರು ಭಾರತದ ಮೇಲೆ ಒಂದಿಲ್ಲ ಒಂದು ಕಾರಣದಿಂದ ಧಮ್ಕಿ ಹಾಕುತ್ತಲೇ ಬಂದಿದ್ದಾರೆ. ಈ ಬಾರಿ ರಾಮ ಮಂದಿರ ಹಸರಿನಲ್ಲಿ ಬೆದರಿಕೆ ಒಡ್ಡಿದ್ದಾರೆ.
ಅಯೋಧ್ಯೆ ತಳಪಾಯ ಅಲುಗಾಡಿಲಿಸದ್ದೇವೆ. ರಾಮಮಂದಿರ ಸೇರಿ ಕೆನಡಾದ ಕಾಲಿಬರಿ ಮಂದಿರ, ತ್ರಿವೇಣಿ ಮಂದಿರ ಮೇಲೂ ದಾಳಿ ನಡೆಸಲಿದ್ದೇವೆ ಎಂದು ಉಗ್ರ ಪನ್ನೂನ್ ಸಂದೇಶ ರವಾನಿಸಿದ್ದಾನೆ. ಈ ಹಿಂದೆಯು ಇಂತದ್ದೆ ಬೆದರಿಕೆ ಹಾಕಿ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ. ನಾನು ದಾಳಿ ಮಾಡುವ ದಿನ ಭಾರತೀಯರು ಈ ಮಂದಿರಗಳಿಗೆ ತೆರಳಬೇಡಿ ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications