India Airports: ಒಂದೇ ವರ್ಷದಲ್ಲಿ 1,019ಕ್ಕೂ ಹೆಚ್ಚು ಹುಸಿ ಬಾಂಬ್ ಬೆದರಿಕೆ, ಅಕ್ಟೋಬರ್ನಲ್ಲಿ ಅಧಿಕ..
ಬೆಂಗಳೂರು, ಜೂನ್ 07: ಭಾರತೀಯ ವಿಮಾನಯಾನ ಸೇವೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸೇರಿದಂತೆ ದೇಶದ ವಿವಿಧ ಏರ್ಪೋರ್ಟ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈದು ಸಂತಸದ ವಿಷಯವಾದರೂ ಆಗಾಗ ಎದುರಾಗಿ ಬಾಂಬ್ ಬೆದರಿಕೆ ಕರೆಗಳು, ಸಂದೇಶಗಳು ಅನೇಕ ವಿಮಾನಗಳ ಅಡಚರಣೆಗೆ, ಭದ್ರತೆಗೆ, ಪ್ರಯಾಣಿಕರಿಗೆ ತಲೆನೋವು ತಂದಿಡುತ್ತಿದೆ. ಭಾರತದಲ್ಲಿ ಒಂದೇ ವರ್ಷದಲ್ಲಿ 1000ಕ್ಕೂ ಹೆಚ್ಚು ಬೆದರಿಕೆ ಕರೆಗಳು ಏರ್ಪೋರ್ಟ್ಗಳಿಗೆ ಬಂದಿವೆ ಎಂದು ವರದಿ ಆಗಿದೆ.
ಭಾರತದ ನಾಗರಿಕ ವಿಮಾನಯಾನ ವಲಯವು ಒಂದೇ ವರ್ಷದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಸ್ವೀಕರಿಸಿದೆ. 2024 ರಲ್ಲಿ 1,019 ಸುಳ್ಳು ಬಾಂಬ್ ಬ್ಲಾಸ್ಟ್ ಕರೆಗಳು ಅನೇಕ ವಿಮಾನ ನಿಲ್ದಾಣಗಳಿಗೆ ಬಂದಿವೆ. ಅದಕ್ಕೂ ಹಿಂದಿನ ಆರು ವರ್ಷಗಳಲ್ಲಿ ಕೇವಲ 330 ಹಸಿ ಬಾಂಬ್ ಕರೆಗಳು ಬಂದಿದ್ದವು. ಇದೀಗ ಒಂದೇ ವರ್ಷ ಅದರ ದುಪ್ಪಟ್ಟು ಕರೆಗಳು ಬಂದಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಇದರಲ್ಲಿ ಬಹುತೇಕ ಬಾಂಬ್ ಬೆದರಿಕೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಿಂದ ಅನಾಮಧೇಯ ಪೋಸ್ಟ್ಗಳಿಂದ ಬಂದಿವೆ. ಈ ಹುಸಿಬಾಂಬ್ ಬೆದರಿಕೆಯಿಂದ ನಿರಂತರವಾಗಿ ವಿಮಾನಯಾನ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.

2024ರಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 687 ಬೆದರಿಕೆಗಳು ಏರ್ಪೋರ್ಟ್ಗೆ ಬಂದಿವೆ. ಈ ತಿಂಗಳು ಸಾಕಷ್ಟು ವಿಮಾನಯಾನಗಳ ಅಡಚರಣೆಗೆ ಕಾರಣವಾಯಿತು ಎಂದು ವಾಯುಯಾನ ಭದ್ರತಾ ಸಂಸ್ಥೆಗಳ ಆಂತರಿಕ ವರದಿ ತಿಳಿಸಿದೆ. ಇನ್ನು ಅದೇ ವರ್ಷದಲ್ಲಿ ಜೂನ್ ತಿಂಗಳಲ್ಲಿ 96, ಏಪ್ರಿಲ್ನಲ್ಲಿ 57 ಬೆದರಿಕೆ ಕರೆಗಳು/ಸಂದೇಶಗಳನ್ನು ಏರ್ಪೋರ್ಟ್ ಸಿಬ್ಬಂದಿ ಸ್ವೀಕರಿಸಿದ್ದಾರೆ.
ಇನ್ನೂ ಎಲ್ಲ ಪ್ರಕರಣಗಳಲ್ಲಿ 611 ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ, 281 ಹುಸಿಬಾಂಬ್ ಬೆದರಿಕೆ ಇಮೇಲ್ ಮೂಲಕ ಒಂದಷ್ಟು ಪ್ರಮಾಣ ಬೆದರಿಕೆಗಳು ಪಠ್ಯ, ಧ್ವನಿಮೇಲ್, ಕೈಬರಹದ ಟಿಪ್ಪಣಿಗಳು ಮತ್ತು ಫೋನ್ ಕರೆಗಳ ಮೂಲಕ ಬಂದಿವೆ. ಈ ಬೆದರಿಕೆಗಳಿಂದ 600 ಕ್ಕೂ ಹೆಚ್ಚು ದೇಶೀಯ ಮತ್ತು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬಂದಿವೆ. ಈ ಬೆಳವಣಿಗೆಯಿಂದ ಒಂದೇ ವರ್ಷದಲ್ಲಿ ಒಟ್ಟು ವಿಮಾನಯಾನ ಸಂಸ್ಥೆಗಳಿಗೆ ಆಗಿದ್ದು ಬರೋಬ್ಬರಿ 3 ಕೋಟಿ ರೂಪಾಯಿ ನಷ್ಟ ಎಂದು ಸಂಸ್ಥೆ ತಿಳಿಸಿದೆ.
ನಿರಂತರ ಸಾವಿರಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದ ಬಳಿಕ ಕಳೆದ ವರ್ಷಾಂತ್ಯಕ್ಕೆ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ತನ್ನ ಮಾರ್ಗಸೂಚಿಗಳಲ್ಲಿ ಗಮನಾರ್ಹ ಬದಲಾವಣೆ ಮಾಡಿತು. ಸೂಕ್ತ ಭದ್ರತಾ ಕ್ರಮಗಳನ್ನು ಜರುಗಿಸಿತು. ಬಾಂಬ್ ಬೆದರಿಕೆ ಬಂದ ಕೂಡಲೇ ಅದಕ್ಕಾಗಿ ಇರುವ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ (BTAC) ವಿವಿಧ ಹಂತಗಳಲ್ಲಿ ಪರಿಶೀಲಿಸಿ, ಅತ್ಯಾಧುನಿಕ ವಿಧಾನ ಬಳಸುತ್ತದೆ. ಪ್ರಯಾಣಿಕರಲ್ಲಿನ ಆತಂಕ ಹೋಗಲಾಡಿಸುವ ಕೆಲಸ ಮಾಡುತ್ತದೆ.
ಇಂತಹ ಬೆದರಿಕೆಗಳಿಂದ ವಾಯುಯಾನ ಉದ್ಯಮಕ್ಕೆ ಅಡಚರಣೆ, ತೊಂದರೆ, ನಷ್ಟ ಮಾತ್ರವಲ್ಲದೇ ಭದ್ರತ್ತೆ ಒತ್ತಡ ಉಂಟಾಗುತ್ತದೆ. ವಿದೇಶದಲ್ಲಿ ದೇಶದ ಸ್ಥಾನಮಾನ ಮತ್ತು ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತವೆ ಎಂದು ವಿಶ್ಲೇಷಿಸಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications