ಇಟ್ಟಿಗೆಯಂತಾಗುವ ಜ್ಯೂಸ್, ಕಲ್ಲಿನಂತಾಗುವ ಮೊಟ್ಟೆ; ಇದು ಸಿಯಾಚಿನ್
ಭಾರತೀಯ ಸೇನೆಯ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಮೂವರು ಸೈನಿಕರು ಮಂಜಗಡ್ಡೆಗಿಂತ ಗಟ್ಟಿಯಾದ ಆಹಾರ ಪದಾರ್ಥಗಳನ್ನು ಬಳಸುವುದಕ್ಕೆ ಪಡುವ ಪಾಡೇನು ಎಂಬುದರ ವಿಡಿಯೋ ಅದು. ಸಿಯಾಚಿನ್ ನಲ್ಲಿ ನಮ್ಮ ದೇಶದ ಯೋಧರ ಸ್ಥಿತಿಯನ್ನು ತೆರೆದಿಡುವ, ಮನ ಕರಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಕ್ಸ್ ನಲ್ಲಿರುವ ಜ್ಯೂಸ್ ಅನ್ನು ತೆಗೆದು, ಸುತ್ತಿಗೆಯಿಂದ ಒಡೆದರೂ ಅದು ಮುರಿಯುವುದಿಲ್ಲ. ಆ ಮೇಲೆ ಯೋಧರು ಮೊಟ್ಟೆ ಒಡೆಯುವುದಕ್ಕೆ ಯತ್ನಿಸಿದ್ದಾರೆ. ಅದು ಕಲ್ಲಿನಂತೆ ಆಗಿದೆ. ಸುತ್ತಿಗೆಯಿಂದ ಒಡೆದಿದ್ದಾರೆ. ಆಗ ಮತ್ತೊಬ್ಬ ಯೋಧ ಕಲ್ಲಿನ ಸ್ಲ್ಯಾಬ್ ಮೇಲೆ ಮೊಟ್ಟೆಯನ್ನು ಕುಕ್ಕಿದರೂ ಅದು ಒಡೆಯುವುದಿಲ್ಲ.
ಈ ನೀರ್ಗಲ್ಲಿನಲ್ಲಿ ಸಿಗುವ ಮೊಟ್ಟೆಗಳೇ ಇಂಥವು ಎಂದು ಒಬ್ಬರು ಹೇಳುತ್ತಾರೆ. ಆ ಮಾತಿಗೆ ಉಳಿದವರು ನಗುತ್ತಾರೆ. ಅದೇ ರೀತಿ ಈರುಳ್ಳಿ, ಟೊಮೆಟೊ, ಶುಂಠಿ, ಆಲೂಗಡ್ಡೆ ಇವುಗಳನ್ನು ಮುರಿಯುವುದಕ್ಕೂ ಇಂಥದ್ದೇ ಪ್ರಯತ್ನ ಮಾಡುತ್ತಾರೆ. ತಾಪಮಾನವು -70 ಡಿಗ್ರಿ ಸೆಲ್ಷಿಯಸ್ ತಲುಪಿ, ಬದುಕು ನರಕ ಎನಿಸುತ್ತದೆ ಎಂದು ಹೇಳಲಾಗಿದೆ.

ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಲ್ಪನೆಗಿಂತ ಬಹಳ ಕಷ್ಟವಾದುದು ಸಿಯಾಚಿನ್ ನಲ್ಲಿ ಬದುಕು. ಸಾಮಾನ್ಯವಾದ ಅನ್ನ ಅಥವಾ ದಾಲ್ ಮಾಡುವುದು ಕೂಡ ತಾಪಮಾನ -40 ಡಿಗ್ರಿಗೆ ತಲುಪಿದಾಗ ಕಷ್ಟ ಎಂದು ಟ್ವಿಟ್ಟರ್ ನಲ್ಲಿ ಬಳಕೆದಾರರು ಬರೆದಿದ್ದಾರೆ.
ಸಿಯಾಚಿನ್ ನ ಬೇಸ್ ಕ್ಯಾಂಪ್ ಸಮುದ್ರ ಮಟ್ಟದಿಂದ ಸರಾಸರಿ 20,000 ಅಡಿಗೂ ಮೇಲಿದೆ. ಇದು ವಿಶ್ವದಲ್ಲೇ ಅತ್ಯಂತ ತಂಪು ಹವಾಮಾನದ ಯುದ್ಧಭೂಮಿ. ಭೂ ಕುಸಿತದಂಥ ಅವಘಡ ತುಂಬ ಸಾಮಾನ್ಯ. ಕೆಲ ಬಾರಿ ಇಲ್ಲಿನ ಹವಾಮಾನ ಮೈನಸ್ 60 ಡಿಗ್ರಿ ತನಕ ತಲುಪುತ್ತದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications