ಭಕ್ತರಿಗೆ ಭಾರತೀಯ ರೈಲ್ವೆಯಿಂದ ಬಿಗ್ ಗಿಫ್ಟ್! ಹೈದರಾಬಾದ್ನಿಂದ ತಿರುಪತಿ–ಅರುಣಾಚಲಂ–ಶ್ರೀರಂಗಂಗೆ ಹೊಸ ವಿಶೇಷ ರೈಲು
ಹೈದರಾಬಾದ ಹಾಗೂ ಅದರ ಸುತ್ತುಮುತ್ತಲಿನ ಭಾಗಗಳ ದೈವಭಕ್ತರಿಗೆ ದಕ್ಷಿಣ ಮಧ್ಯ ರೈಲೆಯು ಬಿಗ್ ಗಿಪ್ಟ್ ನೀಡಿದೆ. ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ತಿರುಪತಿ, ತಿರುವಣ್ಣಾಮಲೈ (ಅರುಣಾಚಲಂ) ಮತ್ತು ಶ್ರೀರಂಗಂಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಚೆರ್ಲಪಲ್ಲಿಯಿಂದ ತಿರುಚಿರಾಪಳ್ಳಿ ನಡುವೆ ವಾರದ ವಿಶೇಷ ರೈಲು ಸೇವೆಯನ್ನು ಯಶಸ್ವಿಯಾಗಿ ಆರಂಭಿಸಲಾಗಿದೆ. ಈ ಹೊಸ ರೈಲಿನ ಸೇವೆಯಿಂದಾಗಿ ಪ್ರಮುಖ ಯಾತ್ರಾ ಸ್ಥಳಗಳಿಗೆ ಧಾರ್ಮಿಕ ಪ್ರವಾಸ ಕೈಗೊಳ್ಳುವ ಭಕ್ತರ ಪ್ರಯಾಣ ಇನ್ಮುಂದೆ ಮತ್ತಷ್ಟು ಸುಲಭ ಹಾಗೂ ಸುಗಮವಾಗಲಿದೆ.
ಧಾರ್ಮಿಕ ಪ್ರವಾಸಕ್ಕೆ ಹೋಗಲು ಬಯಸುವ ಭಕ್ತರಿಗೆ ಈ ರೈಲು ಅತ್ಯಂತ ಸುಲಭ ಮತ್ತು ಅನುಕೂಲಕರ ಆಗಿದೆ. ಈ ಒಂದೇ ಪ್ರಯಾಣದ ಮೂಲಕ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ತಿರುಪತಿ, ಅರುಣಾಚಲಂ ಮತ್ತು ಶ್ರೀರಂಗಂ ಧಾಮಗಳನ್ನು ಯಾವುದೇ ಅಡೆತಡೆಯಿಲ್ಲದೆ ಅತ್ಯಂತ ಸುಗಮವಾಗಿ ದರ್ಶನ ಮಾಡಬಹುದಾಗಿದೆ.

ಚೆರ್ಲಪಲ್ಲಿ - ತಿರುಚಿರಾಪಳ್ಳಿ ವಿಶೇಷ ರೈಲು ಸಂಚಾರ ಪ್ರಾರಂಭ: ವೇಳಾಪಟ್ಟಿ ವಿವರ
ಪ್ರಯಾಣಿಕರ ಅನುಕೂಲಕ್ಕಾಗಿ ಚೆರ್ಲಪಲ್ಲಿ ಮತ್ತು ತಿರುಚಿರಾಪಳ್ಳಿ ನಡುವಿನ ವಿಶೇಷ ರೈಲು ಸೇವೆ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ಜುಲೈ 7ರಂದು ಚೆರ್ಲಪಲ್ಲಿಯಿಂದ ತಿರುಚಿರಾಪಳ್ಳಿಗೆ ತೆರಳುವ ಮೊದಲ ವಿಶೇಷ ರೈಲು ಈಗಾಗಲೇ ತನ್ನ ಸಂಚಾರವನ್ನು ಯಶಸ್ವಿಯಾಗಿ ಆರಂಭಿಸಿದೆ. ಇನ್ನು, ತಿರುಚಿರಾಪಳ್ಳಿಯಿಂದ ಚೆರ್ಲಪಲ್ಲಿಗೆ ಹಿಂದಿರುಗುವ ಮೊದಲ ರೈಲು ಸೇವೆ ಜುಲೈ 8ರಂದು (ಇಂದು) ಚಾಲನೆ ಪಡೆಯಲಿದೆ.
ರೈಲು ವೇಳಾಪಟ್ಟಿ
ರೈಲು ಸಂಖ್ಯೆ 17077 ಚೆರ್ಲಪಲ್ಲಿಯಿಂದ ತಿರುಚಿರಾಪಳ್ಳಿ ಪ್ರಯಾಣದ ವಿವರ
ಪ್ರಾರಂಭ: ಪ್ರತಿ ಮಂಗಳವಾರ ಸಂಜೆ 5:20ಕ್ಕೆ ಚೆರ್ಲಪಲ್ಲಿಯಿಂದ ಹೊರಡಲಿದೆ.
ಹಂತ 1: ಮರುದಿನ ಬೆಳಗ್ಗೆ 8:50ಕ್ಕೆ ತಿರುಪತಿ ತಲುಪಲಿದೆ.
ಹಂತ 1: ಅದೇ ದಿನ ಮಧ್ಯಾಹ್ನ 1:20ಕ್ಕೆ ತಿರುವಣ್ಣಾಮಲೈ (ಅರುಣಾಚಲಂ) ತಲುಪಲಿದೆ.
ಹಂತ 1: ಬುಧವಾರ ಸಂಜೆ 4:30ಕ್ಕೆ ಶ್ರೀರಂಗಂ ತಲುಪಲಿದೆ.
ಅಂತಿಮ ನಿಲ್ದಾಣ: ಸಂಜೆ 6:45ಕ್ಕೆ ತನ್ನ ಕೊನೆಯ ನಿಲ್ದಾಣವಾದ ತಿರುಚಿರಾಪಳ್ಳಿಯನ್ನು ತಲುಪುತ್ತದೆ.
ರೈಲು ಸಂಖ್ಯೆ 17078 (ತಿರುಚಿರಾಪಳ್ಳಿ-ಚೆರ್ಲಪಲ್ಲಿ) ವಿಶೇಷ ರೈಲಿನ ವೇಳಾಪಟ್ಟಿ
ದಿನ: ಪ್ರತಿ ಬುಧವಾರ
ಹೊರಡುವ ಸಮಯ: ರಾತ್ರಿ 9:30ಕ್ಕೆ ತಿರುಚಿರಾಪಳ್ಳಿಯಿಂದ ಹೊರಡಲಿದೆ.
ರಾತ್ರಿ 9:52ಕ್ಕೆ ಶ್ರೀರಂಗಂ ತಲುಪಲಿದೆ.
ಮರುದಿನ 1:28ಕ್ಕೆ ತಿರುವಣ್ಣಾಮಲೈ ತಲುಪಲಿದೆ.
ಬೆಳಗ್ಗೆ 7:05ಕ್ಕೆ ತಿರುಪತಿ ತಲುಪಲಿದೆ.
ರಾತ್ರಿ 10:20ಕ್ಕೆ ಚೆರ್ಲಪಲ್ಲಿ ತಲುಪಲಿದೆ.
22 ಬೋಗಿಗಳ ರೈಲು
ವಿಶೇಷ ರೈಲಿನ ಬೋಗಿಗಳ ವಿವರ ಮತ್ತು ಪ್ರಮುಖ ಆಕರ್ಷಣೆಗಳು:
ಬೋಗಿಗಳ ವಿನ್ಯಾಸ (ಒಟ್ಟು 22 ಬೋಗಿಗಳು):
ಎಸಿ ಪ್ರಯಾಣ: 3 ಸೆಕೆಂಡ್ ಎಸಿ (2AC) ಮತ್ತು 5 ಥರ್ಡ್ ಎಸಿ (3AC) ಬೋಗಿಗಳು.
ಸ್ಲೀಪರ್ ಕ್ಲಾಸ್: ದೂರದ ಪ್ರಯಾಣಕ್ಕೆ ಅನುಕೂಲಕರವಾದ 10 ಸ್ಲೀಪರ್ ಕೋಚ್ಗಳು.
ಜನರಲ್ ಕ್ಲಾಸ್: ಬಜೆಟ್ ಸ್ನೇಹಿ ಪ್ರಯಾಣಕ್ಕಾಗಿ 4 ಸಾಮಾನ್ಯ ಕೋಚ್ಗಳು.
ಭಕ್ತರಿಗೆ ಈ ರೈಲು ಏಕೆ ವಿಶೇಷ?
ನೇರ ಸಂಪರ್ಕ: ಪುಣ್ಯಕ್ಷೇತ್ರಗಳಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಭಕ್ತರ ಅಲೆದಾಟವನ್ನು ತಪ್ಪಿಸುತ್ತದೆ.
ಹೆಚ್ಚುವರಿ ಸೀಟುಗಳ ಲಭ್ಯತೆ: ಹಬ್ಬಗಳ ಸೀಸನ್ನಲ್ಲಿ ಎದುರಾಗುವ ಟಿಕೆಟ್ ರಶ್ ನಿಯಂತ್ರಿಸಲು ಇದು ಸಹಕಾರಿಯಾಗಿದೆ.
ನೆಮ್ಮದಿಯ ಪ್ರಯಾಣ: ಆರಾಮದಾಯಕ ಸೀಟುಗಳು ಮತ್ತು ಭಕ್ತರ ಅಗತ್ಯಕ್ಕೆ ತಕ್ಕ ಸೌಲಭ್ಯಗಳು ಈ ರೈಲಿನಲ್ಲಿವೆ.
ಹೈದರಾಬಾದ್ನಿಂದ ತಿರುಪತಿಗೆ ಈಗಾಗಲೇ ವಂದೇ ಭಾರತ್, ನಾರಾಯಣಾದ್ರಿ, ವೆಂಕಟಾದ್ರಿ ಹಾಗೂ ರಾಯಲಸೀಮಾ ಎಕ್ಸ್ಪ್ರೆಸ್ನಂತಹ ಹಲವಾರು ರೈಲುಗಳ ಸಂಪರ್ಕಗಳಿವೆ. ಆದರೆ, ಅರುಣಾಚಲಂಗೆ ನೇರವಾದ ರೈಲುಗಳ ಕೊರತೆಯಿಂದ ಭಕ್ತರು ಮಧ್ಯದಲ್ಲಿ ರೈಲು ಬದಲಾಯಿಸಬೇಕಾದ ಅನಿವಾರ್ಯತೆ ಇತ್ತು.
ಈ ಸಮಸ್ಯೆಗೆ ಪರಿಹಾರವಾಗಿ ಈಗ ಹೊಸದಾಗಿ ವಿಶೇಷ ರೈಲನ್ನು ಪ್ರಾರಂಭಿಸಲಾಗಿದೆ. ಈ ಹೊಸ ರೈಲಿನ ಮೂಲಕ ಭಕ್ತರು ತಿರುಪತಿ, ಅರುಣಾಚಲಂ ಮತ್ತು ಶ್ರೀರಂಗಂನಂತಹ ಮೂರು ಪ್ರಮುಖ ಪುಣ್ಯಕ್ಷೇತ್ರಗಳಿಗೆ ಯಾವುದೇ ತೊಂದರೆಯಿಲ್ಲದೆ ಒಂದೇ ರೈಲಿನಲ್ಲಿ ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಇದು ಧಾರ್ಮಿಕ ಯಾತ್ರೆ ಕೈಗೊಳ್ಳುವವರ ಯೋಜನೆಯನ್ನು ಮತ್ತಷ್ಟು ಸರಳಗೊಳಿಸಿದೆ.














Click it and Unblock the Notifications