ಕಲಾಪದಿಂದ ಹೊರದಬ್ಬಲ್ಪಟ್ಟ ಕಪಿಲ್ ಮಿಶ್ರಾ
ದೆಹಲಿ ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದ ವೇಳೆ ಮಾತನಾಡಲು ಎದ್ದು ನಿಂತ ಆಮ್ ಆದ್ಮಿ ಪಾರ್ಟಿ ಪಕ್ಷದ ಮಾಜಿ ಸದಸ್ಯ ಕಪಿಲ್ ಮಿಶ್ರಾ ಮೇಲೆ ಹಲ್ಲೆ; ಆನಂತರ ಅವರನ್ನು ಕಲಾಪದಿಂದ ಉಚ್ಛಾಟನೆ.
ನವದೆಹಲಿ, ಮೇ 31: ಆಮ್ ಪಾರ್ಟಿಯಿಂದ ಇದೇ ತಿಂಗಳ ಆರಂಭದಲ್ಲಿ ಉಚ್ಛಾಟನೆಗೊಂಡಿದ್ದ ಕಪಿಲ್ ಮಿಶ್ರಾ, ಅವರು ಬುಧವಾರ ದೆಹಲಿ ವಿಧಾನಸಭೆಯಲ್ಲಿ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಅವರನ್ನು ವಿಧಾನಸಭೆಯಿಂದ ಉಚ್ಛಾಟನೆಗೊಳಿಸಲಾಯಿತು.
ತೀವ್ರ ಉದ್ವೇಗದಲ್ಲಿದ್ದ ಅವರನ್ನು ಸಭೆಯ ಮಾರ್ಷಲ್ ಗಳು ಬಲವಂತವಾಗಿ ಎತ್ತಿ ತಂದು ಹೊರಹಾಕಿದ ಘಟನೆಯೂ ನಡೆಯಿತು.[ಕೇಜ್ರಿವಾಲ್ ವಿರುದ್ಧ ಆರೋಪ ಮಾಡಿ ಕುಸಿದು ಬಿದ್ದ ಕಪಿಲ್ ಮಿಶ್ರಾ]

ಕಲಾಪದ ವೇಳೆಯಲ್ಲಿ ಕಪಿಲ್ ಮಿಶ್ರಾ ಅವರು, ಮಾತನಾಡಲು ಎದ್ದು ನಿಂತಾಗ ಅವರನ್ನು ಆಮ್ ಆದ್ಮಿ ಪಕ್ಷದ ಸದಸ್ಯರು ತಡೆದರು. ಇದು ಆಮ್ ಆದ್ಮಿ ಪಕ್ಷದ ಸದಸ್ಯರು ಹಾಗೂ ಕಪಿಲ್ ನಡುವೆ ವಿವಾದಕ್ಕೆ ಕಾರಣವಾಯಿತು.
ಆನಂತರ, ಮಾತಿಗೆ ಮಾತು ಬೆಳೆದು ರಂಪಾಟವಾಗಿ, ಕಪಿಲ್ ಮಿಶ್ರಾ ಹಾಗೂ ಆಮ್ ಆದ್ಮಿ ಪಾರ್ಟಿ ಸದಸ್ಯರು ಪರಸ್ಪರ ಕೈ ಮಿಲಾಯಿಸುವ ಹಂತಕ್ಕ ಹೋದರು. ಆನಂತರವೇ ಕಪಿಲ್ ಅವರನ್ನು ಹೊರ ತಂದು ಬಿಡಲಾಯಿತು.[ಹಗರಣ ಬಯಲಿಗೆಳೆಯುತ್ತೇನೆ ಎಂದ ಸಚಿವನನ್ನು ಹೊರ ದಬ್ಬಿದ ಕೇಜ್ರಿ]
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಪಿಲ್, ''ವಿಧಾನಸಭೆಯಲ್ಲಿ ನಾನು ಮಾತನಾಡಲು ನಿಂತಾಗ ನನ್ನನ್ನು ಅಡ್ಡಿಪಡಿಸಲಾಗಿದೆ. ಎಲ್ಲರೂ ಇದನ್ನು ನೋಡಿದರು. ಕೇಜ್ರಿವಾಲ್ ಅವರಂತೂ ತಮ್ಮ ಆಸನದಲ್ಲಿ ಕುಳಿತುಕೊಂಡು ನಗುತ್ತಿದ್ದರು. ನನ್ನನ್ನು ಹೊಡೆಯಲಾಯಿತು. ತಳ್ಳಾಡಲಾಯಿತು. ಕೊನೆಗೆ ಮಾರ್ಷಲ್ ಗಳ ಸಹಾಯದಿಂದ ಹೊರಹಾಕಲಾಯಿತು. ಉಪ ಮುಖ್ಯಮಂತ್ರಿಯಾಗಿರುವ ಮನೀಶ್ ಸಿಸೋಡಿಯಾ ಅವರ ಸೂಚನೆ ಮೇರೆಗೆ ನನ್ನನ್ನು ಹೊರಹಾಕಲಾಗಿದೆ'' ಎಂದು ಆರೋಪಿಸಿದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications