ಅತಿ ಹೆಚ್ಚು ಕುಡುಕರಿರುವ ಸಾಮ್ರಾಜ್ಯ ಇನ್ನಿಲ್ಲ
ತಿರುವನಂತಪುರಂ, ಅ.30: ಭಾರತದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯ ಎನಿಸಿರುವ ಕೇರಳದ ಕುಡುಕರಿಗೆ ಆಘಾತಕಾರಿ ಸುದ್ದಿ ಬಂದಿದೆ. ರಾಜ್ಯದ ಎಲ್ಲಾ ಬಾರ್ ಗಳನ್ನು ಮುಚ್ಚುವಂತೆ ಕೇರಳ ಸರ್ಕಾರ ನೀಡಿದ್ದ ಆದೇಶವನ್ನು ಇಲ್ಲಿನ ಹೈಕೋರ್ಟ್ ಗುರುವಾರ ಎತ್ತಿ ಹಿಡಿದಿದೆ. ಕೇರಳದ ಉಮ್ಮನ್ ಚಾಂಡಿ ಸರ್ಕಾರ ಮದ್ಯ ನಿಷೇಧ ಕಾಯಿದೆ ಜಾರಿಗೊಂಡರೆ 700ಕ್ಕೂ ಅಧಿಕ ಬಾರ್ ಗಳು ಮುಚ್ಚಬೇಕಾಗುತ್ತದೆ.
ಹೈಕೋರ್ಟ್ ಆದೇಶದ ನಂತರ ಅತಿ ಹೆಚ್ಚು ಮದ್ಯ ಮಾರಾಟ ರಾಜ್ಯ ಎಂಬ ಕುಖ್ಯಾತಿಯಿಂದ ಕೇರಳ ಪಾರಾಗಲಿದೆ.ಅದರೆ, ಅತಿ ಹೆಚ್ಚು ಕುಡುಕರನ್ನು ಹೊಂದಿರುವ ರಾಜ್ಯ ಎಂಬ ಟ್ಯಾಗ್ ಕಳಚುವುದೋ ಇಲ್ಲವೋ ಹೇಳಲುಬರುವುದಿಲ್ಲ. ಕೇರಳ ಹೈಕೋರ್ಟಿನ ಅದೇಶದಿಂದ ಬಾರ್ ಮಾಲೀಕರಿಗೆ ಭಾರಿ ಹಿನ್ನಡೆಯುಂಟಾಗಿದೆ. ಅದರೆ, ನ್ಯಾಯಾಲಯದ ಆದೇಶದಲ್ಲೂ ಕುಡುಕರಿಗೆ ಸ್ವಲ್ಪ ಆಶಾದಾಯಕ ಅಂಶವಿದೆ. [ಮದ್ಯಪಾನ ನಿಷೇಧಕ್ಕೆ 'ಸುಪ್ರೀಂ' ಬ್ರೇಕ್]

ಫೈವ್ ಸ್ಟಾರ್ ಹೋಟೆಲ್ ಗಳಲ್ಲದೆ 4 ಸ್ಟಾರ್ ಹಾಗೂ ಹೆರಿಟೇಜ್ ಹೋಟೆಲ್ ಗಳ ಬಾರ್ ಮಾನ್ಯತೆಗಳನ್ನು ರದ್ದು ಮಾಡದಂತೆ ಸೂಚಿಸಲಾಗಿದೆ. ಹೀಗಾಗಿ 21 ಫೈವ್ ಸ್ಟಾರ್ ಹೋಟೆಲ್, 44 ಫೋರ್ ಸ್ಟಾರ್ ಹಾಗೂ 8 ಹೆರಿಟೇಜ್ ಹೋಟೆಲ್ ಗಳಿಗೆ ಮಾನ್ಯತೆ ಸಿಕ್ಕಿದೆ. [ಹೈವೇ ರಸ್ತೆ ಮಧ್ಯೆ ಮದ್ಯ ಸಿಗೋಲ್ಲಾರೀ]
'ಹೈಕೋರ್ಟ್ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ' ಎಂದು ಕೇರಳದ ಹೋಟೆಲ್ ಸಂಘದ ಅಧ್ಯಕ್ಷ ಜಿ ಸುಧೇಶ್ ಕುಮಾರ್ ತಿಳಿಸಿದ್ದಾರೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾರ್ ಮಾಲೀಕರು ಹೈಕೋರ್ಟಿನಲ್ಲಿ ಸುಮಾರು 82 ಅರ್ಜಿ ಹಾಕಿದ್ದರು. [ದೇವರ ನಾಡಿನ ಮೇಲೆ ಮೋದಿ ಕಣ್ಣು]
ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವನ್ನು ಕೊಟ್ಟಿದ್ದ ರಾಜ್ಯಸರ್ಕಾರ, ಅವುಗಳೂ ಕೂಡ ಭಾನುವಾರ ಮಧ್ಯ ಮಾರದೆ ಒಣ ದಿನವನ್ನು ಅನುಸರಿಸಬೇಕು ಎಂದು ತಾಕೀತು ಮಾಡಿತ್ತು. ಮದ್ಯ ಮಾರಾಟ ನಿಷೇಧದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 6000 ಕೋಟಿ ರು ನಷ್ಟವಾಗಲಿದೆ. [ಮುನ್ನಾರ್ ಗೆ ಹಿನ್ನಡೆ, ನಮ್ಮ ಕೊಡಗು ಈಗ ನಂ 1]
ಸರ್ಕಾರದ ನಿರ್ಣಯದ ವಿರುದ್ಧ ಬಾರ್ ಮಾಲೀಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸೆ.30 ವರೆಗೆ ಈ ಆದೇಶವನ್ನು ತಡೆ ಹಿಡಿದು, ಫೈವ್ ಸ್ಟಾರ್ ಹೋಟೆಲ್ ಗಳಿಗೆ ಕೊಟ್ಟಿರುವ ಅವಕಾಶ ತರ್ಕಹೀನ ಎಂದಿತ್ತು. ಈಗ ಹೈಕೋರ್ಟ್ ಬಾರ್ ಮಾಲೀಕರಿಗೆ ಕಹಿ ಸುದ್ದಿ ನೀಡಿದೆ. ಒಟ್ಟಾರೆ, ಕೇರಳದಲ್ಲಿ ಬಾರ್ ಬಂದ್ ಆದ ಮೇಲೆ ಗಡಿಭಾಗದ ಕಾಸರಗೋಡಿನಲ್ಲಿ ಮದ್ಯ ಮಾರಾಟಗಾರರಿಗೆ ಬಂಪರ್ ಲಾಟರಿ ಹೊಡೆಯುವುದು ಗ್ಯಾರಂಟಿ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications