ನವದೆಹಲಿ, ಅಕ್ಟೋಬರ್ 01: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ 2024ಗೆ ಮೂರನೇ ಹಂತದಲ್ಲಿ ಅಂತಿಮ ಮತದಾನವು ಇಂದು ಮಂಗಳವಾರ (ಅಕ್ಟೋಬರ್ 01) ರಂದು ನಡೆಯಲಿದೆ. 90 ವಿಧಾನಸಭಾ ಸೀಟುಗಳಿಗೆ ಮೂರನೇ ಹಂತದ ಮತದಾನವು ಬೆಳಗ್ಗೆಯಿಂದಲೇ ಸಂಜೆವರೆಗೆ ನಡೆಯಲಿದೆ. ಒಟ್ಟು 03 ಹಂತಗಳಲ್ಲಿ ಚುನಾವಣೆ ನಡೆದಿದ್ದು, ಇಂದು ಅಂತಿಮಗೊಳ್ಳಲಿದೆ. ಅ. 08ರಂದು ಫಲಿತಾಂಶ ಹೊರ ಬೀಳಲಿದೆ.
ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು, ಎರಡನೇ ಹಂತದ ಮತದಾನ ಸೆಪ್ಟೆಂಬರ್ 25 ರಂದು ನಡೆದಿತ್ತು. ಇಂದು ಮಂಗಳವಾರ 40 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 3.9 ಮಿಲಿಯನ್ ಮಂದಿ ಚಲಾಯಿಸಲಿದ್ದಾರೆ.
ಒಟ್ಟು 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದೆ. 5060 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 20,000 ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದೆ. ಸುಸೂತ್ರ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕ್ಷಣ ಕ್ಷಣದ ಅಪ್ಡೇಟ್ಗಾಗಿ 'ಒನ್ಇಂಡಿಯಾ ಕನ್ನಡ' ನೇರಪ್ರಸಾರ ವೀಕ್ಷಿಸಬಹುದು.
Oct 01, 2024, 9:06 pm IST
ಜೆ-ಕೆಯಲ್ಲಿ 3 ಹಂತಗಳಲ್ಲಿ ಮತದಾನ ಹೇಗಿತ್ತು?
ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನದ ನಂತರ ಚುನಾವಣಾ ಆಯೋಗ ಮತದಾನದ ವಿವರವನ್ನು ಹಂಚಿಕೊಂಡಿದೆ. “ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ 65.48% ಮತದಾನ ದಾಖಲಾಗಿದೆ. ಇದು ಈ 7 ಜಿಲ್ಲೆಗಳಲ್ಲಿ ಲೋಕಸಭೆ 2024ರ ಮತದಾನಕ್ಕಿಂತ ಹೆಚ್ಚು. ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 7 ಜಿಲ್ಲೆಗಳಲ್ಲಿ ಶೇ.61.38ರಷ್ಟು ಮತದಾನವಾಗಿದ್ದರೆ, ಎರಡನೇ ಹಂತದಲ್ಲಿ 6 ಜಿಲ್ಲೆಗಳಲ್ಲಿ ಶೇ.57.31ರಷ್ಟು ಮತದಾನವಾಗಿದೆ'' ಎಂದು ಹೇಳಿದೆ. live
Oct 01, 2024, 8:10 pm IST
ಜಮ್ಮು ಮತ್ತು ಕಾಶ್ಮೀರ ಮೂರನೇ ಹಂತದ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಮೂರನೇ ಹಂತದಲ್ಲಿ ಕೂಡ ಶಾಂತಿಯುತ ಚುನಾವಣೆ ನಡೆದಿದೆ. ಸಂಜೆ 5 ಗಂಟೆಯ ವೇಳೆಗೆ 40 ಕ್ಷೇತ್ರಗಳಲ್ಲಿ 65% ರಷ್ಟು ಮತದಾನ ನಡೆದಿದ್ದು, ಅಂತಿಮ ಮತದಾನದ ಮಾಹಿತಿಯನ್ನು ಚುನಾವಣಾ ಆಯೋಗ ಕೆಲವು ಕ್ಷಣಗಳಲ್ಲಿ ಬಿಡುಗಡೆ ಮಾಡಲಿದೆ.
Oct 01, 2024, 6:46 pm IST
ಜಮ್ಮು ಮತ್ತು ಕಾಶ್ಮೀರವನ್ನು ಇಂಡಿಯಾ ಒಕ್ಕೂಟ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಸಂಸದೆ ಮತ್ತು ಆಂಧ್ರಪ್ರದೇಶದ ರಾಜ್ಯಾಧ್ಯಕ್ಷ ದಗ್ಗುಬಾಟಿ ಪುರಂದೇಶ್ವರಿ ಟೀಕಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಇಂಡಿಯಾ ಒಕ್ಕೂಟಕ್ಕೆ ಮುಖ್ಯವಲ್ಲ, ಅವರ ರಾಜಕೀಯ ಲಾಭ ಮಾಡಿಕೊಳ್ಳುವುದು ಮಾತ್ರ ಅವರಿಗೆ ಮುಖ್ಯವಾಗಿದೆ ಎಂದು ಆರೋಪಿಸಿದರು.
Oct 01, 2024, 6:33 pm IST
ಸಂಜೆ 5ರವರೆಗೆ ಶೇ.65.48ರಷ್ಟು ಮತದಾನ
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಜೆ 5 ಗಂಟೆಯವರೆಗೆ 65.48 ರಷ್ಟು ಮತದಾನವಾಗಿದೆ. ಬಂಡಿಪೋರಾದಲ್ಲಿ ಶೇ.63.33, ಬಾರಾಮುಲ್ಲಾದಲ್ಲಿ ಶೇ.55.73, ಜಮ್ಮುವಿನಲ್ಲಿ ಶೇ.66.79 ಮತ್ತು ಕಥುವಾದಲ್ಲಿ ಶೇ.70.53ರಷ್ಟು ಮತದಾನವಾಗಿದೆ. ಜೊತೆಗೆ ಕುಪ್ವಾರದಲ್ಲಿ ಶೇಕಡಾ 62.76, ಸಾಂಬಾದಲ್ಲಿ ಶೇಕಡಾ 72.41 ಮತ್ತು ಉಧಮ್ಪುರದಲ್ಲಿ ಶೇಕಡಾ 72.91ರಷ್ಟು ಮತದಾನವಾಗಿದೆ.
Oct 01, 2024, 6:19 pm IST
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೂರನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ 65.48ರಷ್ಟು ಮತದಾನವಾಗಿದೆ. ಬಹುತೇಕ ಎಲ್ಲ ಕಡೆಯೂ ಶಾಂತಿಯುತ ಮತದಾನವಾಗಿದೆ
Oct 01, 2024, 5:55 pm IST
ಜಮ್ಮು ಕಾಶ್ಮೀರದಲ್ಲಿ ದಾಖಲೆಯ ಮತದಾನ ನಿರೀಕ್ಷೆ
ಮಧ್ಯಾಹ್ನ 03 ಗಂಟೆ ಹೊತ್ತಿಗಾಗಲೇ ಶೇಕಡಾ 56.01ರಷ್ಟು ಮತದಾನ ಆಗಿದೆ. ಇನ್ನೂ ಸಂಜೆ 06 ಗಂಟೆವರೆಗೆ ಮೊದಲ ಹಂತದ ಮತದಾನ ಪ್ರಮಾಣಕ್ಕಿಂತಲೂ (ಶೇಕಡಾ 61.3ರಷ್ಟು) ಹೆಚ್ಚು ಮತದಾನ ಆಗುವ ನಿರೀಕ್ಷೆಗಳು ಹೆಚ್ಚಾಗಿವೆ.
Oct 01, 2024, 4:17 pm IST
ಜಮ್ಮು ಮತ್ತು ಕಾಶ್ಮೀರದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.64.43ರಷ್ಟು ಮತದಾನ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಶೇ.64.43ರಷ್ಟು ಮತದಾನವಾಗಿದೆ. ಬಂಡಿಪೋರಾದಲ್ಲಿ 53.09%, ಬಾರಾಮುಲ್ಲಾದಲ್ಲಿ 46.09%, ಜಮ್ಮು 56.74%, ಕಥುವಾದಲ್ಲಿ 62.43%, ಕುಪ್ವಾರದಲ್ಲಿ 52.98%, ಸಂಭಾದಲ್ಲಿ 63.246%, ಉಧಂಪುರದಲ್ಲಿ 64.43% ಮತದಾನವಾಗಿದೆ.
Oct 01, 2024, 4:12 pm IST
ಮತದಾನಕ್ಕೆ ಗುಲಾಂ ನಬಿ ಆಜಾದ್ ಕರೆ
ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಮಂಗಳವಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಕೊನೆಯ ಹಂತದ ಮತದಾನದಲ್ಲಿ ಮತದಾರರಿಗೆ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.
Oct 01, 2024, 3:59 pm IST
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೂರನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ 56.01ರಷ್ಟು ಮತದಾನವಾಗಿದೆ
56.01% voter turnout recorded till 3 pm in the third and final phase of the Jammu and Kashmir Assembly elections.
ಜಮ್ಮು ಮತ್ತು ಕಾಶ್ಮೀರದ ಮೂರನೇ ಹಂತದಲ್ಲಿ 7 ಜಿಲ್ಲೆಗಳ 40 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಕಥುವಾದಲ್ಲಿ ಶೇ.50.09ರಷ್ಟು ಮತದಾನವಾಗಿದ್ದರೆ, ಉಧಂಪುರದಲ್ಲಿ ಇದುವರೆಗೆ ಅತಿ ಹೆಚ್ಚು ಅಂದರೆ ಶೇ.51.66ರಷ್ಟು ಮತದಾನವಾಗಿದೆ. ಬಾರಾಮುಲ್ಲಾದಲ್ಲಿ ಶೇ.36.60ರಷ್ಟು ಮತದಾನವಾಗಿದೆ.
Oct 01, 2024, 2:38 pm IST
"ಕುಪ್ವಾರಾದಲ್ಲಿ 6 ವಿಧಾನಸಭಾ ಕ್ಷೇತ್ರಗಳು ಮತ್ತು 622 ಮತಗಟ್ಟೆಗಳಿವೆ. ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಉತ್ಸಾಹದಿಂದ ನಡೆಯುತ್ತಿದೆ. ಜನರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ, ಇದು ಪ್ರಜಾಪ್ರಭುತ್ವದ ಚಿತ್ರಣ. ಗಡಿ ಪ್ರದೇಶದ ಮತ್ತು ಗ್ರಾಮಗಳ ಮತಗಟ್ಟೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ" ಎಂದು ಕುಪ್ವಾರಾದ ಜಿಲ್ಲಾ ಚುನಾವಣಾಧಿಕಾರಿ ಆಯುಷಿ ಸುಧಾನ್ ಹೇಳಿದರು.
Oct 01, 2024, 1:48 pm IST
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ರದ್ದುಪಡಿಸಿತ್ತು. ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯದ ಜನರು ಮೊದಲ ಬಾರಿಗೆ ಮತದಾನ ಮಾಡಿದರು. 1957ರಲ್ಲಿ ಪಂಜಾಬ್ನಿಂದ ಕರೆತರಲಾದ ವಾಲ್ಮೀಕಿ ಸಮುದಾಯದ ಜನರಿಗೆ ಇದುವರೆಗೂ ರಾಜ್ಯದಲ್ಲಿ ಮತದಾನದ ಹಕ್ಕು ಇರಲಿಲ್ಲ.
Oct 01, 2024, 1:43 pm IST
ಕಥುವಾದ ಬಾನಿಯಲ್ಲಿ 35 ಪ್ರತಿಶತ ಮತದಾನ
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಕಥುವಾ ಜಿಲ್ಲೆಯ ಬಾನಿ ಪ್ರದೇಶದಲ್ಲಿ ಮೊದಲ ನಾಲ್ಕು ಗಂಟೆಗಳಲ್ಲಿ 34.92 ಶೇಕಡಾ ಮತದಾನವಾಗಿದೆ. ಇದು ಮೂರನೇ ಹಂತದಲ್ಲಿ ಮುನ್ನಡೆ ಸಾಧಿಸಿದೆ. ಒಂದು ಕಾಲದಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ಭದ್ರಕೋಟೆಯಾಗಿದ್ದ ಸೋಪೋರ್ ಪ್ರದೇಶದಲ್ಲಿ ಅತ್ಯಂತ ಕಡಿಮೆ ಅಂದರೆ ಶೇಕಡಾ 17.28 ರಷ್ಟು ಮತದಾನವಾಗಿದೆ.
Oct 01, 2024, 1:34 pm IST
ಜಮ್ಮು ಮತ್ತು ಕಾಶ್ಮೀರಕ್ಕೆ ದೂರದೃಷ್ಟಿಯ ಸರ್ಕಾರದ ಅಗತ್ಯವಿದೆ. ಅದು ಪ್ರದೇಶದ ಭದ್ರತೆ, ಶಾಂತಿ ಮತ್ತು ಸ್ಥಿರತೆಗಾಗಿ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಕ್ಸ್ ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
जम्मू-कश्मीर को एक ऐसी सरकार की जरूरत है, जो विजनरी भी हो और यहाँ की सुरक्षा, शांति व स्थिरता के लिए मजबूत निर्णय भी ले सके। आज यहाँ अंतिम चरण में मतदान करने वाली जनता अपनी वोट की शक्ति से एक ऐसी सरकार बनाएँ, जो जम्मू-कश्मीर को आतंकवाद, अलगाववाद, परिवारवाद और भ्रष्टाचार से दूर…
'10 ವರ್ಷಗಳ ನಂತರ ನಡೆಯುತ್ತಿರುವ ಚುನಾವಣೆ ಅತ್ಯಂತ ದೊಡ್ಡ ವಿಷಯ. ಈಗ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಮಗೆ ಈ ಅವಕಾಶ ಸಿಗುತ್ತಿದೆ. ನಮ್ಮ ಪಕ್ಷವು ಜನರ ಮುಂದೆ ಅಭಿಪ್ರಾಯಗಳನ್ನು ಮಂಡಿಸಲು ಪ್ರಯತ್ನಿಸಿದೆ' ಎಂದು ಬಾರಾಮುಲ್ಲಾ ಸಂಸದ ಹಾಗೂ ಅವಾಮಿ ಇತ್ತೆಹಾದ್ ಪಕ್ಷದ ನಾಯಕ ರಶೀದ್ ಇಂಜಿನಿಯರ್ ಪುತ್ರ ಅಬ್ರಾರ್ ಹೇಳಿದ್ದಾರೆ. 'ಬಿಜೆಪಿ ನಮ್ಮ ತಂದೆ ರಶೀದ್ ಅವರನ್ನು 5 ವರ್ಷಗಳ ಕಾಲ ಜೈಲಿನಲ್ಲಿಟ್ಟು ಚಿತ್ರಹಿಂಸೆ ನೀಡಿದೆ. ಹೀಗಿರುವಾಗ ನಮ್ಮನ್ನು ಬಿಜೆಪಿಯ ಬಿ ಟೀಂ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ? ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸಬೇಕು. ಏಕೆಂದರೆ ಅದು ನಮ್ಮ ಹಕ್ಕು' ಎಂದಿದ್ದಾರೆ.
Oct 01, 2024, 12:42 pm IST
ರಾಜಕೀಯ ಪಕ್ಷಗಳು ಮೂರ್ಖರನ್ನಾಗಿಸುತ್ತಿವೆ: ಜುನೈದ್
ಜಮ್ಮು ಮತ್ತು ಕಾಶ್ಮೀರ ವರ್ಕರ್ಸ್ ಪಾರ್ಟಿ ಅಧ್ಯಕ್ಷ ಮೀರ್ ಜುನೈದ್ ಮಾತನಾಡಿ, ಪಾಕಿಸ್ತಾನದವರು ಭಯೋತ್ಪಾದಕರನ್ನು ಕಳುಹಿಸುವುದನ್ನು ನಿಲ್ಲಿಸುವವರೆಗೆ, ಜನರನ್ನು, ವೈದ್ಯರನ್ನು, ಇಂಜಿನಿಯರ್ ಅನ್ನು ಕೊಲ್ಲುವುದ ನಿಲ್ಲಿಸುವವರೆಗೂ ನಾವು ಅವರೊಂದಿಗೆ ಮಾತನಾಡುವ ಅಗತ್ಯವಿಲ್ಲ. ಈ ರಾಜಕೀಯ ಪಕ್ಷಗಳೂ ಜನರನ್ನು ಮೂರ್ಖರನ್ನಾಗಿಸುತ್ತಿವೆ. ನಾಳೆ ಅವರು ಚೀನಾದೊಂದಿಗೆ ಮಾತನಾಡಲು ಬಯಸುತ್ತೇವೆ ಎಂದರೆ ನಾವು, ಅವರೊಂದಿಗೆ ಹೇಗೆ ಮಾತನಾಡಬೇಕು. ಯೋಗ್ಯ ದೇಶದೊಂದಿಗೆ ನಾವು ಉತ್ತಮ ಸಂಬಂಧ ಹೊಂದಬೇಕು ಎಂದು ಅವರು ರಾಜತಾಂತ್ರಿಕ ಮತ್ತು ಜಮ್ಮು ಕಾಶ್ಮೀರ ಪರಿಸ್ಥಿತಿ ಉದ್ದೇಶಿಸಿ ತಿಳಿಸಿದರು.
#WATCH | Kupwara, J&K: Jammu and Kashmir Workers Party President Mir Junaid says, "...Of course, there is no need to talk to them (Pakistan) until they stop sending terrorists and killing sane people, killing our doctors, engineers. All these political parties have been fooling… pic.twitter.com/X9XfdboXHO
ಜಮ್ಮು ಮತ್ತು ಕಾಶ್ಮೀರದಲ್ಲಿ 3ನೇ ಮತ್ತು ಅಂತಿಮ ಹಂತದ ಮತದಾನ ಮಂಗಳವಾರ ನಡೆಯುತ್ತಿದೆ. 40 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಚುನಾವಣಾ ಫಲಿತಾಂಶ ಅಕ್ಟೋಬರ್ 8ರಂದು ಪ್ರಕಟವಾಗಲಿದೆ.
Oct 01, 2024, 11:37 am IST
ಕಣಿವೆ ಜನರಿಗೆ ಪ್ರಧಾನಿ ಮೇಲೆ ನಂಬಿಕೆ: ದೇವೇಂದ್ರ ಸಿಂಗ್
ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ, ನಗ್ರೋಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೆಂದರ್ ಸಿಂಗ್ ರಾಣಾ ಮಾತನಾಡಿದರು. ಇದು ಪ್ರಜಾಪ್ರಭುತ್ವದ ಹಬ್ಬವಾಗಿದೆ ಮತ್ತು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದಾರೆ. ವಿಕ್ಷಿತ್ ಭಾರತ್ನ ಈ ಯಾತ್ರೆಯಲ್ಲಿ ತಮ್ಮನ್ನು ತಾವು ಸೇರಿಸಿಕೊಳ್ಳಲು ಬಯಸುತ್ತಾರೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Oct 01, 2024, 11:28 am IST
ಪಠ್ಠಾಣ್ ಕ್ಷೇತ್ರದ ನ್ಯಾಷನಲ್ ಕಾನ್ಪರೆನ್ಸ್ ಅಭ್ಯರ್ಥಿ ರಿಯಾಜ್ ಬೇದಾರ್, "ನಾವು ಪ್ರಜಾಪ್ರಭುತ್ವದ ಪ್ರಮುಖ ಭಾಗ, ಜನರು ಮತದಾನ ಮಾಡಲು ಉತ್ಸುಕರಾಗಿದ್ದಾರೆ. ಅವರಿಗೆ ಅವರ ಸಮಸ್ಯೆ ಬಗೆಹರಿಸಲು ಅವರದ್ದೇ ಆದ ಸರ್ಕಾರ ಬೇಕಿದೆ. ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ" ಎಂದರು.
#WATCH | Pattan: National Conference candidate from Pattan Assembly constituency, Riyaz Bedar says, "...We are an important part of Indian democracy and people are very excited to vote. They want their own government that can raise the issues of the public...I will work to ensure… pic.twitter.com/1nBMPQmP3k
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ನಾಗ್ರೋಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂಧರ್ ಸಿಂಗ್ ರಾಣಾ ಮಾತನಾಡಿ, "ಇದು ಪ್ರಜಾಪ್ರಭುತ್ವದ ಹಬ್ಬ ಜನರು ಉತ್ಸಾಹದಿಂದಲೇ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ, ವಿಕಾಸ್ ಭಾರತದ ಕಡೆ ಅವರು ಹೆಜ್ಜೆ ಹಾಕುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ" ಎಂದರು.
Oct 01, 2024, 10:38 am IST
ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಾಜಿ ಉಪ ಮುಖ್ಯಮಂತ್ರಿಗಳಾದ ಮುಜಾಫರ್ ಬೇಗ್ ಹಾಗೂ ತಾರಾ ಚಂದ್ ಚುನಾವಣಾ ಕಣದಲ್ಲಿ ಇದ್ದಾರೆ.
Oct 01, 2024, 10:31 am IST
ಇದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಜನರು ಉತ್ಸಾಹದಿಂದ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಜಮ್ಮು ಮತ್ತು ಜನರು ಮತ್ತು ಕಾಶ್ಮೀರವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಂಬಿಕೆಯನ್ನು ಹೊಂದಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ನಗ್ರೋಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೆಂದರ್ ಸಿಂಗ್ ಹೇಳಿದ್ದಾರೆ.
#WATCH | Jammu and Kashmir: After casting his vote, BJP candidate from Nagrota Assembly seat, Devender Singh Rana says, "It is a festival of democracy and people are enthusiastic and people are participating in it with so much enthusiasm and passion. The people of Jammu and… https://t.co/EoY2NF9V7zpic.twitter.com/grFNJd2lK8
ಮತದಾನ ಕುರಿತು ಮಾತನಾಡಿರುವ ಕಾಂಗ್ರೆಸ್ನ ರಾಹುಲ್ ಗಾಂಧಿಯವರು, ಭಾರತಕ್ಕಾಗಿ ನಿಮ್ಮ ಪ್ರತಿ ಮತವೂ ಜಮ್ಮು ಮತ್ತು ಕಾಶ್ಮೀರದ ಭವಿಷ್ಯದ ಅಡಿಪಾಯವನ್ನು ಭದ್ರಪಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಮೂರನೇ ಮತ್ತು ಕೊನೆಯ ಹಂತದ ನಡೆಯುತ್ತಿದೆ.. ನೆನಪಿರಲಿ, ಈ ಚುನಾವಣೆ ರಾಜ್ಯದ ಸ್ವಾಭಿಮಾನದ ಬಗ್ಗೆ, ರಾಜ್ಯದ ಜನರ ಹಕ್ಕುಗಳ ಬಗ್ಗೆ. ಎಲ್ಲಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮನೆಗಳಿಂದ ಹೊರಗೆ ಬಂದು ಮತ ಚಲಾಯಿಸಬೇಕು ಎಂದು ಅವರು ಕರೆ ನೀಡಿದರು.
Oct 01, 2024, 10:11 am IST
ನಗ್ರೋಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೆಂದರ್ ಸಿಂಗ್ ರಾಣಾ ಅವರು ಜಮ್ಮುವಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
#WATCH | Jammu and Kashmir: BJP candidate from Nagrota Assembly seat, Devender Singh Rana casts his vote at a polling booth in Jammu. pic.twitter.com/jy98rMxuQC
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಹಂತದ ಮತದಾನದ ಕುರಿತು ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ನೌಶೇರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರವೀಂದರ್ ರೈನಾ, ʼಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಹಂತದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮತ ಚಲಾಯಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನತೆ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ತುಂಬುಹೃದಯದಿಂದ ಭಾಗಿಯಾಗುತ್ತಿದೆ. ಈ ಚುನಾವಣೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Oct 01, 2024, 9:43 am IST
ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ 3ನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯ ತನಕ ಶೇ 11.60ರಷ್ಟು ಮತದಾನವಾಗಿದೆ. ಜಮ್ಮುವಿನಲ್ಲಿ ಶೇ 11.46, ಬಾರಾಮುಲ್ಲಾದಲ್ಲಿ ಶೇ 8.89, ಉದಾಮ್ಪುರ್ನಲ್ಲಿ ಶೇ 8.89, ಕುಪ್ವಾರಾದಲ್ಲಿ ಶೇ 13.09ರಷ್ಟು ಮತದಾನವಾಗಿದೆ.
Oct 01, 2024, 9:17 am IST
ಕೇಂದ್ರ ಸಚಿವ ಜಿತೇಂದ್ರ ಸಿಂಗ್, "ಪಾಕಿಸ್ತಾನದಿಂದ ಬಂದ ಎಲ್ಲಾ ನಿರಾಶ್ರಿತರು ಕಾಂಗ್ರೆಸ್ ಪಕ್ಷದ ಪರವಾಗಿಲ್ಲ. ವಿಭಜನೆಗೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂಬುದು ಜನರಿಗೆ ತಿಳಿದಿದೆ. ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನ ಸಾಮಾನ್ಯ ಜನರಿಗೆ ಅನುಕೂಲವಾಗಿಲ್ಲ. ಶ್ರೀಗರದ ರಸ್ತೆಯಲ್ಲಿ ಸಾಮಾನ್ಯ ಜನರನ್ನು ಕೇಳಿದರೆ ಅವರು 370ನೇ ವಿಧಿರದ್ದು ಸರಿಯಾದ ನಿರ್ಧಾರ ಎಂದು ಹೇಳುತ್ತಾರೆ" ಎಂದರು.
Oct 01, 2024, 9:00 am IST
ಮತಗಟ್ಟೆಗಳ ಮುಂದೆ ಜನವೋ ಜನ
ಅಂತಿಮ ಹಂತದಲ್ಲಿ ಮತಗಟ್ಟೆಗಳ ಹೊರಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂತು. ಇಂದು ನಡೆಯಲಿರುವ 3ನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಜನರು ಉಧಮ್ಪುರದ ಮತಗಟ್ಟೆಯಲ್ಲಿ ಜಮಾಯಿಸಿದ್ದರು. ಯುಟಿಯ 7 ಜಿಲ್ಲೆಗಳ 40 ಕ್ಷೇತ್ರಗಳಲ್ಲಿ ಅರ್ಹ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
#WATCH | J&K: People queue up at a polling station in Udhampur to vote in the 3rd & final phase of the Assembly elections today.
Eligible voters in 40 constituencies across 7 districts of the UT are exercising their franchise today. pic.twitter.com/1mZ3Gt5k46
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ 3ನೇ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದೆ. ಇಂದು ಏಳು ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
READ MORE
5:21 PM, 30 Sep
ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕದ ಬಳಿಕ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಒಟ್ಟು ಮೂರು ಹಂತಗಳಲ್ಲಿ ಮತದಾನ ಆರಂಭವಾಗಲಿದೆ. ಇಂದು ಮಂಗಳವಾರ ಅಕ್ಟೋಬರ್ 01 ರಂದು ಮೂರನೇ ಹಂತದಲ್ಲಿ ಒಟ್ಟು 40 ಕ್ಷೇತ್ರಗಳಲ್ಲಿ ಮತದಾರರು ಮತದಾನ ಮಾಡಲಿದ್ದಾರೆ.
5:21 PM, 30 Sep
ಜಮ್ಮು ಮತ್ತು ಕಾಶ್ಮೀರದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 3.9 ಮಿಲಿಯನ್ ಗೂ ಹೆಚ್ಚು ಮಿಲಿಯನ್ ಮತದಾರರು ಇದ್ದಾರೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಸ್ಥಾಪಿಸಲಾಗಿರುವ 5060 ಮತಗಟ್ಟೆಗಳ ಸುತ್ತಮುತ್ತ ಸೂಕ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
5:21 PM, 30 Sep
ಜಮ್ಮುವಿನ 24 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನಿಕಟ ಪೈಪೋಟಿ ಶುರುವಾಗಿದೆ. ಉತ್ತರ ಕಾಶ್ಮೀರದಲ್ಲಿ 16 ಸ್ಥಾನಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ನ ಇಂಡಿಯಾ ಬ್ಲಾಕ್ ಅಭ್ಯರ್ಥಿಗಳು ಮತ್ತು ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಮತ್ತು ಪ್ರತಿನಿಧಿಗಳ ನಡುವೆ ಪೈಪೋಟಿ ಏರ್ಪಡಲಿದೆ ಎಂದು ವಿಶ್ಲೇಷಿಸಲಾಗಿದೆ.
6:13 AM, 1 Oct
ಹೆಚ್ಚಿನ ಮತದಾನ ನಿರೀಕ್ಷೆ
ಜಮ್ಮು ಮತ್ತು ಕಾಶ್ಮೀರಕ್ಕೆ ಈಗಾಗಲೇ ಎರಡು ಹಂತಗಳ ಮತದಾನ ನಡೆದಿದೆ. ಮೊದಲ ಹಂತದಲ್ಲಿ ಶೇಕಡಾ 61.3ರಷ್ಟು ಮತದಾನ ನಡೆದರೆ, ಎರಡನೇ ಹಂತದಲ್ಲಿ 57.31 ರಷ್ಟು ಮತದಾನ ನಡೆಯಿತು. ಇಂದು ಮೂರನೇ ಹಂತದ ಮತದಾನ ಬೆಳಗ್ಗೆ 07 ಗಂಟೆಯಿಂದ ಆರಂಭವಾಗಲಿದೆ. ಅತ್ಯಧಿಕ ಮತದಾನ ನಿರೀಕ್ಷೆ ಇದೆ.
6:20 AM, 1 Oct
ಮತದಾನ ಮತದಾರರ ಆದ್ಯ ಕರ್ತವ್ಯ
ಕಣಿವೆ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಅಂತಿಮ ಹಂತದ ಮತದಾನ ನಡೆಯಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರು ಮತದಾನ ಮಾಡುವುದು ಅದ್ಯ ಕರ್ತವ್ಯವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಇಂದಿನ ಮತದಾನದ ಅಗತ್ಯ ಸಿದ್ಧತೆ, ಸಿಬ್ಬಂದಿ ಸಜ್ಜಾಗಿರುವುದು, ಮತಗಟ್ಟೆಯ ಸಣ್ಣ ವಿಡಿಯೋ ಹಂಚಿಕೊಂಡಿದೆ. ಎಲ್ಲರು ಕಡ್ಡಾಯ ಮತದಾನ ಮಾಡುವಂತೆ ಆಯೋಗ ಮನವಿ ಮಾಡಿದೆ.
On the Frontlines of Democracy: The Journey of Polling Parties in #Baramulla.
We are all prepared; it's your time to make your mark by casting your vote tomorrow in #Phase3 of J&K Assembly Elections 2024
ಚುನಾವಣೆ ಪ್ರಯುಕ್ತ ಜಮ್ಮುವಿನಲ್ಲಿ ಬಹು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಕ್ರಮ್ ರಾಂಧವಾ ಅವರು ಇಂದು ಮೂರನೇ ಹಂತದ ವಿಧಾನಸಭಾ ಚುನಾವಣೆಗೆ ಮುನ್ನ ಬಾವೇ ವಾಲಿ ಮಾತಾ ಮಹಾಕಾಳಿ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಕ್ಷೇತ್ರದಿಂದ ಕಾಂಗ್ರೆಸ್ ತರಂಜಿತ್ ಸಿಂಗ್ ಟೋನಿ ಮತ್ತು ಪಿಡಿಪಿಯಿಂದ ವರೀಂದರ್ ಸಿಂಗ್ ಕಣಕ್ಕಿಳಿದಿದ್ದಾರೆ.
#WATCH | Jammu: BJP candidate from Bahu assembly Constituency Vikram Randhawa offers prayers at the Bawe Wali Mata Mahakali Mandir ahead of the third phase of the assembly elections today.
Congress has fielded Taranjit Singh Tony and PDP has Varinder Singh from this seat pic.twitter.com/vWzjs9C5Qx
ಜಮ್ಮು ಮತ್ತು ಕಾಶ್ಮೀರದ ಮತಗಟ್ಟೆ ಸಂಖ್ಯೆ 2ರಲ್ಲಿ ಇಂದು ಬೆಳಗ್ಗೆ ಮತದಾನದ ಅಣಕು ಪ್ರದರ್ಶನ ನಡೆಯುತ್ತಿದೆ. ಜಮ್ಮು ಉತ್ತರ ಕ್ಷೇತ್ರದಿಂದ ಜೆಕೆಎನ್ಸಿ ಅಜಯ್ ಕುಮಾರ್ ಸಾಧೋತ್ರ, ಪಿಡಿಪಿಯಿಂದ ದರ್ಶನ್ ಕುಮಾರ್ ಮಗೋತ್ರಾ ಮತ್ತು ಬಿಜೆಪಿಯಿಂದ ಶಾಮ್ಲಾಲ್ ಶರ್ಮಾ ಸ್ಪರ್ಧಿಸಿದ್ದಾರೆ.
7:19 AM, 1 Oct
20,000 ಮತಗಟ್ಟೆಗಳಲ್ಲಿ ಮತದಾನ ಆರಂಭ
ಜಮ್ಮು ಮತ್ತು ಕಾಶ್ಮೀರದ ಮೂರನೇ ಹಂತದಲ್ಲಿ ಮತದಾನ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದೆ. 415 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ 19 ಲಕ್ಷ ಮಹಿಳಾ ಮತದಾರರು, 20.09 ಲಕ್ಷ ಪುರುಷ ಮತದಾರರು ಹಾಗೂ 57ಮಂದಿ ತೃತಿಯ ಲಿಂಗಿ ಮತದಾರರು ಇಂದು ಮತದಾನ ಮಾಡಲಿದ್ದಾರೆ.
7:42 AM, 1 Oct
ಮತದಾನ ಮಾಡುವಂತೆ ಪ್ರಧಾನಿ ಮೋದಿ ಮನವಿ
ಜಮ್ಮು ಕಾಶ್ಮೀರ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮೂರನೇ ಮತ್ತು ಕೊನೆಯ ಸುತ್ತಿನ ಮತದಾನ ಇದಾಗಿದೆ. ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಲು ಎಲ್ಲಾ ಮತದಾರರು ಮುಂದೆ ಬಂದು ಮತದಾನ ಮಾಡಬೇಕೆಂದು ವಿನಂತಿಸಿದ್ದಾರೆ. ಪ್ರಥಮ ಬಾರಿಗೆ ಮತದಾನ ಮಾಡಲಿರುವ ಯುವ ಸ್ನೇಹಿತರಲ್ಲದೆ, ಮಹಿಳಾ ಶಕ್ತಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮತದಾನಕ್ಕೆ ಅವರು ಕರೆ ನೀಡಿದ್ದಾರೆ.
8:03 AM, 1 Oct
J & K ಕಣದಲ್ಲಿರುವ ಪ್ರಮುಖ ಪಕ್ಷಗಳು
ಜಮ್ಮು ಮತ್ತು ಕಾಶ್ಮೀರದ ಅಂತಿಮ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಭಾರತೀಯ ಜನತಾ ಪಕ್ಷ (ಬಿಜೆಪಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಅಪ್ನಿ ಪಾರ್ಟಿ, ಸಿಪಿಐ(ಎಂ), ಜೆ & ಕೆ ಪೀಪಲ್ಸ್ ಕಾನ್ಫರೆನ್ಸ್ ಮತ್ತು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ.
8:32 AM, 1 Oct
ಡಿಪಿಎಪಿ ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಜಾದ್ ಮಾತನಾಡಿ, "ಎಲ್ಲಾ ಮತದಾರರಿಗೆ ನಮ್ಮ ಮನವಿ ನಿಮ್ಮ ಕುಟುಂಬದ ಜೊತೆ ಮತಗಟ್ಟೆಗೆ ಬಂದು ಮತದಾನ ಮಾಡಿ. ನಿರುದ್ಯೋಗ ದೊಡ್ಡ ಸಮಸ್ಯೆ ಆಗಿದೆ. ಇದು ಕೇವಲ ಯುವಕರ ಸಮಸ್ಯೆಯಲ್ಲ ಸಮಾಜದ ಸಮಸ್ಯೆ. ಕಳೆದ ಹಲವು ವರ್ಷಗಳಿಂದ ಉದ್ಯೋಗ ಕಲ್ಪಿಸಲು ಯಾವುದೇ ಯೋಜನೆ ರೂಪಿಸಲಾಗಿಲ್ಲ. ಚುನಾವಣೆ ಜನರ ಸಮಸ್ಯೆ ಬಗೆಹರಿಸಲು ನಡೆಯುತ್ತದೆ. ಆದರೆ ಯಾರೂ ಸಹ ಜನರ ಸಮಸ್ಯೆಯನ್ನು ಹೇಳಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ಈಗ ಮತದಾನ ಮಾಡಿ ಸರ್ಕಾರವನ್ನು ರಚನೆ ಮಾಡಿಕೊಳ್ಳುವ ಕಾಲ ಬಂದಿದೆ" ಎಂದು ಹೇಳಿದರು.
8:43 AM, 1 Oct
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಹಂತದ ಚುನಾವಣೆ ನಡೆಯುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ 3ನೇ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದೆ. ಇಂದು ಏಳು ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
9:00 AM, 1 Oct
ಮತಗಟ್ಟೆಗಳ ಮುಂದೆ ಜನವೋ ಜನ
ಅಂತಿಮ ಹಂತದಲ್ಲಿ ಮತಗಟ್ಟೆಗಳ ಹೊರಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂತು. ಇಂದು ನಡೆಯಲಿರುವ 3ನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಜನರು ಉಧಮ್ಪುರದ ಮತಗಟ್ಟೆಯಲ್ಲಿ ಜಮಾಯಿಸಿದ್ದರು. ಯುಟಿಯ 7 ಜಿಲ್ಲೆಗಳ 40 ಕ್ಷೇತ್ರಗಳಲ್ಲಿ ಅರ್ಹ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
#WATCH | J&K: People queue up at a polling station in Udhampur to vote in the 3rd & final phase of the Assembly elections today.
Eligible voters in 40 constituencies across 7 districts of the UT are exercising their franchise today. pic.twitter.com/1mZ3Gt5k46
ಕೇಂದ್ರ ಸಚಿವ ಜಿತೇಂದ್ರ ಸಿಂಗ್, "ಪಾಕಿಸ್ತಾನದಿಂದ ಬಂದ ಎಲ್ಲಾ ನಿರಾಶ್ರಿತರು ಕಾಂಗ್ರೆಸ್ ಪಕ್ಷದ ಪರವಾಗಿಲ್ಲ. ವಿಭಜನೆಗೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂಬುದು ಜನರಿಗೆ ತಿಳಿದಿದೆ. ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನ ಸಾಮಾನ್ಯ ಜನರಿಗೆ ಅನುಕೂಲವಾಗಿಲ್ಲ. ಶ್ರೀಗರದ ರಸ್ತೆಯಲ್ಲಿ ಸಾಮಾನ್ಯ ಜನರನ್ನು ಕೇಳಿದರೆ ಅವರು 370ನೇ ವಿಧಿರದ್ದು ಸರಿಯಾದ ನಿರ್ಧಾರ ಎಂದು ಹೇಳುತ್ತಾರೆ" ಎಂದರು.
9:43 AM, 1 Oct
ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ 3ನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯ ತನಕ ಶೇ 11.60ರಷ್ಟು ಮತದಾನವಾಗಿದೆ. ಜಮ್ಮುವಿನಲ್ಲಿ ಶೇ 11.46, ಬಾರಾಮುಲ್ಲಾದಲ್ಲಿ ಶೇ 8.89, ಉದಾಮ್ಪುರ್ನಲ್ಲಿ ಶೇ 8.89, ಕುಪ್ವಾರಾದಲ್ಲಿ ಶೇ 13.09ರಷ್ಟು ಮತದಾನವಾಗಿದೆ.
10:08 AM, 1 Oct
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಹಂತದ ಮತದಾನದ ಕುರಿತು ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ನೌಶೇರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರವೀಂದರ್ ರೈನಾ, ʼಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಹಂತದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮತ ಚಲಾಯಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನತೆ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ತುಂಬುಹೃದಯದಿಂದ ಭಾಗಿಯಾಗುತ್ತಿದೆ. ಈ ಚುನಾವಣೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
10:11 AM, 1 Oct
ನಗ್ರೋಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೆಂದರ್ ಸಿಂಗ್ ರಾಣಾ ಅವರು ಜಮ್ಮುವಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
#WATCH | Jammu and Kashmir: BJP candidate from Nagrota Assembly seat, Devender Singh Rana casts his vote at a polling booth in Jammu. pic.twitter.com/jy98rMxuQC
ಮತದಾನ ಕುರಿತು ಮಾತನಾಡಿರುವ ಕಾಂಗ್ರೆಸ್ನ ರಾಹುಲ್ ಗಾಂಧಿಯವರು, ಭಾರತಕ್ಕಾಗಿ ನಿಮ್ಮ ಪ್ರತಿ ಮತವೂ ಜಮ್ಮು ಮತ್ತು ಕಾಶ್ಮೀರದ ಭವಿಷ್ಯದ ಅಡಿಪಾಯವನ್ನು ಭದ್ರಪಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಮೂರನೇ ಮತ್ತು ಕೊನೆಯ ಹಂತದ ನಡೆಯುತ್ತಿದೆ.. ನೆನಪಿರಲಿ, ಈ ಚುನಾವಣೆ ರಾಜ್ಯದ ಸ್ವಾಭಿಮಾನದ ಬಗ್ಗೆ, ರಾಜ್ಯದ ಜನರ ಹಕ್ಕುಗಳ ಬಗ್ಗೆ. ಎಲ್ಲಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮನೆಗಳಿಂದ ಹೊರಗೆ ಬಂದು ಮತ ಚಲಾಯಿಸಬೇಕು ಎಂದು ಅವರು ಕರೆ ನೀಡಿದರು.
10:31 AM, 1 Oct
ಇದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಜನರು ಉತ್ಸಾಹದಿಂದ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಜಮ್ಮು ಮತ್ತು ಜನರು ಮತ್ತು ಕಾಶ್ಮೀರವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಂಬಿಕೆಯನ್ನು ಹೊಂದಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ನಗ್ರೋಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೆಂದರ್ ಸಿಂಗ್ ಹೇಳಿದ್ದಾರೆ.
#WATCH | Jammu and Kashmir: After casting his vote, BJP candidate from Nagrota Assembly seat, Devender Singh Rana says, "It is a festival of democracy and people are enthusiastic and people are participating in it with so much enthusiasm and passion. The people of Jammu and… https://t.co/EoY2NF9V7zpic.twitter.com/grFNJd2lK8
ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಾಜಿ ಉಪ ಮುಖ್ಯಮಂತ್ರಿಗಳಾದ ಮುಜಾಫರ್ ಬೇಗ್ ಹಾಗೂ ತಾರಾ ಚಂದ್ ಚುನಾವಣಾ ಕಣದಲ್ಲಿ ಇದ್ದಾರೆ.
10:46 AM, 1 Oct
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ನಾಗ್ರೋಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂಧರ್ ಸಿಂಗ್ ರಾಣಾ ಮಾತನಾಡಿ, "ಇದು ಪ್ರಜಾಪ್ರಭುತ್ವದ ಹಬ್ಬ ಜನರು ಉತ್ಸಾಹದಿಂದಲೇ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ, ವಿಕಾಸ್ ಭಾರತದ ಕಡೆ ಅವರು ಹೆಜ್ಜೆ ಹಾಕುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ" ಎಂದರು.
11:28 AM, 1 Oct
ಪಠ್ಠಾಣ್ ಕ್ಷೇತ್ರದ ನ್ಯಾಷನಲ್ ಕಾನ್ಪರೆನ್ಸ್ ಅಭ್ಯರ್ಥಿ ರಿಯಾಜ್ ಬೇದಾರ್, "ನಾವು ಪ್ರಜಾಪ್ರಭುತ್ವದ ಪ್ರಮುಖ ಭಾಗ, ಜನರು ಮತದಾನ ಮಾಡಲು ಉತ್ಸುಕರಾಗಿದ್ದಾರೆ. ಅವರಿಗೆ ಅವರ ಸಮಸ್ಯೆ ಬಗೆಹರಿಸಲು ಅವರದ್ದೇ ಆದ ಸರ್ಕಾರ ಬೇಕಿದೆ. ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ" ಎಂದರು.
#WATCH | Pattan: National Conference candidate from Pattan Assembly constituency, Riyaz Bedar says, "...We are an important part of Indian democracy and people are very excited to vote. They want their own government that can raise the issues of the public...I will work to ensure… pic.twitter.com/1nBMPQmP3k
ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ, ನಗ್ರೋಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೆಂದರ್ ಸಿಂಗ್ ರಾಣಾ ಮಾತನಾಡಿದರು. ಇದು ಪ್ರಜಾಪ್ರಭುತ್ವದ ಹಬ್ಬವಾಗಿದೆ ಮತ್ತು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದಾರೆ. ವಿಕ್ಷಿತ್ ಭಾರತ್ನ ಈ ಯಾತ್ರೆಯಲ್ಲಿ ತಮ್ಮನ್ನು ತಾವು ಸೇರಿಸಿಕೊಳ್ಳಲು ಬಯಸುತ್ತಾರೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಪೂರ್ಣ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
12:32 PM, 1 Oct
ಜಮ್ಮು ಮತ್ತು ಕಾಶ್ಮೀರದಲ್ಲಿ 3ನೇ ಮತ್ತು ಅಂತಿಮ ಹಂತದ ಮತದಾನ ಮಂಗಳವಾರ ನಡೆಯುತ್ತಿದೆ. 40 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಚುನಾವಣಾ ಫಲಿತಾಂಶ ಅಕ್ಟೋಬರ್ 8ರಂದು ಪ್ರಕಟವಾಗಲಿದೆ.
ಜಮ್ಮು ಮತ್ತು ಕಾಶ್ಮೀರ ವರ್ಕರ್ಸ್ ಪಾರ್ಟಿ ಅಧ್ಯಕ್ಷ ಮೀರ್ ಜುನೈದ್ ಮಾತನಾಡಿ, ಪಾಕಿಸ್ತಾನದವರು ಭಯೋತ್ಪಾದಕರನ್ನು ಕಳುಹಿಸುವುದನ್ನು ನಿಲ್ಲಿಸುವವರೆಗೆ, ಜನರನ್ನು, ವೈದ್ಯರನ್ನು, ಇಂಜಿನಿಯರ್ ಅನ್ನು ಕೊಲ್ಲುವುದ ನಿಲ್ಲಿಸುವವರೆಗೂ ನಾವು ಅವರೊಂದಿಗೆ ಮಾತನಾಡುವ ಅಗತ್ಯವಿಲ್ಲ. ಈ ರಾಜಕೀಯ ಪಕ್ಷಗಳೂ ಜನರನ್ನು ಮೂರ್ಖರನ್ನಾಗಿಸುತ್ತಿವೆ. ನಾಳೆ ಅವರು ಚೀನಾದೊಂದಿಗೆ ಮಾತನಾಡಲು ಬಯಸುತ್ತೇವೆ ಎಂದರೆ ನಾವು, ಅವರೊಂದಿಗೆ ಹೇಗೆ ಮಾತನಾಡಬೇಕು. ಯೋಗ್ಯ ದೇಶದೊಂದಿಗೆ ನಾವು ಉತ್ತಮ ಸಂಬಂಧ ಹೊಂದಬೇಕು ಎಂದು ಅವರು ರಾಜತಾಂತ್ರಿಕ ಮತ್ತು ಜಮ್ಮು ಕಾಶ್ಮೀರ ಪರಿಸ್ಥಿತಿ ಉದ್ದೇಶಿಸಿ ತಿಳಿಸಿದರು.
#WATCH | Kupwara, J&K: Jammu and Kashmir Workers Party President Mir Junaid says, "...Of course, there is no need to talk to them (Pakistan) until they stop sending terrorists and killing sane people, killing our doctors, engineers. All these political parties have been fooling… pic.twitter.com/X9XfdboXHO
'10 ವರ್ಷಗಳ ನಂತರ ನಡೆಯುತ್ತಿರುವ ಚುನಾವಣೆ ಅತ್ಯಂತ ದೊಡ್ಡ ವಿಷಯ. ಈಗ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಮಗೆ ಈ ಅವಕಾಶ ಸಿಗುತ್ತಿದೆ. ನಮ್ಮ ಪಕ್ಷವು ಜನರ ಮುಂದೆ ಅಭಿಪ್ರಾಯಗಳನ್ನು ಮಂಡಿಸಲು ಪ್ರಯತ್ನಿಸಿದೆ' ಎಂದು ಬಾರಾಮುಲ್ಲಾ ಸಂಸದ ಹಾಗೂ ಅವಾಮಿ ಇತ್ತೆಹಾದ್ ಪಕ್ಷದ ನಾಯಕ ರಶೀದ್ ಇಂಜಿನಿಯರ್ ಪುತ್ರ ಅಬ್ರಾರ್ ಹೇಳಿದ್ದಾರೆ. 'ಬಿಜೆಪಿ ನಮ್ಮ ತಂದೆ ರಶೀದ್ ಅವರನ್ನು 5 ವರ್ಷಗಳ ಕಾಲ ಜೈಲಿನಲ್ಲಿಟ್ಟು ಚಿತ್ರಹಿಂಸೆ ನೀಡಿದೆ. ಹೀಗಿರುವಾಗ ನಮ್ಮನ್ನು ಬಿಜೆಪಿಯ ಬಿ ಟೀಂ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ? ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸಬೇಕು. ಏಕೆಂದರೆ ಅದು ನಮ್ಮ ಹಕ್ಕು' ಎಂದಿದ್ದಾರೆ.
1:34 PM, 1 Oct
ಜಮ್ಮು ಮತ್ತು ಕಾಶ್ಮೀರಕ್ಕೆ ದೂರದೃಷ್ಟಿಯ ಸರ್ಕಾರದ ಅಗತ್ಯವಿದೆ. ಅದು ಪ್ರದೇಶದ ಭದ್ರತೆ, ಶಾಂತಿ ಮತ್ತು ಸ್ಥಿರತೆಗಾಗಿ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಕ್ಸ್ ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
जम्मू-कश्मीर को एक ऐसी सरकार की जरूरत है, जो विजनरी भी हो और यहाँ की सुरक्षा, शांति व स्थिरता के लिए मजबूत निर्णय भी ले सके। आज यहाँ अंतिम चरण में मतदान करने वाली जनता अपनी वोट की शक्ति से एक ऐसी सरकार बनाएँ, जो जम्मू-कश्मीर को आतंकवाद, अलगाववाद, परिवारवाद और भ्रष्टाचार से दूर…
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಕಥುವಾ ಜಿಲ್ಲೆಯ ಬಾನಿ ಪ್ರದೇಶದಲ್ಲಿ ಮೊದಲ ನಾಲ್ಕು ಗಂಟೆಗಳಲ್ಲಿ 34.92 ಶೇಕಡಾ ಮತದಾನವಾಗಿದೆ. ಇದು ಮೂರನೇ ಹಂತದಲ್ಲಿ ಮುನ್ನಡೆ ಸಾಧಿಸಿದೆ. ಒಂದು ಕಾಲದಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ಭದ್ರಕೋಟೆಯಾಗಿದ್ದ ಸೋಪೋರ್ ಪ್ರದೇಶದಲ್ಲಿ ಅತ್ಯಂತ ಕಡಿಮೆ ಅಂದರೆ ಶೇಕಡಾ 17.28 ರಷ್ಟು ಮತದಾನವಾಗಿದೆ.
1:48 PM, 1 Oct
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ರದ್ದುಪಡಿಸಿತ್ತು. ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯದ ಜನರು ಮೊದಲ ಬಾರಿಗೆ ಮತದಾನ ಮಾಡಿದರು. 1957ರಲ್ಲಿ ಪಂಜಾಬ್ನಿಂದ ಕರೆತರಲಾದ ವಾಲ್ಮೀಕಿ ಸಮುದಾಯದ ಜನರಿಗೆ ಇದುವರೆಗೂ ರಾಜ್ಯದಲ್ಲಿ ಮತದಾನದ ಹಕ್ಕು ಇರಲಿಲ್ಲ.
Jammu and Kashmir Assembly Election Phase 3 polling live updates for 40 Assembly Seats Stay updated with latest news, results and Updates on OneIndia Kananda.