20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ದುಡಿಯುವ ಕೈಗಳಿಗೆ ಸಿಕ್ಕಿತೇ ಲಾಭ.?
ನವದೆಹಲಿ, ಮೇ 13: ಕೋವಿಡ್-19 ವಿರುದ್ಧ ಹೋರಾಡಲು ಭಾರತೀಯರಿಗೆ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಮೊದಲ ಭಾಗದಲ್ಲಿ ಎಂ.ಎಸ್.ಎಂ.ಇ, ಇ.ಪಿ.ಎಫ್, ಎನ್.ಬಿ.ಎಫ್.ಸಿ, ಎಚ್.ಎಫ್.ಸಿ, ಎಂ.ಎಫ್.ಐ, ಡಿಸ್ಕಾಂಗಳಿಗೆ ವಿಶೇಷ ಪ್ಯಾಕೇಜ್ ಗಳನ್ನು ನಿನ್ನೆಯಷ್ಟೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನೌನ್ಸ್ ಮಾಡಿದ್ದರು.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಯಾರಿಗೆ ಸಿಕ್ತು ಲಾಭದ ಪಾಲು.?
ಆರ್ಥಿಕ ಪ್ಯಾಕೇಜ್ ನ ಎರಡನೇ ಭಾಗದ ವಿವರಗಳನ್ನು ಇಂದು ಸಂಜೆ 4 ಗಂಟೆಗೆ ನಡೆದ ಸುದ್ಧಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ನೀಡಿದರು.
20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ನ ಎರಡನೇ ಕಂತು ವಲಸೆ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಸಣ್ಣ ರೈತರ ಮೇಲೆ ಕೇಂದ್ರೀಕೃತವಾಗಿದೆ.
ವಲಸೆ ಕಾರ್ಮಿಕರಿಗೆ ಸಿಕ್ಕಿದ ಕೊಡುಗೆ ಏನು.?
*
ದೇಶದೆಲ್ಲೆಡೆ
ವಲಸೆ
ಕಾರ್ಮಿಕರು
ಮನ್
ರೇಗಾದಲ್ಲಿ
ಸೇರ್ಪಡೆಯಾಗಲು
ಅವಕಾಶ.
*
ಮನ್
ನರೇಗಾದ
ದಿನಗೂಲಿ
182
ರಿಂದ
202
ರೂಪಾಯಿಗೆ
ಏರಿಕೆ
ಮಾಡಲಾಗಿದೆ.
*
ಅಂತಾರಾಜ್ಯ
ವಲಸಿಗ
ಕಾರ್ಮಿಕರಿಗೆ
ಕನಿಷ್ಠ
ವೇತನ
ಕಾನೂನು
ಜಾರಿ.
*
ಎಲ್ಲಾ
ಜಿಲ್ಲೆಗಳಿಗೆ
ESIC
ಸೌಲಭ್ಯ
ವಿಸ್ತರಣೆ.
*
'ಒಂದು
ಭಾರತ
ಏಕ
ವೇತನ'
ಪದ್ಧತಿ
ಜಾರಿ.
ನೌಕರರಿಗೆ ಸಿಕ್ಕಿದ್ದೇನು.?
*
ಎಲ್ಲಾ
ಕೆಲಸಗಾರರಿಗೆ
ನೇಮಕಾತಿ
ಪತ್ರ
ಕೊಡಬೇಕು.
*
ಕನಿಷ್ಟ
10
ಜನ
ಕೆಲಸಗಾರರನ್ನು
ಹೊಂದಿರುವ
ಸಂಸ್ಥೆಗಳಿಗೂ
ESIC
ಸೌಲಭ್ಯ
ವಿಸ್ತರಣೆ.
*
ಅಪಾಯಕಾರಿ
ಕೈಗಾರಿಕೆಗಳಲ್ಲಿ
ಕೆಲಸ
ಮಾಡುವ
ಕಾರ್ಮಿಕರಿಗೆ
ESIC
ಕಡ್ಡಾಯ.
*
ನೌಕರರಿಗೆ
ವಾರ್ಷಿಕ
ಆರೋಗ್ಯ
ತಪಾಸಣೆ
ನಡೆಸಬೇಕು.
*
ಉದ್ಯೋಗ
ಕಳೆದುಕೊಂಡವರಿಗೆ
ಸರ್ಕಾರದಿಂದ
ಮರುಕೌಶಲ್ಯ
ತರಬೇತಿ.
*
ಸಕಲ
ಸುರಕ್ಷತೆಯೊಂದಿಗೆ
ಮಹಿಳೆಯರಿಗೆ
ರಾತ್ರಿ
ಪಾಳಿ
ಕೆಲಸ
ಮಾಡಲು
ಅವಕಾಶ.
*
ಗ್ರ್ಯಾಚ್ಯುಟಿ
ಅವಧಿ
ಐದು
ವರ್ಷದಿಂದ
ಒಂದು
ವರ್ಷಕ್ಕೆ
ಇಳಿಕೆ.
*
ಅಸಂಘಟಿತ
ಕಾರ್ಮಿಕ
ವಲಯಕ್ಕೆ
ಸೋಷಿಯಲ್
ಸೆಕ್ಯೂರಿಟಿ
ಫಂಡ್.
ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ
*
ಮುಂದಿನ
ಎರಡು
ತಿಂಗಳಿಗೆ
ಎಲ್ಲಾ
ವಲಸೆ
ಕಾರ್ಮಿಕರಿಗೆ
ಉಚಿತ
ಆಹಾರ
ಧಾನ್ಯ.
ವಿತರಣೆ
*
ಪಡಿತರ
ಕಾರ್ಡ್
ಇಲ್ಲದ
ಕಾರ್ಮಿಕರಿಗೂ
5
ಕೆ.ಜಿ
ಅಕ್ಕಿ/ಗೋಧಿ,
1
ಕೆ.ಜಿ
ಬೇಳೆ
ವಿತರಣೆ
*
ರಾಜ್ಯ
ಸರ್ಕಾರಗಳಿಂದ
ವಲಸೆ
ಕಾರ್ಮಿಕರಿಗೆ
ಪಡಿತರ
ನೀಡಲು
ಆದ್ಯತೆ.
ಇದರಿಂದ
8
ಕೋಟಿ
ವಲಸಿಗ
ಕಾರ್ಮಿಕರಿಗೆ
ನೆರವಾಗಲಿದೆ.
ಪಡಿತರ
ಧಾನ್ಯ
ವಿತರಣೆಗೆ
3500
ಕೋಟಿ
ರೂಪಾಯಿ
ಮೀಸಲು.
*
ರಾಷ್ಟ್ರೀಯ
ಪೋರ್ಟಬಿಲಿಟಿ
ಕಾರ್ಡ್
ಮೂಲಕ
'ಒಂದು
ದೇಶ,
ಒಂದು
ರೇಷನ್
ಕಾರ್ಡ್'
ಯೋಜನೆ
ಜಾರಿ.
ಇದರಿಂದ
ಯಾವುದೇ
ರಾಜ್ಯದಲ್ಲಾದರೂ
ಆಹಾರ
ಧಾನ್ಯ
ಪಡೆಯಬಹುದು.
ದೇಶದ
67
ಕೋಟಿ
ಜನರಿಗೆ
ಇದರಿಂದ
ಪ್ರಯೋಜನ.
ವಲಸೆ ಕಾರ್ಮಿಕರಿಗೆ ಸೂರು
*
ಬಾಡಿಗೆ
ಮನೆಯಲ್ಲಿ
ನೆಲೆಸಲು
ವಲಸೆ
ಕಾರ್ಮಿಕರಿಗೆ
ನಿರ್ದಿಷ್ಟ
ಬಾಡಿಗೆ
ಫಿಕ್ಸ್
*
ಕೈಗಾರಿಕೆಗಳಿಗೆ
ತಮ್ಮ
ಸ್ವಂತ
ಜಾಗದಲ್ಲಿ
ಬಾಡಿಗೆ
ಮನೆ
ನಿರ್ಮಾಣಕ್ಕೆ
ಅವಕಾಶ.
*
ಕೈಗಾರಿಕೆಗಳು
ಮನೆಗಳನ್ನು
ನಿರ್ಮಿಸಲು
ಸರ್ಕಾರದಿಂದ
ನೆರವು.
ಮುದ್ರಾ ಶಿಶು ಸಾಲ
*
ಮುದ್ರಾ
ಶಿಶು
ಸಾಲ
ಯೋಜನೆಯಲ್ಲಿ
50
ಸಾವಿರದವರೆಗೆ
ಸಾಲ
ಸೌಲಭ್ಯ
ಸಿಗಲಿದೆ.
*
ಮುದ್ರಾ
ಶಿಶು
ಸಾಲ
ಪಡೆದವರ
2%
ಬಡ್ಡಿ
ಕೇಂದ್ರ
ಸರ್ಕಾರ
ಭರಿಸುತ್ತೆ.
*
ಇದಕ್ಕಾಗಿ
1500
ಕೋಟಿ
ಮೀಸಲು.
ಬೀದಿಬದಿ ವ್ಯಾಪಾರಿಗಳಿಗೆ ಸಿಕ್ಕಿದ್ದೇನು.?
*
50
ಲಕ್ಷ
ಬೀದಿಬದಿ
ವ್ಯಾಪಾರಿಗಳಿಗೆ
5
ಸಾವಿರ
ಕೋಟಿ
ರೂಪಾಯಿ
ನೆರವು.
*
ಸುಲಭ
ವಿಧಾನದಲ್ಲಿ
10
ಸಾವಿರದವರೆಗೆ
ಸಾಲ
ಸೌಲಭ್ಯ.
ಮಧ್ಯಮ ವರ್ಗದ ಜನರಿಗೆ ಲಭಿಸಿದ್ದೇನು.?
*
ಮಧ್ಯಮ
ವರ್ಗದ
ಜನರಿಗೆ
ಗೃಹ
ಸಾಲ
ಸಬ್ಸಿಡಿ
ಸ್ಕೀಮ್.
*
ವಾರ್ಷಿಕ
6-18
ಲಕ್ಷದವರೆಗಿನ
ಸಂಬಳದಾರರಿಗೆ
ಈ
ಯೋಜನೆಯಿಂದ
ಅನುಕೂಲ.
*
ಮಾರ್ಚ್
2021
ರವರೆಗೆ
ಜಾರಿಯಲ್ಲಿರುವ
ಯೋಜನೆ.
*
ಇದಕ್ಕಾಗಿ
70
ಸಾವಿರ
ಕೋಟಿ
ರೂಪಾಯಿ
ಮೀಸಲು.
*
2.5
ಲಕ್ಷ
ಕುಟುಂಬಗಳಿಗೆ
ಉಪಯೋಗ
ಆಗಲಿದೆ.
*
ಗೃಹ
ಸಾಲ
ಸಬ್ಸಿಡಿ
ಸ್ಕೀಮ್
ನಿಂದ
ಸಿಮೆಂಟ್,
ಕಬ್ಬಿಣ,
ಮರಳು
ಉದ್ಯಮಕ್ಕೆ
ಪ್ರೋತ್ಸಾಹ.
ಅನ್ನದಾತನಿಗೆ ಸಿಕ್ಕ ಕೊಡುಗೆ ಏನು.?
*
ನಬಾರ್ಡ್
ಮೂಲಕ
ರೈತರಿಗೆ
30
ಸಾವಿರ
ಕೋಟಿ
ಹೆಚ್ಚುವರಿ
ತುರ್ತು
ಸಾಲ
ನೀಡಲಾಗುವುದು.
*
ಇದರಿಂದ
3
ಕೋಟಿ
ಸಣ್ಣ
ಮತ್ತು
ಅತಿ
ಸಣ್ಣ
ರೈತರಿಗೆ
ಅನುಕೂಲ
ಆಗಲಿದೆ.
*
ಕಿಸಾನ್
ಕ್ರೆಡಿಟ್
ಕಾರ್ಡ್
ಇಲ್ಲದ
2.5
ಕೋಟಿ
ರೈತರಿಗೆ
2
ಲಕ್ಷ
ಕೋಟಿ
ರೂಪಾಯಿ
ಸಾಲ
ನೀಡಲಾಗುವುದು.
*
ಕಿಸಾನ್
ಕ್ರೆಡಿಟ್
ಕಾರ್ಡ್
ವ್ಯಾಪ್ತಿಗೆ
ಪಶು
ಸಂಗೋಪನಾ
ಮತ್ತು
ಮೀನುಗಾರರ
ಸೇರ್ಪಡೆ.
*
ಮಾರ್ಚ್
1
ಕ್ಕಿದ್ದ
ಬೆಳೆ
ಸಾಲದ
ಮೇಲಿನ
ಕಂತು
ಪಾವತಿಯ
ಅಂತಿಮ
ದಿನಾಂಕ
ಮೇ
31
ಕ್ಕೆ
ವಿಸ್ತರಣೆ.
*
ಬುಡಕಟ್ಟು
ಮತ್ತು
ಆದಿವಾಸಿಗಳಿಗೆ
ಉದ್ಯೋಗ
ಸೃಷ್ಟಿ.