ISRO Baahubali: ಭಾರತೀಯ ನೌಕಾಪಡೆಗೆ ಮತ್ತಷ್ಟು ಶಕ್ತಿ ತುಂಬಿದ ಇಸ್ರೋ, ಶತ್ರುಗಳ ನಿದ್ದೆ ಕೆಡಿಸಿದ ‘ಬಾಹುಬಲಿ’
ಶ್ರೀಹರಿಕೋಟಾ: ಇಸ್ರೋ ಭಾರತೀಯರ ಪಾಲಿನ ಹೆಮ್ಮೆಯ ಸಂಸ್ಥೆಯಾಗಿದ್ದು, ಇಸ್ರೋ ಈವರೆಗೆ ಮಾಡಿದ ಸಾಧನೆಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಿಷ್ಠವಾಗಿ ಗುರುತಿಸಿಕೊಂಡು ಮಿನುಗುವಂತೆ ಮಾಡಿದೆ. ಮಂಗಳ ಗ್ರಹವೂ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಂಡು ತನ್ನ ಶಕ್ತಿ ಏನು ಎಂಬುದನ್ನು ಜಗತ್ತಿಗೇ ತೋರಿಸಿರುವ ಇಸ್ರೋ, ಚಂದ್ರನ ಮೇಲೆ ಕೂಡ ರೋವರ್ ಲ್ಯಾಂಡ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ಇದೀಗ ಭಾರತೀಯ ನೌಕಾಪಡೆಗೆ ತನ್ನದೇ ಆದ ದೊಡ್ಡ ಉಡುಗೊರೆ ನೀಡಿದೆ ಇಸ್ರೋ ಸಂಸ್ಥೆ. ಈ ಮೂಲಕ ಭಾರತದ ಶತ್ರು ದೇಶಗಳ ನಿದ್ದೆಯೇ ದಿಢೀರ್ ಹಾರಿ ಹೋಗಿದ್ದು, ನಮ್ಮ ದೇಶದ ಸೇನೆಗೆ ಮತ್ತಷ್ಟು ಬಲ ಬಂದಿದೆ.
ಹೌದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇಸ್ರೋ ಸಂಸ್ಥೆ ನಕ್ಷತ್ರದಂತೆ ಮಿನುಗುತ್ತಿದೆ. ಹೀಗೆಲ್ಲಾ ಇಸ್ರೋ ಮಾಡುತ್ತಿರುವ ಸಾಧನೆಗೆ ಜಗತ್ತೇ ಫಿದಾ ಆಗಿದ್ದು, ಮುನಷ್ಯರ ಭವಿಷ್ಯದ ದೃಷ್ಟಿಯಿಂದ ಹಲವು ಯೋಜನೆಗಳನ್ನು ನಮ್ಮ ಇಸ್ರೋ ಕೈಗೊಳ್ಳುತ್ತಿದೆ. ಇದರ ಜೊತೆಗೆ ಭಾರತದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೂಡ ರೂಪಿಸಲಾಗುತ್ತಿದೆ. ಹೀಗಿದ್ದಾಗ ಭಾರತೀಯ ನೌಕಾಪಡೆಗಾಗಿ, ಉಪಗ್ರಹ ಒಂದನ್ನ ಇದೀಗ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭಾನುವಾರ ಸಂಜೆ 5 ಗಂಟೆ 26 ನಿಮಿಷಕ್ಕೆ 'ಬಾಹುಬಲಿ' ಆಗಸಕ್ಕೆ ಚಿಮ್ಮಿತ್ತು.

'ಬಾಹುಬಲಿ' ಹೆಸರು ಬಂದಿದ್ದು ಏಕೆ?
ಸುಮಾರು 4,410 ಕೆಜಿ ತೂಕ ಇರುವ CMS-03 ಸಂವಹನ ಉಪಗ್ರಹವನ್ನ 43.5 ಮೀಟರ್ ಎತ್ತರದ LVM3-M5 ರಾಕೆಟ್ ಬಳಸಿ ಉಡಾವಣೆ ಮಾಡಲಾಗಿದೆ. ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್ ಕಡೆಗೆ ನುಗ್ಗಿದ ಉಪಗ್ರಹ ಇದೀಗ ಯಶಸ್ವಿಯಾಗಿ ತನ್ನ ಸ್ಥಾನ ತಲುಪಿದೆ. ಅಂದಹಾಗೆ ತನ್ನ ಭಾರದ ಕಾರಣಕ್ಕೆ ಈ ಸಂವಹನ ಉಪಗ್ರಹವನ್ನು 'ಬಾಹುಬಲಿ' ಎಂದು ಕರೆಯಲಾಗುತ್ತದೆ, ಭಾರತೀಯ ನೌಕಾಪಡೆಗೆ ಇದರ ಅವಶ್ಯಕತೆ ತುಂಬಾ ಇದೆ. ಅಂದಹಾಗೆ ಭಾರತೀಯ ನೌಕಾಪಡೆಗೆ ಅಂತಾನೇ ಈವರೆಗೂ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಸಂವಹನ ಉಪಗ್ರಹವೂ ಇದಾಗಿದೆ ಎಂಬುದು ಈಗಿನ ಮತ್ತೊಂದು ವಿಶೇಷ.
ಭಾರತದ ನೌಕಾಪಡೆಗೆ ಸಿಕ್ಕಿದೆ ಆನೆಬಲ!
ಸಂಪೂರ್ಣವಾಗಿ ಈ ಉಪಗ್ರಹ ಕಾರ್ಯಾಚರಣೆ ಶುರು ಮಾಡಿದ ನಂತರ ನೌಕಾಪಡೆಗೆ ಸಾಕಷ್ಟು ಅನುಕೂಲ ಆಗಲಿದೆ. ಪ್ರಮುಖವಾಗಿ GSAT-7R ಹಿಂದೂ ಮಹಾಸಾಗರದ ಮೂಲೆ ಮೂಲೆಯಲ್ಲಿ ಕೂಡ ಹದ್ದಿನ ಕಣ್ಣಿಡಲು ಇದರಿಂದ ಸಾಧ್ಯವಾಗಲಿದೆ. ಅತ್ಯಾಧುನಿಕ ಪೇಲೋಡ್ ಹೆಚ್ಚಿನ ವೇಗದ ಧ್ವನಿ, ಡೇಟಾ & ವಿಡಿಯೋ ಸಂವಹನಕ್ಕೆ ಸಹಾಯ ಮಾಡುತ್ತದೆ ಎಂಬ ನಿರೀಕ್ಷೆ ಇದೆ. ಇಸ್ರೋದ ವಿಜ್ಞಾನಿಗಳು ಭಾರತೀಯ ನೌಕಾಪಡೆಗೆ ಈ ಮೂಲಕ ದೊಡ್ಡ ಉಡುಗೊರೆಯನ್ನೇ ನೀಡಿದ್ದಾರೆ. ಹಾಗೇ ದೇಶದ ರಕ್ಷಣೆಗೆ ಇದೊಂದು ಪ್ರಮುಖ ಉಪಗ್ರಹವಾಗಲಿದ್ದು, ಭಾರತದ ಶತ್ರು ದೇಶಗಳಿಗೆ ನಡುಕ ಶುರುವಾಗಿದೆ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications