Jharkhand Election 2024: ಪಕ್ಷ ಗೆದ್ದರೆ ಬಡ ವಿದ್ಯಾರ್ಥಿಗಳ ಜೀವನ ಬದಲು- ಸಿಎಂ ಹೇಮಂತ್
ಜಾರ್ಖಂಡ್ನಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಹೇಮಂತ್ ಸೊರೆನ್ ಸರ್ಕಾರ 'ಸಿಎಂ ಸ್ಕೂಲ್ ಆಫ್ ಎಕ್ಸಲೆನ್ಸ್' ಮೂಲಕ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದೆ ಎಂದು ಹೇಳಿಕೊಂಡಿದೆ. ಪ್ರಸ್ತುತ ರಾಜ್ಯದಲ್ಲಿ 80 ಉತ್ಕೃಷ್ಟ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ ಮೇ 2 ರಂದು ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಆಂಗ್ಲ ಮಾಧ್ಯಮ ಶಾಲೆಗಳ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.
"ಸರ್ಕಾರಿ ಶಾಲೆಗಳ ಮಕ್ಕಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ಆದರೆ ನಮ್ಮ ಸರ್ಕಾರ ಈಗ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸಿದೆ" ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಧನ್ಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಜಾರ್ಖಂಡ್ ಸರ್ಕಾರ ರಾಜ್ಯದ ಪ್ರತಿ ಮಗುವನ್ನು ಗುಣಮಟ್ಟದ ಶಿಕ್ಷಣದೊಂದಿಗೆ ಸಬಲೀಕರಣಗೊಳಿಸುವ ಉದ್ದೇಶದಿಂದ ಇದನ್ನು ಪ್ರಾರಂಭಿಸಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಗೆದ್ದರೆ ಅಂತಹ ಮಾದರಿ ಶಾಲೆಗಳು 80 ರಿಂದ 5,000 ಕ್ಕೆ ಹೆಚ್ಚಾಗುತ್ತವೆ ಎಂದು ಹೇಮಂತ್ ಸೊರೆನ್ ಹೇಳಿದರು.
ಜಾರ್ಖಂಡ್ನಲ್ಲಿ ಇಂತಹ ಮಾದರಿ ಶಾಲೆಗಳ ಸಂಖ್ಯೆಯನ್ನು ಪ್ರಸ್ತುತ 80 ರಿಂದ 5,000 ಕ್ಕೆ ಹೆಚ್ಚಿಸಲಾಗುವುದು. ಇದರಿಂದಾಗಿ ಬಡ ಮಕ್ಕಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬಹುದು ಎಂದು ಸಿಎಂ ಹೇಳಿದರು. ಮಕ್ಕಳನ್ನು ಕ್ರೀಡೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳವರೆಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಈ ಯೋಜನೆ ಮಾಡುತ್ತದೆ. ಅದು ಸೃಜನಶೀಲತೆಯನ್ನು ಪ್ರೇರೇಪಿಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಸಾಂಘಿಕ ಕಾರ್ಯದ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದರು.
ಜಾರ್ಖಂಡ್ ಸರ್ಕಾರವು ಕೃಷಿ, ಐಟಿ, ಐಟಿಇಎಸ್, ಉಡುಪು ಮತ್ತು ಮೇಕಪ್ ಮತ್ತು ಗೃಹಾಲಂಕಾರ, ಮಾಧ್ಯಮ ಮತ್ತು ಮನರಂಜನೆ, ಆಟೋಮೋಟಿವ್, ಪ್ರವಾಸೋದ್ಯಮ ಮತ್ತು ಆತಿಥ್ಯ, ಸೌಂದರ್ಯ, ಬಹು ಕೌಶಲ್ಯ, ಎಲೆಕ್ಟ್ರಾನಿಕ್ಸ್ ಮತ್ತು ಶಾಲೆಗಳ ಮಕ್ಕಳಿಗೆ ತರಬೇತಿ ನೀಡುತ್ತಿದೆ.
'ಸಿಎಂ ಸ್ಕೂಲ್ ಆಫ್ ಎಕ್ಸಲೆನ್ಸ್' ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಏನು ಹೇಳುತ್ತಾರೆ?
ವಿದ್ಯಾರ್ಥಿನಿ ಅಂಜಲಿ ಸಿಂಗ್ ಈ ಬಗ್ಗೆ ಮಾತನಾಡಿ, ರಾಜಧಾನಿಯ ಉನ್ನತ ಖಾಸಗಿ ಶಾಲೆಗಳ ಮಕ್ಕಳಂತೆ ನಿರರ್ಗಳವಾಗಿ ನಾವು ಇಂಗ್ಲಿಷ್ ಮಾತನಾಡುತ್ತೇವೆ. ರಾಜ್ಯದ ಖಾಸಗಿ ಸಂಸ್ಥೆಗಳಿಗೆ ಸಮಾನವಾಗಿ ನಮ್ಮ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯಗಳು, ಗ್ರಂಥಾಲಯಗಳು ಮತ್ತು ಡಿಜಿಟಲ್ ಕಲಿಕಾ ಪರಿಕರಗಳಂತಹ ಆಧುನಿಕ ಸೌಲಭ್ಯಗಳು ಇವೆ. ಇದನ್ನು ನಾವು ಆನಂದಿಸುತ್ತೇವೆ' ಎಂದರು.
ಅಂಜಲಿಯಂತೆ ಖಾಸಗಿ ಶಾಲೆಗಳ ಬೋಧನಾ ಶುಲ್ಕದ ಭಾರವನ್ನು ಸಹಿಸಲಾಗದ ಸಾವಿರಾರು ಬಡ ವಿದ್ಯಾರ್ಥಿಗಳು ಸಿಎಂ ಸ್ಕೂಲ್ ಆಫ್ ಎಕ್ಸಲೆನ್ಸ್ನಲ್ಲಿ ಇದೇ ರೀತಿಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿನಿ ಮಾತನಾಡಿ, "ನಾನು ಈ ಶಾಲೆಯನ್ನು ಇಷ್ಟಪಡುತ್ತೇನೆ. ಏಕೆಂದರೆ ಇದು ಶಾಲೆಯಲ್ಲಿ ಇರುವ ಸ್ಮಾರ್ಟ್ ಬೋರ್ಡ್ಗಳು, ಆಡಲು ಅನೇಕ ಆಟಗಳು, ಭೌತಶಾಸ್ತ್ರ, ಬಯೋ ಮತ್ತು ಕೆಮಿಸ್ಟ್ರಿ ಲ್ಯಾಬ್ಗಳು ನಮಗೆ ತುಂಬಾ ಸಹಾಯಕವಾಗಿದೆ" ಎಂದರು.
ಬರಿಯಾಟುವಿನ ಸಿಎಂ ಸ್ಕೂಲ್ ಆಫ್ ಎಕ್ಸಲೆನ್ಸ್ನ ಮತ್ತೊಬ್ಬ ವಿದ್ಯಾರ್ಥಿ ಸಿದ್ಧಿ ವಿನಾಯಕ್ ಮಾತನಾಡಿ, "ನಮ್ಮ ಶಿಕ್ಷಕರು ವೀಡಿಯೊಗಳನ್ನು ತೋರಿಸುವ ಮೂಲಕ ನಮಗೆ ಚೆನ್ನಾಗಿ ಕಲಿಸುತ್ತಾರೆ, ನಮ್ಮಲ್ಲಿ ಗೇಮಿಂಗ್ ಅವಧಿಗಳು ಮತ್ತು ಲೈಬ್ರರಿ ಹಾಗೂ ಇತರ ಹಲವು ಸೌಲಭ್ಯಗಳಿವೆ" ಎಂದು ಖುಷಿ ಪಟ್ಟರು.
ಶಾಲೆಯ ಪ್ರಾಂಶುಪಾಲರಾದ ದೀಪಕ್ ಕುಮಾರ್ ಮಾತನಾಡಿ, "ಈ ಶಾಲೆಯ ಪರಿಕಲ್ಪನೆಯು ಮಕ್ಕಳಿಗಾಗಿ ಉತ್ತಮವಾದ ಮೂಲಸೌಕರ್ಯಗಳನ್ನು ಹೊಂದಿದೆ ಮತ್ತು ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ಕ್ರೀಡೆಗಳನ್ನು ಒದಗಿಸುತ್ತದೆ. ಮಕ್ಕಳ ಕಲಿಗೆ ಇದು ಪ್ರಯೋಜನವಾಗಿದೆ' ಎಂದರು.












Click it and Unblock the Notifications