Amrit Bharat-Vande Bharat Express: ಹೊಸ ರೈಲುಗಳಲ್ಲಿ ಸುಧಾರಿತ ಅರೆ ಸಂಯೋಜಕ ವ್ಯವಸ್ಥೆ: ರೈಲ್ವೆ ಇಲಾಖೆ
ಬೆಂಗಳೂರು, ಮಾರ್ಚ್ 10: ಭಾರತೀಯ ರೈಲ್ವೆ ಸೇವೆಯಲ್ಲಿ ಈ 'ಅಮೃತ್ ಭಾರತ್ ರೈಲು' ಹಾಗೂ 'ವಂದೇ ಭಾರತ್ ಎಕ್ಸ್ಪ್ರೆಸ್ ರೈಲು' ಸೇವೆಗಳ ಪರಿಚಯವು ಹೊಸ ಕ್ರಾಂತಿ ಹುಟ್ಟು ಹಾಕಿದೆ. ಪ್ರಯಾಣಿಕರಿಗೆ ಇಷ್ಟವಾಗುವ ರೀತಿಯಲ್ಲಿ ಆರಾಮದಾಯಕ ಸೇವೆ ನೀಡುತ್ತಿವೆ. ಇವುಗಳ ಉತ್ಪಾದಕ ಕಂಪನಿಯಾದ ರೈಲು ಕೋಚ್ ಫ್ಯಾಕ್ಟರಿ (RCF) ಸದ್ಯ ಅರೆ-ಹೈ-ಸ್ಪೀಡ್ ರೈಲು ಉತ್ಪಾದನೆ ಜೊತೆಗೆ ಬೋಗಿ ಸಂಯೋಜನೆಗೆ ಸ್ವಯಂಚಾಲಿತ ಸಂಯೋಜಕ ಅಭಿವೃದ್ಧಿಪಡಿಸುತ್ತಿದೆ.
RCF ಸ್ವಯಂಚಾಲಿತ ಸಂಯೋಜಕ ಎರಡು ರೈಲು ಬೋಗಿಗಳ ಮಧ್ಯೆ ಮಾನವ ಹಸ್ತಚಾಲಿತ ಅಲ್ಲದೇ ಆಟೋಮ್ಯಾಟಿಕ್ ಬೋಗಿ ಜೋಡಣೆ ತಂತ್ರಜ್ಞಾನ ಆಧಾರದಲ್ಲಿ ಅಭಿವೃಪಡಿಸುತ್ತಿದೆ. ಇದರಿಂದ ಮಾನವನ ಅಗತ್ಯ ಇರುವುದಿಲ್ಲ. ಈವರೆಗೆ ಒಂದು ಬೋಗಿನ್ನು ಮತ್ತೊಂದು ಭೋಗಿಗೆ ಅಳವಡಿಸಲು ವ್ಯಕ್ತಿಯ ಅಗತ್ಯತೆ ಇದೆ. ಈ ಸಂಯೋಜನೆ ಅಭಿವೃದ್ಧಿ ಯಶಸ್ವಿ ಬಳಿಕ ಎಲ್ಲವು ಆಟೋಮ್ಯಾಟಿಕ್ ಆಗಲಿದೆ ಎಂದು ಕಂಪನಿ ತಿಳಿಸಿದೆ.

ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳ ಉತ್ಪಾದನೆಯನ್ನು ರೈಲ್ವೆ ಇಲಾಖೆ ಹೆಚ್ಚಿಸಿದ್ದು, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಹಾಗೂ ರಾಷ್ಟ್ರೀಯ ಸಾರಿಗೆ ಸಂಸ್ಥೆಯಾದ ರೈಲು ಕೋಚ್ ಫ್ಯಾಕ್ಟರಿ (RCF) ಗಳಲ್ಲಿ ಸೆಮಿ ಹೈ ಸ್ಪೀಡ್ ರೈಲುಗಳ ತಯಾರಿಕೆ ನಡೆಯುತ್ತಿದೆ. ಇದೇ ಕಂಪನಿಗಳು ಬೋಗಿ ಜೋಡಣೆಗೆ ಹೊಸ ಸಂಯೋಜಕ ಅಭಿವೃದ್ಧಿ ಮಾಡುತ್ತಿವೆ ಎಂದು 'ಇಟಿ ಇನ್ಫ್ರಾ.ಕಾಮ್' ವರದಿ ಮಾಡಿದೆ.
50 ಹೊಸ ಅಮೃತ್ ಭಾರತ್ ರೈಲು ಶೀಘ್ರವೇ ಹಳಿಗೆ!
ಪ್ರಯಾಣಿಕರಿಗೆ ಹೊಸ ಹೊಸ ರೈಲು ಪರಿಚಯಿಸುತ್ತಿರುವ ರೈಲ್ವೆ ಇಲಾಖೆ ಒಟ್ಟಿಗೆ 50 ಅಮೃತ್ ಭಾರತ್ ರೈಲುಗಳನ್ನು ತಯಾರಿಸುತ್ತಿದೆ. ಕೆಲವೇ ವರ್ಷಗಳಲ್ಲಿ ಆ ಎಲ್ಲ ರೈಲುಗಳು ಹಳಿಗೆ ಇಳಿಯಲಿವೆ. ರೈಲ್ವೆ ಜಾಲ-ರೈಲು ಸಾರಿಗೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಒಯ್ಯುವ ಗುರಿ ಇಲಾಖೆ ಹೊಂದಿದೆ. ಈ ವಂದೇ ಭಾರತ್ ಮತ್ತು ಅಮೃತ್ ಭಾರತ್ ಎರಡು ರೈಲುಗಳು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಭಾಗವಾಗಿವೆ.
ಹೊಸ ರೈಲುಗಳ ತೂಕದಲ್ಲಿ ಕಡಿತ
ವಂದೇ ಭಾರತ್ ಎಕ್ಸ್ಪ್ರೆಸ್ ಸ್ಲೀಪರ್ ರೈಲು ಇನ್ನೇನು ಕೆಲವೇ ದಿನಗಳ್ಲಿ ಸೇವೆ ಇಳಿಯಲಿದೆ. ಭವಿಷ್ಯದಲ್ಲಿ ವಂದೇ ಭಾರತ್ನ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ, ಸುಧಾರಿತ ತಂತ್ರಜ್ಞಾನೊಂದಿಗೆ ಟ್ರ್ಯಾಕ್ಗೆ ಇಳಿಯಲಿದೆ. ಆರಂಭದಲ್ಲಿ ಬಂಧಿದ್ದ ವಂದೇ ಭಾರತ್ ರೈಲುಗಳು 430 ಟನ್ ಇದ್ದು, ಹೊಸ ರೈಲುಗಳ ತೂಕ ಇಳಿಕೆ ಮಾಡಿದ್ದು, ಅವರು 392 ಟನ್ ತೂಕ ಹೊಂದಿರಲಿವೆ.

ಅಮೃತ್ ಭಾರತ್ ರೈಲು 2.0 ಆವೃತ್ತಿಯು ಸಹ ಅನೇಕ ವೈಶಿಷ್ಟ್ಯಗಳಿಂದ ಕೂಡಿವೆ. ನವೀಮ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ತಯಾರಿಸಲಾಗಿದೆ. ಈ ರೈಲುಗಳು ಅರೆ-ಸ್ವಯಂಚಾಲಿತ ಸಂಯೋಜಕಗಳನ್ನು ಸಹ ಹೊಂದಿರುತ್ತದೆ ಎಂದು ಇಲಾಖೆ ಮೂಲಗಲು ಮಾಹಿತಿ ನೀಡಿವೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ












Click it and Unblock the Notifications