Toll Fee: ಹಾಳಾದ ಹೆದ್ದಾರಿಗೆ ಟೋಲ್ ಶುಲ್ಕ ಕಟ್ಟಲ್ಲ: ಸಂಚಾರಕ್ಕಾಗಿ 9.5 ಗಂಟೆ ಕಾಯ್ದ ಶೆಂಟೋ ವಿ ಆಂಟೊ..
National Highway Toll Fee Issue: ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ಕಟ್ಟುವ ವಿಚಾರದಲ್ಲಿ ಸಾಕಷ್ಟು ವಿರೋಧಗಳು, ಅಹಿತಕರ ಘಟನೆಗಳು ರಸ್ತೆ ಮಧ್ಯ ನಡೆಯುತ್ತಲೇ ಇವೆ. ಇಂಥದ್ದೆ ಪ್ರಕರಣ ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹಾಳಾದ ಹೆದ್ದಾರಿಗೆ ಟೋಲ್ ಶುಲ್ಕ ಕಟ್ಟಲ್ಲ ಎಂದ ವ್ಯಕ್ತಿಯು ಹಿಂಸಾತ್ಮಕವಾಗಿ ಯಾವ ನಿರ್ಧಾರ ಕೈಗೊಳ್ಳದೇ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಯಾವುದೇ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವಾಗ ಬೈಕ್, ಟ್ರ್ಯಾಕ್ಟರ್ ಹೊರತು ಪಡಿಸಿದರೆ ಎಲ್ಲ ವಾಹನಗಳಿಗೆ ಟೋಲ್ ಶುಲ್ಕ ಕಟ್ಟುವ ನಿಯಮ ಇದೆ. ಆದರೆ ಅದೆಷ್ಟೋ ರಸ್ತೆಗಳು ಸಮರ್ಪಕವಾಗಿ ಇಲ್ಲದಿದ್ದರೂ ವಾಹನ ಸವಾರರು ಟೋಲ್ ಶುಲ್ಕ ಕಟ್ಟುತ್ತಾರೆ. ಕೇರಳದ ಛಾಯಾಗ್ರಾಹಕ ಪಾಲಕ್ಕಾಡ್ನ ಪನ್ನಿಯಂಕರ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು ನಿರಾಕರಿಸಿದ್ದಾರೆ. ಈ ಭಾಗದಲ್ಲಿ ಹದಗೆಟ್ಟ ರಸ್ತೆಗಳಿವೆ. ಕಳಪೆ ರಸ್ತೆ ಸೌಲಭ್ಯ ಇದೆ. ಯಾವ ಕಾರಣಕ್ಕೂ ಟೋಲ್ ಗೇಟ್ ಶುಲ್ಕ ಪಾವತಿಸ ಎಂದು ಸುಮಾರು 9.5 ಗಂಟೆಗಳ ಕಾಲ ಟೋಲ್ ಪ್ಲಾಜಾದಲ್ಲೇ ಇದ್ದು ಧರಣಿ ಮಾಡಿದ್ದಾರೆ. ಉಚಿತ ಪ್ರವೇಶಕ್ಕೆ ಗಂಟೆಗಳ ಕಾಲ ಕಾಯ್ದಿದ್ದಾರೆ.

ಅವ್ಯವಸ್ಥಿತ ಹೆದ್ದಾರಿಯಲ್ಲಿನ ಸಂಚಾರದಿಂದ ಆಯಾಸ
ಛಾಯಾಗ್ರಾಹಕ ಶೆಂಟೋ ವಿ. ಆಂಟೋ ಅವರು ಪಾಲಕ್ಕಾಡ್ನಿಂದ ಎರ್ನಾಕುಲಂ ಮತ್ತು ತ್ರಿಶೂರ್ ಮಾರ್ಗವಾಗಿ ಆಗಾಗಾ ಕೆಲಸದ ವಿಷಯವಾಗಿ ಸಂಚರಿಸುತ್ತಾರೆ. ಇಲ್ಲಿನ ರಸ್ತೆಗಳ ಸ್ಥಿತಿ ಶೂಚನೀಯವಾಗಿದೆ. ಅಲ್ಲಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸಂಚಾರ ವಿಳಂಬ ಮಾತ್ರವಲ್ಲದೇ ಆಯಾಸದಾಯಕವಾಗಿದೆ. ಇದು ಸುಗಮ ಸಂಚಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಿದ್ದರು ಟೋಲ್ ಶುಲ್ಕ ಏಕೆ ಪಾವತಿಸಬೇಕು ಎಂದು ಶೆಂಟೋ ಅವರು ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.
