ಊಟವಿಲ್ಲ, ನೀರಿಲ್ಲ: ಚೀನಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ
ನವದೆಹಲಿ, ಜನವರಿ 30: ಊಟ, ನೀರು ಇಲ್ಲದಿರುವ ಸ್ಥಿತಿ ಚೀನಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಕಾಡುತ್ತಿದೆ.
ಹೀಗಾಗಿ ನಮ್ಮ ರಕ್ಷಿಸಿ ಇಲ್ಲಿಂದ ಭಾರತಕ್ಕೆ ಕರೆದುಕೊಂಡು ಹೋಗಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.ಚೀನಾದ ವುಹಾನ್ ನಗರಕ್ಕೆ ಹಾಕಿರುವ ಬೀಗಮುದ್ರೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ತಮ್ಮ ವಿದ್ಯಾರ್ಥಿನಿಲಯದಲ್ಲಿ ಆಹಾರ ಮತ್ತು ನೀರಿನ ಕೊರತೆ ತಲೆದೋರಿದೆ.
ಕೊರಾನಾ ವೈರಾಣು ಬಗ್ಗೆ ಭಯವಿದ್ದರೆ ಈ ಸಂಖ್ಯೆಗೆ ಕರೆ ಮಾಡಿ!
ಮಾರಕ ಕೊರೊನಾ ವೈರಸ್ ಕಾಯಿಲೆಯ ಕೇಂದ್ರಬಿಂದುವಾಗಿರುವ ವುಹಾನ್ ನಗರವು ಹಲವು ದಿನಗಳಿಂದ ಬೀಗಮುದ್ರೆಯಲ್ಲಿದೆ.ನಗರದಲ್ಲಿ ಮಾರಕ ವೈರಸ್ನ ಸೋಂಕು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು, ವಿದ್ಯಾರ್ಥಿಗಳು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.
ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಿದೆ ಹಾಗೂ ಎಲ್ಲ ಸಾಧ್ಯವಿರುವ ನೆರವನ್ನು ನೀಡುವ ಭರವಸೆಯನ್ನು ನೀಡಿದೆ.
ಬೀಗಮುದ್ರೆಯ ಹಿನ್ನೆಲೆಯಲ್ಲಿ ಅಂಗಡಿಗಳು ಮುಚ್ಚಿವೆ ಹಾಗೂ ಸಾರಿಗೆ ವ್ಯವಸ್ಥೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ತಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ವುಹಾನ್ನಿಂದ ಎಎನ್ಐ ಸುದ್ದಿ ಸಂಸ್ಥೆ ಜೊತೆ ಫೋನ್ನಲ್ಲಿ ಮಾತನಾಡಿದ ಅಸ್ಸಾಮ್ ವಿದ್ಯಾರ್ಥಿ ಗೌರವ್ ನಾಥ್ ಹೇಳಿದರು.
ವುಹಾನ್
ನಲ್ಲಿ
ಸಿಕ್ಕಿಹಾಕಿಕೊಂಡಿರುವ
ವಿದ್ಯಾರ್ಥಿಗಳು
ಅಸ್ಸಾಮ್,
ದೆಹಲಿ,
ಮಹಾರಾಷ್ಟ್ರ,
ಪಶ್ಚಿಮ
ಬಂಗಾಳ
ಹಾಗೂ
ಜಮ್ಮು
ಮತ್ತು
ಕಾಶ್ಮೀರಕ್ಕೆ
ಸೇರಿದವರು.
ನಗರದಲ್ಲಿ
ಕೊರೊನಾ
ವೈರಸ್
ಸೋಂಕು
ಕಾಡ್ಗಿಚ್ಚಿನಂತೆ
ಹರಡುತ್ತಿರುವ
ಹಿನ್ನೆಲೆಯಲ್ಲಿ,
ನಮ್ಮ
ಕೋಣೆಗಳ
ಒಳಗೇ
ಇರುವಂತೆ
ಸೂಚಿಸಲಾಗಿದೆ.
ಹಾಗಾಗಿ, ನಾವು ನಮ್ಮ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಹಾಸ್ಟೆಲ್ ನಲ್ಲೇ ಬಾಕಿಯಾಗಿದ್ದೇವೆ. ಅಗತ್ಯ ವಸ್ತುಗಳನ್ನು ಖರೀದಿಸಲು ನಮಗೆ ದಿನದಲ್ಲಿ ಕೇವಲ 2 ಗಂಟೆ ಹೊರಗೆ ಹೋಗಲು ಅವಕಾಶ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.