J&K: ಸ್ಥಳೀಯರಲ್ಲದ ಮೂವರು ಕಾರ್ಮಿಕರ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ
ಶ್ರೀನಗರ ಜುಲೈ 14: ಗಡಿ ಭಾಗದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಸ್ಥಳೀಯರಲ್ಲದ ಮೂವರು ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನ ಗಗ್ರಾನ್ ಪ್ರದೇಶದಲ್ಲಿ ಇಬ್ಬರು ಮುಸುಕುಧಾರಿ ಭಯೋತ್ಪಾದಕರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮೂವರು ಸ್ಥಳೀಯರಲ್ಲದವರ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಾಳುಗಳನ್ನು ಘಟನೆ ನಡೆದ ತಕ್ಷಣ ಮೂವರನ್ನೂ ಶ್ರೀನಗರದ ಎಸ್ಎಂಎಚ್ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಗಾಯಗೊಂಡವರನ್ನು ಅನ್ಮೋಲ್ ಕುಮಾರ್, ಹೆರಾಲಾಲ್ ಯಾದವ್ ಮತ್ತು ಪಿಂಟು ಕುಮಾರ್ ಠಾಕೂರ್ ಎಂದು ಗುರುತಿಸಲಾಗಿದೆ.
"ಶೋಪಿಯಾನ್ನಲ್ಲಿ ಮೂವರು ಹೊರಗಿನ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಗಾಯಗೊಂಡವರು ಅನ್ಮೋಲ್ ಕುಮಾರ್, ಪಿಂಟು ಕುಮಾರ್ ಠಾಕೂರ್ ಮತ್ತು ಹೆರಾಲಾಲ್ ಯಾದವ್, ಬಿಹಾರದ ಡಿಸ್ಟ್ಟ್ ಸುಪೌಲ್ ನಿವಾಸಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ'' ಎಂದು ಟ್ವಿಟರ್ನಲ್ಲಿ ಕಾಶ್ಮೀರ ಪೊಲೀಸರು ಬರೆದಿದ್ದಾರೆ.
ಅಮರನಾಥ ಯಾತ್ರೆಯಲ್ಲಿ ಕಟ್ಟೆಚ್ಚರ
ಸದ್ಯ ಅಮರನಾಥ ಯಾತ್ರೆ ಪ್ರಾರಂಭವಾಗಿದೆ. ಹೀಗಾಗಿ ಉಗ್ರದ ದಾಳಿಯನ್ನು ತಪ್ಪಿಸಲು ಸ್ಥಳದಲ್ಲಿ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 48-ದಿನಗಳ ಜುಲೈ-ಆಗಸ್ಟ್ ವಾರ್ಷಿಕ ಹಿಂದೂ ತೀರ್ಥಯಾತ್ರೆಯ ಸಮಯದಲ್ಲಿ 600,000 ಅಥವಾ ಅದಕ್ಕಿಂತ ಹೆಚ್ಚಿನ ಯಾತ್ರಾರ್ಥಿಗಳು 130 ಅಡಿ (40 ಮೀ) ಎತ್ತರದ ಗ್ಲೇಶಿಯಲ್ ಅಮರನಾಥ ಗುಹೆ ದೇಗುಲಕ್ಕೆ ತಲುಪುತ್ತಾರೆ. 12,756 ಅಡಿ (3,888 ಮೀ) ಎತ್ತರದಲ್ಲಿರುವ ಮಂಜುಗಡ್ಡೆಯ ಸ್ಟಾಲಗ್ಮೈಟ್ ಶಿವಲಿಂಗಕ್ಕೆ ಯಾತ್ರೆ ಕೈಗೊಳ್ಳಲಾಗುತ್ತದೆ. ಈ ವೇಳೆ ಉಗ್ರರು ಯಾತ್ರಿಗಳ ಮೇಲೆ ಗುಂಡು ಹಾರಿಸಿರುವ ಪ್ರಕರಣಗಳು ಇವೆ.
10 ಜುಲೈ 2017 ರಂದು ಶ್ರಾವಣ ಮಾಸದ ಮೊದಲ ಸೋಮವಾರ ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾಶ್ಮೀರ ಕಣಿವೆಯಲ್ಲಿರುವ ಅಮರನಾಥ ದೇವಸ್ಥಾನದ ದಾರಿಯಲ್ಲಿ 8 ಹಿಂದೂ ನಾಗರಿಕ ಯಾತ್ರಿಗಳು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದರು. ಕನಿಷ್ಠ 18 ಜನರು ಈ ದಾಳಿಯಲ್ಲಿ ಗಾಯಗೊಂಡರು. ಯಾತ್ರಿಕರು ಹೆಚ್ಚಾಗಿ ಭಾರತದ ಗುಜರಾತ್ ರಾಜ್ಯಕ್ಕೆ ಸೇರಿದವರಾಗಿದ್ದರು.
2 ಆಗಸ್ಟ್ 2000 ರಂದು, ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ 32 ಹಿಂದೂ ಯಾತ್ರಾರ್ಥಿಗಳನ್ನು ಕಗ್ಗೊಲೆ ಮಾಡಿತು. ಅನಂತನಾಗ್ ಜಿಲ್ಲೆಯ ನುನ್ವಾನ್ ಬೇಸ್ ಕ್ಯಾಂಪ್ನಲ್ಲಿ ಎರಡು ಗಂಟೆಗಳ ಕಾಲ ನಡೆದ ವಿವೇಚನಾರಹಿತ ಗುಂಡಿನ ದಾಳಿಯಲ್ಲಿ ಕನಿಷ್ಠ 60 ಜನರು ಗಾಯಗೊಂಡರು.
ಇನ್ನೂ 20 ಜುಲೈ 2001 ರಂದು, ಅಮರನಾಥ ದೇಗುಲದ ಮಾರ್ಗದಲ್ಲಿ ಶೇಷನಾಗ್ ಸರೋವರದ ಯಾತ್ರಿಕರ ರಾತ್ರಿ ಶಿಬಿರದ ಮೇಲೆ ಭಯೋತ್ಪಾದಕ ಎರಡು ಗ್ರೆನೇಡ್ಗಳನ್ನು ಎಸೆದು ಮನಬಂದಂತೆ ಗುಂಡು ಹಾರಿಸಿದರು. ಈ ದಾಳಿಯಲ್ಲಿ ಕನಿಷ್ಠ 13 ಜನರನ್ನು ಕೊಂದು ಇನ್ನೂ 15 ಜನರನ್ನು ಗಾಯಗೊಂಡರು.












Click it and Unblock the Notifications