Tour Package: ರಾಜ್ಯ ಸರ್ಕಾರದಿಂದ ಟೂರ್ ಪ್ಯಾಕೇಜ್! ಧಾರ್ಮಿಕ ಸ್ಥಳ, ಜಲಪಾತ ಪ್ರವಾಸಿಗರಿಗೆ ಇಲ್ಲಿದೆ ಗುಡ್ ನ್ಯೂಸ್
ಕಳಪೆ ರಸ್ತೆ ಇದ್ದರೂ ಟೋಲ್ ಸಂಗ್ರಹ ಸಮರ್ಥಿಸಿಕೊಳ್ಳುತ್ತಿರುವುದು ಏಕೆ ಎಂದು ಗುಡುಗಿದ್ದಾರೆ. ಇದೇ ರಸ್ತೆಯಲ್ಲಿ ಒಡಾಡುವ ನಾನು ಸಾಕಷ್ಟು ಕೆಟ್ಟ ಅನುಭವ ಕಂಡಿದ್ದೇನೆ. ಅನಾನುಕೂಲ ಅನುಭವಿಸಿದ್ದೇನೆ. ತಮ್ಮ ಗರ್ಭಿಣಿ ಸಹೋದರಿಯನ್ನು ಇದೇ ಮಾರ್ಗವಾಗಿ ಕರೆದೊಯ್ದಯವಾಗ ಆರೋಗ್ಯ ಸಮಸ್ಯೆ ಉಂಟಾಗಿತ್ತು ಎಂದು ಹಲವು ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಕೆಲವು ಹೊತ್ತಿ ಸಿಬ್ಬಂದಿ ಮತ್ತು ಶೆಂಟೋ ಮದ್ಯ ವಾಗ್ದುದ್ಧ ನಡೆದಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸರಿ ಇಲ್ಲದ ರಸ್ತೆ ನಿರ್ವಹಣೆ, ಟೋಲ್ ಶುಲ್ಕ ಸಂಗ್ರಹ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.
ಟೋಲ್ ಬಗ್ಗೆ ನಿಯಮ, ಕೋರ್ಟ್ ತೀರ್ಪು ಹೇಳುವುದೇನು?
ಟೋಲ್ ಪ್ಲಾಜಾದಲ್ಲಿ ಶೆಂಟೋ ವಿ. ಆಂಟೋ ಅವರ 9.5 ಗಂಟೆಗಳ ಪ್ರತಿಭಟನೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮೇಲಿನ ವಾಹನ ಸವಾರರ ಹತಾಶೆ ವ್ಯಕ್ತವಾಗಿದೆ. 2023 ರಲ್ಲಿ ಅಹಮದಾಬಾದ್ ಮೂಲದ ಸಂಸ್ಥೆಯೊಂದು ನಡೆಸಿದ ಅಧ್ಯಯನ ವರದಿ ಬಿಡುಗಡೆ ಆಗಿತ್ತು. ಅದರ ಪ್ರಕಾರ, ಕೇರಳ ಹೆದ್ದಾರಿ ಟೋಲ್ ರಸ್ತೆಗಳಲ್ಲಿ 68% ಕಳಪೆ ನಿರ್ವಹಣೆ ಹೊಂದಿರುವುದನ್ನು ಉಲ್ಲೇಖಿಸಲಾಗಿತ್ತು. ಅಸಮರ್ಪಕ, ಕಳಪೆ ರಸ್ತೆಯ ಟೋಲ್ಗಳಲ್ಲಿ ಶುಲ್ಕ ಪಾವತಿಸುವುದು ಸೂಕ್ತವಲ್ಲ ಎಂದು ವರದಿ ಅಂಶಗಳು ಬಿಂಬಿಸಿದ್ದವು.
ಕಳಪೆ ಹಾಗೂ ಅಸುರಕ್ಷಿತ ಇಲ್ಲವೇ ಅಪೂರ್ಣ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹಿಸದಂತೆ 2024ರ ಕೇರಳ ಹೈಕೋರ್ಟ್ ಸಹ ತೀರ್ಪು ನೀಡಿದ್ದನ್ನು ಇಂದು ಸ್ಮರಿಸಬಹುದು. ಕಳಪೆ ನಿರ್ವಹಣೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತ ಪ್ರಮಾಣ 15% ಹೆಚ್ಚಾಗಿದೆ ಎಂದು ಮತ್ತೊಂದು ವರದಿ ತಿಳಿಸಿದೆ. ಹೀಗಿ ಸುಗಮ ಸಂಚಾರಕ್ಕೆ ಅಡಚಣೆ ನೀಡುವ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸುವುದು ನ್ಯಾಯಸಮ್ಮತವೇ ಎಂದು ವಾಹನ ಸವಾರರು ಪ್ರಶ್ನಿಸುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಜೊತೆಗೆ NHAI ಹೆದ್ದಾರಿಗಳನ್ನು ಸೂಕ್ತ ನಿರ್ವಹಣೆ ಮಾಡಬೇಕು.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications