IRCTC Q3 Results : 3ನೇ ತ್ರೈಮಾಸಿಕದಲ್ಲಿ 256 ಕೋಟಿ ಗಳಿಕೆಯಿಂದ ಶೇ.22.8 ನಿವ್ವಳ ಲಾಭ ಹೆಚ್ಚಳ
ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಹಾಗೂ ಟಿಕೆಟ್ ವಿಭಾಗ ಈವರ್ಷ ಶೇ. 22.8 ರಷ್ಟು ಆದಾಯ ಗಳಿಸಿದೆ. ಒಟ್ಟು 256 ಕೋಟಿ ರೂ. ಏಕೀಕೃತ ನಿವ್ವಳ ಲಾಭ ಗಳಿಸಿದೆ.
ನವದೆಹಲಿ, ಫೆಬ್ರವರಿ 09: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಹಾಗೂ ಟಿಕೆಟ್ ವಿಭಾಗವು ಡಿಸೆಂಬರ್ ತ್ರೈಮಾಸಿಕದ ಒಟ್ಟು ನಿವ್ವಳ ಲಾಭದ ಲೆಕ್ಕ ಮಾಡಿದೆ. ಕಳೆದ ವರ್ಷಕ್ಕಿಂತ ಶೇ.22.8 ರಷ್ಟು ಆದಾಯ ಈ ವರ್ಷ ಹೆಚ್ಚು ಸಂಗ್ರಹವಾಗಿದೆ ಎಂದು ತಿಳಿಸಿದೆ.
ಹೌದು ಹಿಂದಿನ ವರ್ಷ ಇದೇ ಅವಧಿಯಲ್ಲಿ 208 ಕೋಟಿ ರೂಪಾಯಿ ನಿವ್ವಳ ಆದಾಯ ಬಂದಿದ್ದು, ಈ ಡಿಸೆಂಬರ್ ತ್ರೈಮಾಸಿಕದಲ್ಲಿ 256 ಕೋಟಿ ರೂ. ಏಕೀಕೃತ ನಿವ್ವಳ ಲಾಭ ಅಂದರೆ ಒಟ್ಟು 22.8ರಷ್ಟು ಆದಾಯ ಏರಿಕೆ ಕಂಡಿದೆ.
ಇನ್ನೂ ರೈಲ್ವೆ ಪ್ರವಾಸೋದ್ಯಮ ಕಾರ್ಯಾಚರಣೆಗಳಿಂದ ಈ ವರ್ಷ ಶೇಕಡಾ 70 ರಷ್ಟು ಹೆಚ್ಚಳ ಕಏರಿಕೆಯಾಗಿ ₹918 ಕೋಟಿಗಳಿಗೆ ತಲುಪಿದೆ, ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 540 ಕೋಟಿ ರೂಪಾಯಿ ಇತ್ತು.

ತ್ರೈಮಾಸಿಕದಲ್ಲಿ ಒಟ್ಟು ವೆಚ್ಚಗಳು ಎಲ್ಲವು ದ್ವಿಗುಣಗೊಂಡಿವೆ. ಕಳೆ ದ ವರ್ಷ ಹಿಂದಿನ ಇದೇ ಅವಧಿಯಲ್ಲಿ ರೂ.274 ಕೋಟಿಗೆ ಹೋಲಿಸಿದರೆ ಈ ವರ್ಷ ಶೇಕಡಾ 121ರಷ್ಟು ಭಾರಿ ಹೆಚ್ಚಳ ಅಂದರೆ 607 ಕೋಟಿ ರೂ.ಗೆ ಏರಿಕೆ ಆಗಿದೆ ಎಂದು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ತಿಳಿಸಿದೆ.
ನಿಗಮವು ಪ್ರತಿಯೊಂದು ಷೇರಿಗೆ 3.50 ರೂಪಾಯಿಯ ಮಧ್ಯಂತರ ಲಾಭಾಂಶ ಘೋಷಿಸಲಾಗಿದೆ. ಪಾವತಿಸಿದ ಷೇರು ಬಂಡವಾಳದ ಒಟ್ಟು ಹಣ 160 ಕೋಟಿ ರೂಪಾಯಿ, ಅಂದರೆ ಶೇಕಡಾ 175% ರಷ್ಟು ಎಂದು ತಿಳಿದು ಬಂದಿದೆ. ಕಂಪನಿಯು ಕಳೆದ ವರ್ಷದ ಆರ್ಥಿಕ ಸಾಲಿಗೆ (2022-23) ಲಾಭಾಂಶವನ್ನು ಪಾವತಿಸುವ ಉದ್ದೇಶಕ್ಕಾಗಿ 22 ಫೆಬ್ರವರಿ 2023 ಬುಧವಾರ ಅನ್ನು ದಾಖಲೆ ದಿನಾಂಕವಾಗಿ ನಿಗದಿ ಮಾಡಿದೆ.
ನಿಗಮದ (IRCTC) ಇಂಟರ್ನೆಟ್ ಟಿಕೆಟಿಂಗ್ ವ್ಯವಹಾರ ಬಿಟ್ಟು ಎಲ್ಲಾ ವಿಭಾಗಗಳಿಂದಲೂ ಅತ್ಯಧಿಕ ಆದಾಯ ಗಳಿಸಿದೆ. ಅದನ್ನು ನೋಡುವುದಾದರೆ ಡಿಸೆಂಬರ್ ತ್ರೈಮಾಸಿಕದಲ್ಲಿ 301 ಕೋಟಿ ರೂಪಾಯಿ ಆದಾಯ ಪೈಕಿ ಶೇಕಡಾ 4ರಷ್ಟು ಕುಸಿತ ಕಂಡಿದೆ. ಇದರ ಪ್ರಮಾಣ ಹಿಂದಿನ ವರ್ಷ (313 ಕೋಟಿ ರೂ.) ಉತ್ತಮವಾಗಿತ್ತು ಎನ್ನಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications